9:54 PM Tuesday23 - December 2025
ಬ್ರೇಕಿಂಗ್ ನ್ಯೂಸ್
ಸಂಸದ ಯದುವೀರ್‌ ಪ್ರಯತ್ನದ ಫಲಶ್ರುತಿ : ತಂಬಾಕು ಮಾರಾಟಕ್ಕೆ ಅನುಮತಿ ರಾಮೇಶ್ವರಂ ಕೆಫೆ ವಿರುದ್ಧದ ಪ್ರಕರಣದಲ್ಲಿ ಹೆಚ್ಚಿನ ತನಿಖೆಗೆ ಕರ್ನಾಟಕ ಹೈಕೋರ್ಟ್ ವತಿಯಿಂದ ತಡೆಯಾಜ್ಞೆ;… ಅಟಲ್ ಜೀ ವೃಕ್ಷ ಯೋಜನೆಯಡಿ 2240 ಸಸಿ ಸಂರಕ್ಷಣೆ: ವರ್ಷಪೂರ್ತಿ ಅಟಲ್ ಜನ್ಮ… ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

ಇತ್ತೀಚಿನ ಸುದ್ದಿ

ತೀರ್ಥಹಳ್ಳಿಯ ಕಿತ್ತನಗದ್ದೆ ನಾಡ್ತಿಯ ಹೊಳೆಯಲ್ಲಿ ಮರಳು ಮಾಫಿಯ ಜಾಲ ಪತ್ತೆ

06/01/2025, 22:50

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ

info.reporterkarnataka@gmail.com

ತೀರ್ಥಹಳ್ಳಿ ಸಮೀಪದ ಕಿತ್ತನಗದ್ದೆ ನಾಡ್ತಿ ಹೊಳೆಯಲ್ಲಿ ಬೃಹತ್ ಪ್ರಮಾಣದ ಅಕ್ರಮ ಮರಳು ಮಾಫಿಯ ಜಾಲವೊಂದರ ಬಗ್ಗೆ ತಿಳಿದು ದಾಳಿ ಮಾಡಿರುವ ತಹಸೀಲ್ದಾರ್ ಮತ್ತು ತಂಡ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿತ್ತನಗದ್ದೆ ನಾಡ್ತಿ ಹೊಳೆಯಲ್ಲಿ ಬೃಹತ್ ಪ್ರಮಾಣದ ಮರಳು ಮಾಫಿಯ ಜಾಲವೊಂದು ಪತ್ತೆಯಾಗಿದೆ. ತೀರ್ಥಹಳ್ಳಿ ತಹಸೀಲ್ದಾರ್ ರಂಜಿತ್ ಎಸ್. ಮಾಮೂಲಿನಂತೆ ಗಸ್ತು ತಿರುಗುವ ವೇಳೆ ಅಚಾನಕ್ ಮರಳು ಸಾಗಿಸುವ ವಾಹನ ಎದುರಾಗಿದ್ದು, ಅನುಮಾನದಿಂದ ಹಿಂಬಾಲಿಸಿದಾಗ ಹೊಳೆಯ ತುಂಬೆಲ್ಲ ಮರಳನ್ನು ಮೇಲೇತ್ತಲು ಹಾಗೂ ಅದನ್ನು ಫಿಲ್ಟರ್ ಮಾಡಲು ಬಳಸುವ ವಿನೂತನ ಸಾಧನಗಳು ಹಾಗೂ ಅಲ್ಲಲ್ಲಿ ಜರಡಿ ಹಿಡಿದಿಟ್ಟ ದಿಮ್ಮಿಗಳಿಂದ ಕೂಡಿದ ಫಿಲ್ಟರ್ ಕಂಡು ಬಂದ ಹಿನ್ನಲೆ ಇದೊಂದು ದೊಡ್ಡ ಮರಳು ಮಾಫಿಯ ಎಂದು ತಿಳಿದು ಹೊಳೆಯಲ್ಲಿದ್ದ ವಿನೂತನ ವಾಹನಗಳನ್ನು ತಹಶೀಲ್ದಾರ್ ರಂಜಿತ್ ವಶ ಪಡಿಸಿಕೊಂಡು ಪೊಲೀಸ್ ಕಷ್ಟಡಿಗೆ ಒಪ್ಪಿಸಿದ್ದಾರೆ.
ಈ ವೇಳೆ ಮರಳು ಕೊರೆಯಲ್ಲಿದ್ದ ಮರಳು ತುಂಬುತ್ತಿದ್ದ ಕೆಲಸಗಾರರು ಓಡಿ ಹೋಗಿದ್ದಾರೆ. ಜೊತೆಗೆ ಇಷ್ಟೊಂದು ಧಾರಾಳವಾಗಿ ಮಾಡಿದ ವಿನೂತನ ಮರಳು ಕಳ್ಳ ಸಾಗಾಣಿಕೆಯಲ್ಲಿ ದೊಡ್ಡ ದೊಡ್ಡವರ ಪಾತ್ರ ಇರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು ಈ ಪ್ರಕರಣ ಹೇಗೆ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇತ್ತೀಚಿನ ಸುದ್ದಿ

ಜಾಹೀರಾತು