12:59 AM Thursday20 - August 2026
ಬ್ರೇಕಿಂಗ್ ನ್ಯೂಸ್
ಉಡುಪಿ | ಬಾಳೆಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಕೆ: ದಾಸ್ತಾನು ಕೇಂದ್ರಗಳ ಮೇಲೆ ಎಸಿ… ಹನೂರು ಶೂಟೌಟ್ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್​​: ಅಚ್ಚರಿಯ ಮಾಹಿತಿ ಬಹಿರಂಗ ತಾಕತ್ತಿದ್ರೆ ಸಂಘದ ಕಚೇರಿಯಲ್ಲಿ ರಾಷ್ಟ್ರಗೀತೆ ಹಾಡಲಿ: ಆರ್‌ಎಸ್‌ಎಸ್, ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ.… ವಿಜಯನಗರ: ಒಂದೇ ಕುಟುಂಬದ ಮೂವರು ಯುವಕರು ನೀರುಪಾಲು ದಾವಣಗೆರೆ: ಮಹಿಳೆಯ 9 ತಿಂಗಳ ಕೆಮ್ಮಿನ ರಹಸ್ಯ ಬಯಲಿಗೆಳೆದ ಆದಿಚುಂಚನಗಿರಿ ಆಸ್ಪತ್ರೆ ವೈದ್ಯರು ಕೊಡಗಿನಲ್ಲಿ ಮತ್ತೆ ಕಾಡಾನೆ ದಾಳಿ: ಕಾರ್ಮಿಕ ಬಲಿ; ಮತ್ತೋರ್ವ ಗಂಭೀರ ಗಾಯ ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್…

ಇತ್ತೀಚಿನ ಸುದ್ದಿ

ರಸ್ತೆಯಲ್ಲೇ ಹರಿಯುವ ಮಳೆ ನೀರು: ಅವೈಜ್ಞಾನಿಕ ಕಾಮಗಾರಿ ವಿರುದ್ಧ ಹಾರೆ ಹಿಡಿದು ತೋಡು ಮಾಡಿಕೊಟ್ಟ ಪುತ್ತೂರು ಶಾಸಕ ಅಶೋಕ್ ರೈ!

15/06/2025, 20:00

ಪುತ್ತೂರು(reporterkarnataka.com): ಪುತ್ತೂರು ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಮಳೆಗಾಲದಲ್ಲಿ ಉಂಟಾಗುತ್ತಿರುವ ನೀರು ನಿಲ್ಲುವ ಸಮಸ್ಯೆ, ಹಳ್ಳ-ಮೋರಿಯ ತೊಂದರೆ, ರಸ್ತೆಗಳ ಹಾಳುಸ್ಥಿತಿ ಮತ್ತು ವಿಳಂಬದ ಕಾಮಗಾರಿಗಳು ಜನರಲ್ಲಿ ಆಕ್ರೋಶ ಹುಟ್ಟಿಸುತ್ತಿವೆ. ಲಕ್ಷ ಲಕ್ಷ ಸಂಬಳ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಸ್ಪಂದಿಸದಂತಾಗಿರುವ ಸ್ಥಿತಿಯಲ್ಲಿ, ರಾಜ್ಯದ ಸರಕಾರದ ಶಾಸಕರೇ ಕಾರ್ಯರೂಪದಲ್ಲಿ ಇಳಿದು ಕೆಲಸ ಮಾಡಬೇಕಾದ ಅಗತ್ಯ ಉಂಟಾಗಿದೆ.


ಇದಕ್ಕೆ ಸ್ಪಷ್ಟ ಉದಾಹರಣೆ ಪುತ್ತೂರಿನ ಶಾಸಕ ಅಶೋಕ್ ರೈ ಮಳೆ ನೀರು ಹೋಗಲು ದಾರಿ ಕಲ್ಪಿಸುವ ಕೆಲಸವನ್ನು ಸ್ವತಃ ಕೈಹಿಡಿದು, ಕಾರ್ಮಿಕನಂತೆ ಅವೈಜ್ಞಾನಿಕ ರಸ್ತೆಗಳ ಕಾಮಗಾರಿ ಕಾರ್ಯದ ವಿರುದ್ದ ತಾನೆ ಪಿಕ್ಕಾಸು ಹಿಡಿದು ಕೆಲಸಕ್ಕೆ ಇಳಿದಿದ್ದಾರೆ. ಇದೊಂದು ರಾಜಕೀಯ ಪ್ರತಿಭಟನೆ ಮಾತ್ರವಲ್ಲ; ಇದು ಸತ್ತಿರುವ ಅಧಿಕಾರ ವ್ಯವಸ್ಥೆಯ ವಿರುದ್ಧ ಪಟ್ಟು ಹಿಡಿದಿರುವ ಹೋರಾಟವಾಗಿದೆ.

*ಪ್ರಶ್ನೆಗೆ ಒಳಪಡುವುದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅವರೆಲ್ಲಿ ?*

ಮಳೆಗಾಲದ ಮುನ್ನೆಚ್ಚರಿಕೆ, ಮುಂಜಾಗ್ರತಾ ಕ್ರಮಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳು ಏನು ಮಾಡಿದ್ದಾರೆ?

*ಜಿಲ್ಲಾಡಳಿತ ಜಿಲ್ಲಾಧಿಕಾರಿ ಏಕೆ ಸುಮ್ಮನಾಗಿದ್ದಾರೆ?*

*ಜಿಲ್ಲಾಧಿಕಾರಿಗಳು, ಜಿಳ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು , ಜಿಲ್ಲಾಡಳಿತದ ಅಧಿಕಾರಿಗಳು ಯಾವ ಮಟ್ಟಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?*

ಜನಪ್ರತಿನಿಧಿಗಳು ರಸ್ತೆಗೆ ಇಳಿಯಬೇಕಾದರೆ, ವಿದೇಶಿ ವಾಹನಗಳಲ್ಲಿ ಓಡಾಡುವ ಸಚಿವರು ಹಾಗೂ ಅಧಿಕಾರಿಗಳು ಎ.ಸಿ. ರೂಮಿನಿಂದ ಹೊರಗೆ ಬರಬೇಕಾದ ಅಗತ್ಯ ಎಷ್ಟಿದೆ ಎಂಬುದನ್ನು ಜನತೆ ಈಗ ಗಟ್ಟಿಯಾಗಿ ಕೇಳುತ್ತಿದ್ದಾರೆ.

ಜವಾಬ್ದಾರಿಯ ಯುಗದಲ್ಲಿ ನಾವು ಬದುಕುತ್ತಿದ್ದರೆ, ಅಧಿಕಾರಿಗಳಿಂದ ಕಾರ್ಯಕ್ಷಮತೆ ನಿರೀಕ್ಷಿಸುವುದು ಜನರ ಹಕ್ಕು. ಪುತ್ತೂರಿನ ಜನತೆ ಈಗ ಎಚ್ಚರಕ್ಕೆ ಬಂದಿದ್ದಾರೆ. ಅಧಿಕಾರಿಗಳು ಕಾರ್ಯನಿರತವಾಗದಿದ್ದರೆ, ಜನತೆಯೇ ರಸ್ತೆಗಿಳಿದು ಅವರನ್ನು ಹೊರಗೆ ಕರೆತರುತ್ತಾರೆ ಎಂಬ ಎಚ್ಚರಿಕೆಯ ಸಂದೇಶ ಈಗ ರಾಜ್ಯವ್ಯಾಪಿಯಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು