4:27 PM Friday19 - December 2025
ಬ್ರೇಕಿಂಗ್ ನ್ಯೂಸ್
ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ

ಇತ್ತೀಚಿನ ಸುದ್ದಿ

ಶ್ರೀ ಗಡ್ಡಿ ಗದ್ದೇಮ್ಮ ದೇವಿಯ ಜಾತ್ರೆಯಲ್ಲಿ ಮದ್ಯದ ಹೊಳೆ: ಕ್ರಮ ಕೈಗೊಳ್ಳದ ಅಬಕಾರಿ, ಪೊಲೀಸ್ ಇಲಾಖೆ

15/01/2025, 14:48

ಶಿವು ರಾಠೋಡ ಹುಣಸಗಿ ನಾರಾಯಣಪುರ

info.reporterkarnataka@gmail.com

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಪೋಲಿಸ ಠಾಣೆಯ ವ್ಯಾಪ್ತಿಯ ದೇವರಗಡ್ಡಿ ಶ್ರೀ ಗಡ್ಡಿ ಗದ್ದೇಮ್ಮ ದೇವಿಯ ಜಾತ್ರೆಯಲ್ಲಿ ಬಹಿರಂಗವಾಗಿ ನಕಲಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಿಡಿಯೋ ಸಾಕ್ಷಿ ಸಮೇತ ವರದಿ ಮಾಡಿದರೂ ಮದ್ಯ ಮಾರಾಟಗಾರರ ಮೇಲೆ ಕಠಿಣ ಕಾನೂನು ಕ್ರಮಕೈಬೇಕಾದ ಅಬಕಾರಿ ಇಲಾಖೆ ಹಾಗೂ ನಾರಾಯಣಪುರ ಪೋಲಿಸರು ತೆಪ್ಪಗಿ ಕುಳಿತ್ತಿದ್ದಾರೆ.
ಜಾತ್ರೆಯ ರಥೋತ್ಸವದಲ್ಲೂ ಪೋಲಿಸರು ನಕಲಿ‌ ಮದ್ಯ ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದಾರೆ.
ಜಾತ್ರೆಯ ಬಂದೋಬಸ್ತ್ ಗೆ ನಾರಾಯಣಪುರ ಠಾಣಾ ಪೋಲಿಸ್ ಸಿಬ್ಬಂದಿ ಅಲ್ಲದೆ ಹುಣಸಗಿ ತಾಲ್ಲೂಕಿನ ವಿವಿಧ ಪೋಲಿಸ್ ಠಾಣಾ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿತ್ತು.
ಆದರೆ ಜಾತ್ರೆಯಲ್ಲಿ ನಕಲಿ ಮದ್ಯ ಹಾಗೂ ಅಕ್ರಮ ದಂಧೆಕೋರ ಮೇಲೆ ಎಫ್ ಐಆರ್ ದಾಖಲಿಸದೆ ತಾವೇ ಸ್ವತಃ ಅಕ್ರಮ ಮದ್ಯ ಮಾರಾಟಗಾರಿಗೆ ಜಾತ್ರೆಯಲ್ಲಿ ರಾಜಾರೋಷವಾಗಿ ನಕಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುತ್ತಾರೆ. ಪೋಲಿಸ್ ಇಲಾಖೆ ಅಕ್ರಮ ತಡೆಗೆ ಇದೆಯೋ ಅಥವಾ ಅಕ್ರಮ ಮಾಡುವವರ ಪರ ಇದೆಯೋ ಎಂದು ಜನರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಜಾತ್ರೆಗೆ ಬಂದ ಭಕ್ತಾಧಿಗಳಂತು ಪೋಲಿಸರದ್ದು ಇಲ್ಲಿ ಏನು‌ ನೆಡಯುವುದಿಲ್ಲ ಎಂದು ಮಾತಾಡಿಕೋಳುತ್ತಿದ್ದಾರೆ. ಹಣ ಯಾರು ಕೋಡುತ್ತಾರೆ ಅವರ ಪರ ಪೋಲಿಸರು ಕೆಲಸ ಮಾಡುತ್ತಾರೆ. ಹಣ ನೀಡಿ ಎಲ್ಲ ಅಕ್ರಮ ದಂಧೆ ಮಾಡಬಹುದು ಎಂದು ಜನರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ನಕಲಿ‌ ಸಾರಾಯಿ ಮಾರಾಟಗಾರ ಬಗ್ಗೆ ಜೀವದ ಹಂಗಿಲ್ಲದೆ ವಿಡಿಯೋ ಚಿತ್ರೀಕರಣ ಮಾಡಿ ವರದಿ ಬಿತ್ತರಿಸಿದರೂ ಕಾನೂನು ಕ್ರಮಕೈಗೋಳದೆ ಅಕ್ರಮಕ್ಕೆ ಸಾಥ್ ನೀಡುತ್ತಾರೆ ಎಂದರೆ ಯಾವ ರೀತಿಯಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ಯಾದಗಿರಿ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳೆ ನಾರಾಯಣಪುರ ಠಾಣೆಯಲ್ಲಿ ಅಕ್ರಮಕ್ಕೆ ಸಾಥ್ ನೀಡುತ್ತಿರುವವರ ಮೇಲೆ ಕ್ರಮಗೋಳುತ್ತಿರಾ ಅಥವಾ ನಿವು ಅಕ್ರಮಕ್ಕೆ ಸಾಥ್ ನೀಡಿದ ನಾರಾಯಣಪುರ ಪೋಲಿಸ ಠಾಣಾ ಸಿಬ್ಬಂದಿಗೆ ಸಾಥ್ ನೀಡುತ್ತಿರಾ. ತಾವು ದಕ್ಷ ಪ್ರಾಮಾಣಿಕ ಅಧಿಕಾರಿ ಎಂದು‌ ಪೋಲಿಸ್ ಇಲಾಖೆಯಲ್ಲಿ ಮಾತಾಡಿಕೋಳುತ್ತಾರೆ. ಈ ಪ್ರಕರಣದಲ್ಲಿ ಸಾಕ್ಷಿ ಸಮೇತವಾಗಿ ವರದಿ ನೀಡಿದ್ದೇವೆ. ಅಕ್ರಮದಲ್ಲಿ ಭಾಗಿಯಾದವರ ಮೇಲೆ ಕಠಣ ಕ್ರಮಕೈಗೊಳ್ಳಿ ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು