7:25 AM Wednesday4 - June 2025
ಬ್ರೇಕಿಂಗ್ ನ್ಯೂಸ್
Chikkamagaluru | ಕೋರ್ಟ್ ಆದೇಶ: ಅರಣ್ಯ ಇಲಾಖೆಯಿಂದ 43 ಎಕರೆ ಒತ್ತುವರಿ ಭೂಮಿ… 150 ವರ್ಷದ ಬಳಿಕ ಬೆಂಗಳೂರಿನ ಮಾದಪ್ಪನಹಳ್ಳಿಯಲ್ಲಿ ಮತ್ತೊಂದು ಬೃಹತ್ ಉದ್ಯಾನ: 154 ಎಕರೆ… ಎರಡು ಜಿಲ್ಲೆಗಳ ರೈತರ ಸಭೆ ಕರೆದು ಚರ್ಚಿಸಿ, ಪ್ರಕರಣ ವಾಪಸ್‌ ಪಡೆಯಿರಿ: ಪ್ರತಿಪಕ್ಷ… ಪ್ರಧಾನಿ ಮೋದಿ ಸಂಕಲ್ಪದಂತೆ ದೇಶಿಯ ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆಗೆ ಕೇಂದ್ರದಿಂದ ಬೃಹತ್‌ ಯೋಜನೆ:… ಕಡೂರು: ಮನೆ ಮುಂದೆ ನಿಲ್ಲಿಸಿದ್ದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರ ಕಾರಿನ… Chikkamagaluru | ಜಯಪುರ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ಪಿಕಪ್; ಇಬ್ಬರು… ರಾಜ್ಯದಲ್ಲಿ ಹುಕ್ಕಾ ಬಾರ್ ಗಳ ನಿಷೇಧಕ್ಕೆ ರಾಷ್ಟ್ರಪತಿ ಅಂಕಿತ: ತಂಬಾಕು ಉತ್ಪನ್ನ ಖರೀದಿ… ತುಮಕೂರು ಹೇಮಾವತಿ ನದಿ ಕೆನಾಲ್ ಯೋಜನೆ ಸಮಸ್ಯೆ ಬಗೆಹರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಸಾರ್ವಜನಿಕ ಸ್ಥಳಗಳಲ್ಲಿ ಹೊಗೆ ರಹಿತ ತಂಬಾಕು ಪದಾರ್ಥಗಳ ಬಳಕೆ ನಿಷೇಧ: ಸರಕಾರದ ಅಧಿಸೂಚನೆ Koppala | ಮಾಹಿತಿ ಆಯೋಗವನ್ನು ಜನರ ಬಳಿ ಕೊಂಡೊಯ್ಯುವ ಚಿಂತನೆ: ರುದ್ರಣ್ಣ ಹರ್ತಿಕೋಟೆ

ಇತ್ತೀಚಿನ ಸುದ್ದಿ

ಅಹಲ್ಯಾಬಾಯಿ ಹೋಳ್ಕರ್ ಅಖಂಡ ರಾಷ್ಟ್ರ ತಪಸ್ವಿನಿ: ಲೇಖಕಿ ಮೇಘಾ ಪ್ರಮೋದ್

01/06/2025, 15:18

ಬೆಂಗಳೂರು(reporterkarnataka.com): ಲೋಕಮಾತೆ ಅಹಲ್ಯಾಬಾಯಿ ಹೋಳ್ಕರ್ ಅವರು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ರಾಷ್ಟ್ರದ ಅಖಂಡತೆಯನ್ನು ನಿರ್ಮಿಸುವುದರಲ್ಲಿ ಪಾತ್ರವಹಿಸಿದ ಅಖಂಡ ರಾಷ್ಟ್ರ ತಪಸ್ವಿನಿ ಎಂದು ಲೇಖಕಿ ಮೇಘಾ ಪ್ರಮೋದ್ ಹೇಳಿದರು.
ಬಸವನಗುಡಿಯ ಅಬಲಾಶ್ರಮದಲ್ಲಿ ನಡೆದ ಮಂಥನ ಶಂಕರಪುರ ವತಿಯಿಂದ ‘ಅಖಂಡ ರಾಷ್ಟ್ರ ತಪಸ್ವಿನಿ ಅಹಲ್ಯಾಬಾಯಿ ಹೋಳ್ಕರ್’ ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಪುನರುತ್ಥಾನಕ್ಕಾಗಿ ಮಹತ್ವದ ಕೊಡುಗೆ ನೀಡಿದ ಅಹಲ್ಯಾಬಾಯಿ ಹೋಳ್ಕರ್ ಅವರ ಕುರಿತು ನಮ್ಮ ಪಠ್ಯಪುಸ್ತಕಗಳು ಕಡೆಗಣಿಸಿವೆ. ಆದರೆ ರಾಷ್ಟ್ರದ ಸರ್ವಾಂಗೀಣ ಉನ್ನತಿಗಾಗಿ ಹಲವು ಮಜಲುಗಳಲ್ಲಿ ಕೊಡುಗೆ ನೀಡಿದ ದಕ್ಷ ಆಡಳಿತಗಾರ್ತಿ, ರಾಜನೀತಿತಜ್ಞೆ, ಲೋಕಮಾತೆ, ಪುಣ್ಯಶ್ಲೋಕಿ ಅಹಲ್ಯಾಬಾಯಿ ಹೋಳ್ಕರ್ ಎಂದರು.


ಅಹಲ್ಯಾ ಬಾಯಿ ಹೋಳ್ಕರ್ ಅವರ ಆಡಳಿತದ ಅವಧಿಯಲ್ಲಿ ಬ್ರಿಟಿಷರಾದಿಯಾಗಿ, ನಾಡಿನೊಳಗಿನ ಅನೇಕ ಮತಾಂಧರೂ ತಮ್ಮ ರಾಜಕೀಯ ಅಸ್ತಿತ್ವವನ್ನು ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದರು.‌ ಆದರೆ ಚಾಣಾಕ್ಷ ಅಹಲ್ಯಾ ಬಾಯಿ ಹೋಳ್ಕರ್ ಅವರಿಗೆ ಶತ್ರುಬೋಧೆ ಬಹಳ ಚೆನ್ನಾಗಿತ್ತು. ಟಿಪ್ಪುವನ್ನು ನಂಬಿಕೆಗೆ ಅನರ್ಹನಾದ ವ್ಯಕ್ತಿ ಎಂದೂ, ಬ್ರಿಟಿಷರ ಕುತಂತ್ರದ ಬಗ್ಗೆ ಎಚ್ಚರಿಕೆ ವಹಿಸಬೇಕೆಂದೂ ತಿಳಿಸಿದ್ದರು ಎಂದು ನುಡಿದರು.
ಅಂದಿನ ಕಾಲದಲ್ಲೇ ಮಹಿಳೆಯರ ಉತ್ಕೃಷ್ಟ ಜೀವನಕ್ಕಾಗಿ ಬಾಲ್ಯ ವಿವಾಹ ರದ್ಧತಿ, ಮಹಿಳಾ ಸೇನೆ ಮತ್ತು ಅದರಲ್ಲಿ ವಿಧವೆಯರ ಸಹಭಾಗಿತ್ವ, ಗುಡಿ ಕೈಗಾರಿಕೆಗಳಿಗೆ ಮಹತ್ವ, ಮಾಹೇಶ್ವರಿ ಸೀರೆಗಳ ತಯಾರಿಕೆ ಮುಂತಾದವುಗಳಿಗೆ ಪ್ರೋತ್ಸಾಹ ನೀಡಿದರು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರದ ಉದ್ದಗಲಕ್ಕೂ ಅನೇಕ ತೀರ್ಥಕ್ಷೇತ್ರಗಳ ನಿರ್ಮಾಣ, ಪುನರುಜ್ಜೀವನ, ಗಂಗಾಜಲ ವಿತರಣೆ, ಸ್ವಾವಲಂಬಿ ಆರ್ಥಿಕತೆಗೆ ಒತ್ತು ನೀಡಿ ಎಲ್ಲಾ ಸೇವಾಕಾರ್ಯಗಳಿಗೆ ರಾಜ್ಯದ ಬೊಕ್ಕಸದ ಹಣವನ್ನು ಬಳಸದೆ ಸ್ವಂತದ್ದೇ ಹಣ ಬಳಸಿ ಅಹಲ್ಯಾಬಾಯಿ ಹೋಳ್ಕರ್ ಎಲ್ಲಾ ತಲೆಮಾರುಗಳಿಗೂ ಮಾದರಿಯಾಗಿದ್ದಾರೆ ಎಂದು ನುಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು