5:45 PM Wednesday17 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ರಸ್ತೆಯಲ್ಲೇ ಹರಿಯುವ ಮಳೆ ನೀರು: ಅವೈಜ್ಞಾನಿಕ ಕಾಮಗಾರಿ ವಿರುದ್ಧ ಹಾರೆ ಹಿಡಿದು ತೋಡು ಮಾಡಿಕೊಟ್ಟ ಪುತ್ತೂರು ಶಾಸಕ ಅಶೋಕ್ ರೈ!

15/06/2025, 20:00

ಪುತ್ತೂರು(reporterkarnataka.com): ಪುತ್ತೂರು ತಾಲ್ಲೂಕಿನಲ್ಲಿ ವರ್ಷದಿಂದ ವರ್ಷಕ್ಕೆ ಮಳೆಗಾಲದಲ್ಲಿ ಉಂಟಾಗುತ್ತಿರುವ ನೀರು ನಿಲ್ಲುವ ಸಮಸ್ಯೆ, ಹಳ್ಳ-ಮೋರಿಯ ತೊಂದರೆ, ರಸ್ತೆಗಳ ಹಾಳುಸ್ಥಿತಿ ಮತ್ತು ವಿಳಂಬದ ಕಾಮಗಾರಿಗಳು ಜನರಲ್ಲಿ ಆಕ್ರೋಶ ಹುಟ್ಟಿಸುತ್ತಿವೆ. ಲಕ್ಷ ಲಕ್ಷ ಸಂಬಳ ಪಡೆಯುವ ಅಧಿಕಾರಿಗಳು ತಮ್ಮ ಕರ್ತವ್ಯಕ್ಕೆ ಸ್ಪಂದಿಸದಂತಾಗಿರುವ ಸ್ಥಿತಿಯಲ್ಲಿ, ರಾಜ್ಯದ ಸರಕಾರದ ಶಾಸಕರೇ ಕಾರ್ಯರೂಪದಲ್ಲಿ ಇಳಿದು ಕೆಲಸ ಮಾಡಬೇಕಾದ ಅಗತ್ಯ ಉಂಟಾಗಿದೆ.


ಇದಕ್ಕೆ ಸ್ಪಷ್ಟ ಉದಾಹರಣೆ ಪುತ್ತೂರಿನ ಶಾಸಕ ಅಶೋಕ್ ರೈ ಮಳೆ ನೀರು ಹೋಗಲು ದಾರಿ ಕಲ್ಪಿಸುವ ಕೆಲಸವನ್ನು ಸ್ವತಃ ಕೈಹಿಡಿದು, ಕಾರ್ಮಿಕನಂತೆ ಅವೈಜ್ಞಾನಿಕ ರಸ್ತೆಗಳ ಕಾಮಗಾರಿ ಕಾರ್ಯದ ವಿರುದ್ದ ತಾನೆ ಪಿಕ್ಕಾಸು ಹಿಡಿದು ಕೆಲಸಕ್ಕೆ ಇಳಿದಿದ್ದಾರೆ. ಇದೊಂದು ರಾಜಕೀಯ ಪ್ರತಿಭಟನೆ ಮಾತ್ರವಲ್ಲ; ಇದು ಸತ್ತಿರುವ ಅಧಿಕಾರ ವ್ಯವಸ್ಥೆಯ ವಿರುದ್ಧ ಪಟ್ಟು ಹಿಡಿದಿರುವ ಹೋರಾಟವಾಗಿದೆ.

*ಪ್ರಶ್ನೆಗೆ ಒಳಪಡುವುದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಅವರೆಲ್ಲಿ ?*

ಮಳೆಗಾಲದ ಮುನ್ನೆಚ್ಚರಿಕೆ, ಮುಂಜಾಗ್ರತಾ ಕ್ರಮಗಳ ಜವಾಬ್ದಾರಿ ಹೊತ್ತ ಅಧಿಕಾರಿಗಳು ಏನು ಮಾಡಿದ್ದಾರೆ?

*ಜಿಲ್ಲಾಡಳಿತ ಜಿಲ್ಲಾಧಿಕಾರಿ ಏಕೆ ಸುಮ್ಮನಾಗಿದ್ದಾರೆ?*

*ಜಿಲ್ಲಾಧಿಕಾರಿಗಳು, ಜಿಳ ಜಿಲ್ಲಾ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು , ಜಿಲ್ಲಾಡಳಿತದ ಅಧಿಕಾರಿಗಳು ಯಾವ ಮಟ್ಟಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ?*

ಜನಪ್ರತಿನಿಧಿಗಳು ರಸ್ತೆಗೆ ಇಳಿಯಬೇಕಾದರೆ, ವಿದೇಶಿ ವಾಹನಗಳಲ್ಲಿ ಓಡಾಡುವ ಸಚಿವರು ಹಾಗೂ ಅಧಿಕಾರಿಗಳು ಎ.ಸಿ. ರೂಮಿನಿಂದ ಹೊರಗೆ ಬರಬೇಕಾದ ಅಗತ್ಯ ಎಷ್ಟಿದೆ ಎಂಬುದನ್ನು ಜನತೆ ಈಗ ಗಟ್ಟಿಯಾಗಿ ಕೇಳುತ್ತಿದ್ದಾರೆ.

ಜವಾಬ್ದಾರಿಯ ಯುಗದಲ್ಲಿ ನಾವು ಬದುಕುತ್ತಿದ್ದರೆ, ಅಧಿಕಾರಿಗಳಿಂದ ಕಾರ್ಯಕ್ಷಮತೆ ನಿರೀಕ್ಷಿಸುವುದು ಜನರ ಹಕ್ಕು. ಪುತ್ತೂರಿನ ಜನತೆ ಈಗ ಎಚ್ಚರಕ್ಕೆ ಬಂದಿದ್ದಾರೆ. ಅಧಿಕಾರಿಗಳು ಕಾರ್ಯನಿರತವಾಗದಿದ್ದರೆ, ಜನತೆಯೇ ರಸ್ತೆಗಿಳಿದು ಅವರನ್ನು ಹೊರಗೆ ಕರೆತರುತ್ತಾರೆ ಎಂಬ ಎಚ್ಚರಿಕೆಯ ಸಂದೇಶ ಈಗ ರಾಜ್ಯವ್ಯಾಪಿಯಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು