4:43 AM Saturday17 - January 2026
ಬ್ರೇಕಿಂಗ್ ನ್ಯೂಸ್
88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು ಮನರೇಗಾ ಬಚಾವ್ ಸಂಗ್ರಾಮ: ಸ್ಥಳೀಯ ಸಂಸ್ಥೆಗಳ ಚುನಾವಣೆ ಪೂರ್ವಸಿದ್ದತಾ ಸಭೆ ಜಿ ರಾಮ್ ಜಿ ಬಗ್ಗೆ ಕಾಂಗ್ರೆಸ್ ಸುಳ್ಳು ಸಂಕಥನ: ಕೇಂದ್ರ ಸಚಿವ ಎಚ್.ಡಿ.… ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಿದಾಗ ಮಾತ್ರ ಸುಖಿ ರಾಜ್ಯ ಸ್ಥಾಪನೆ…

ಇತ್ತೀಚಿನ ಸುದ್ದಿ

ಪಕ್ಷದಲ್ಲಿ ಸಿದ್ದಾಂತವೇ ಪ್ರಮುಖ: ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ

09/01/2025, 18:41

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterlarnataka@gmail.com

ಪಕ್ಷ ಸಿದ್ದಾಂತವೇ ಪ್ರಮುಖವಾಗಿದ್ದು. ಪಕ್ಷದಿಂದ ಹೊರಗೆ ಯಾವ ವ್ಯಕ್ತಿಯು ಪ್ರಮುಖವಲ್ಲ. ಇದನ್ನು ಅರಿತು ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿ ಎಂದು ಜಿಲ್ಲಾ ಬಿಜೆಪಿ ಅದ್ಯಕ್ಷ ದೇವರಾಜ್ ಶೆಟ್ಟಿ ಹೇಳಿದರು.
ಅವರು ಪಕ್ಷದ ಅದಿಕೃತ ಘೋಷಣೆಯ ಸಂಘಟನಾ ಪರ್ವ ವಿಶೇಷ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಅಂತರಿಕ ಬಿನ್ನಾಬಿಪ್ರಾಯ ಎಲ್ಲವನ್ನು ತೊರೆದು ಎಲ್ಲರು ಕಾರ್ಯ ನಿರ್ವಹಿಸಬೇಕು. ಇದು ನಮ್ಮ ಗೆಲುವಿಗೆ ಕಾರಣವಾಗಿದ್ದು. ಪಕ್ಷದಲ್ಲಿ ಅಂತರಿಕ ಚುನಾವಣೆ. ಸಂಘಟನೆಯನ್ನು ಬಲಗೋಳಿಸಲು ಅತ್ಯಮೂಲವಾಗಿದ್ದು. ಸಂಘಟನಾತ್ಮಕ ಜಿಲ್ಲೆಯಾಗಿ ಇಂದು ಲೋಕಸಭೆ ಚುನಾವಣೆ ಸೇರಿದಂತೆ ಎಂಎಲ್ ಸಿ ಸಹಕಾರ ಸಂಘ ಚುನಾವಣೆಯಲ್ಲಿ ಈಗಾಗಲೆ ಉತ್ತಮ ಯಶಸ್ಸು ಸಾದಿಸಿದ್ದು. ಪಕ್ಷವೇ ಪ್ರಮುಖವಾಗಿದ್ದು. ಸಿದ್ದಾಂತವೇ ನಮ್ಮ ನಿಲುವು. ಪಕ್ಷ ಮೋದಲು ಎಂಬುದಾಗಿದ್ದು. ಪಕ್ಷ ಬಿಟ್ಟರೆ ಇಲ್ಲಿ ವ್ಯಕ್ತಿ ನಗಣ್ಯ.ಹಾಗಾಗಿ ಬೂತ್ ಸಮಿತಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಪಕ್ಷದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಪ್ರಸ್ತಾವಿಕ ಮಾತನಾಡಿದ ನರೇಂದ್ರ. ಪಕ್ಷದ ಅಂತರಿಕ ಸಭೆಯ ಒಂದು ಭಾಗವಾಗಿ ಎಲ್ಲರು ಒಂದು ಪ್ರಕ್ರಿಯೆ ಅಡಿಯಲ್ಲಿ ಬಂದು ಸಂವಿದಾನ ಬದ್ದವಾಗಿ ಪ್ರಾಥಮಿಕ ಸದಸ್ಯತ್ವ ಪಢದು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಕ್ಷ ಕಟ್ಟಿ ಈ ಮೂಲಕ ದೇಶ ಸೇವೆ ಮಾಡುವುದೆ ಬಿಜೆಪಿ ಗುರಿಯಾಗಿದೆ ಎಂದರು. ದೀಪಕ್ ದೊಡ್ಡಯ್ಯ ಮಾತನಾಡಿ, ಪಕ್ಷದ ಅಭ್ಯಾರ್ಥಿ ಸೋಲು ಇಡೀ ಕಾರ್ಯಕರ್ತರ ವೈಯಕ್ತಿಕ ಸೋಲಾಗಿದ್ದು. ಯಾವ ಚುನಾವಣೆಯಲ್ಲಿಯು ಬಿನ್ನಮತ ಮಾಡದೆ ಪಕ್ಷ ಗೆಲ್ಲಿಸಲು ಸಂಘಟನೆ ಮಾಡೋಣ ಎಂದರು.
ಮಂಡಲ ಅದ್ಯಕ್ಷ ಗಜೇಂದ್ರ ಸಕ್ರೀಯ ಸದಸ್ಯತ್ವವನ್ನು ನಮ್ಮ ವಿಧಾನಸಭಾ ಕ್ಷೇತ್ರದ ಪಧಾದಿಕಾರಿಗಳು ಮತ್ತು ಕಾರ್ಯಕರ್ತರು ಅತ್ಯತ್ಯಮವಾಗಿ ನಡೆಸಿಕೊಂಡು ಬಂದಿದ್ದು ಮುಂದಿನ ಮೂರು ವರ್ಷ ಅವಿರತವಾಗಿ ಪಕ್ಷ ಸಂಘಟನೆಯಲ್ಲಿ ಶ್ರಮಿಸೋಣ ಎಂದು ತಿಳಿಸಿದರು. ಚುನಾವಣಾ ಅಧಿಕಾರಿ ಚೇತನ್, ಗಜೇಂದ್ರ ಕೊಟ್ಟಿಗೆಹಾರ, ಜಿಎಸ್ ರಘು, ಪಂಚಾಕ್ಷರಿ, ಕೆ. ಸಿ. ರತನ್, ಎಂ.ಅರ್. ಜಗದೀಶ್. ಗೌರಮ್ಮ. ಪ್ರಶಾಂತ್. ದನಿಕ್. ಲೋಕೇಶ್
ಮತ್ತಿತರರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು