ಇತ್ತೀಚಿನ ಸುದ್ದಿ
ನಂಜನಗೂಡು: ವಿಶೇಷ ಚೇತನ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರ
08/12/2024, 11:35

ಮೋಹನ್ ನಂಜನಗೂಡು ಮೈಸೂರು
info.reporterkarnataka@gmail.com
ಶಿಕ್ಷಣ ಹಾಗೂ ಆರೋಗ್ಯ ಇಲಾಖೆ, ತಾಲೂಕು ಪಂಚಾಯತಿ ಮತ್ತು ಅಲೀಂ ಕೋ ಸಹಯೋಗದೊಂದಿಗೆ ವಿಶೇಷ ಚೇತನ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಎಚ್. ಡಿ ಕೋಟೆ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು,
ತಾಲೂಕು ದಂಡಾಧಿಕಾರಿಗಳಾದ ಶ್ರೀನಿವಾಸ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ, ತಾಲೂಕು ಆಡಳಿತದಿಂದ ವಿಶ್ವ ವಿಕಲಚೇತನರ ದಿನದ ಶುಭಾಶಯಗಳನ್ನು ಕೋರಿ, ಸರ್ಕಾರದ ಸವಲತ್ತುಗಳು ಹಾಗೂ ಸಲಕರಣೆಗಳನ್ನು ಪಡೆಯುವ ಮೂಲಕ ಅವರನ್ನು ವಿಕಲಚೇತನರನ್ನು ಮುಖ್ಯವಾಹಿನಿಗೆ ತರುವಂತೆ ಪೋಷಕರಿಗೆ ಕರೆ ನೀಡಿದರು,ಇದೇ ಸಂದರ್ಭ ತಾಲೋಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ವಿಷೇಶ ಚೇತನ ಮಕ್ಕಳಾಗಿ ಹುಟ್ಟುವುದು ಯಾವುದೇ ಶಾಪವಲ್ಲ, ಅದು ಗರ್ಭ ವ್ಯವಸ್ಥೆಯಲ್ಲಿ ಹಾಗೂ ಹೆರಿಗೆ ಸಮಯದಲ್ಲಿ ಆಗುವ ಏರುಪೇರಿನಿಂದ ಇಂತಹ ಮಕ್ಕಳು ಜನಿಸುತ್ತಾರೆ. ಇಂತಹ ಮಕ್ಕಳ ಲಾಲನೆ ಪಾಲನೆ ಮಾಡುವ ಪೋಷಕರ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು,
ಈ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಜಿಲ್ಲೆಯಿಂದ ತಜ್ಞ ವೈದ್ಯರನ್ನು,ನಿಯೋಜನೆ ಮಾಡಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ ಹಾಗಾಗಿ ಪೋಷಕರು,ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೋಕು ಪಂಚಾಯತಿ ಇಒ ರಘುನಂದನ್, ಮುತ್ತುರಾಜು, ಬಿಆರ್ ಸಿ ಕೃಷ್ಣಯ್ಯ, ಆರ್ ಬಿ ಎಸ್ ಕೆ ವೈದ್ಯರು ಮತ್ತು ತಂಡ, ಹಾಜರಿದ್ದರು.