7:49 AM Thursday5 - March 2026
ಬ್ರೇಕಿಂಗ್ ನ್ಯೂಸ್
ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ… ನಾಪೋಕ್ಲು: ಹಿಂದೂ ಸಂಗಮ ಸಮಾವೇಶ ಪ್ರಚಾರ ವೇಳೆ ಮಾತಿನ ಚಕಮಕಿ; ಓರ್ವನಿಗೆ ಗಾಯ ಯೋಗೀಶ್ ಗೌಡ ಕೊಲೆ ಪ್ರಕರಣ: ಶಾಸಕ ವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು… “ನಾನು ಭ್ರಷ್ಟನಲ್ಲ”: ದಿಲ್ಲಿ ಅಬಕಾರಿ ಪ್ರಕರಣದಲ್ಲಿ ಖುಲಾಸೆಗೊಂಡ ಅರವಿಂದ್ ಕೇಜ್ರಿವಾಲ್ ಕಣ್ಣೀರು

ಇತ್ತೀಚಿನ ಸುದ್ದಿ

ಬಿಕರ್ನಕಟ್ಟೆ: ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಸ್ಟುಡಿಯೋ ಉದ್ಘಾಟನೆ

07/11/2024, 21:33

ಮಂಗಳೂರು(reporterkarnataka.com): ನೂತನವಾಗಿ ಪುನರ್ ನವೀಕರಿಸಿದ ಅನ್ವಿತಾ ಫೋಟೋಗ್ರಾಫಿ & ಆನ್ಸಿಟಾ ವಿಡಿಯೋಗ್ರಾಫಿ ಸ್ಟುಡಿಯೋ ಹಾಗೂ ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಸ್ಟುಡಿಯೋ, ಸ್ಟ್ಯಾನ್ಲಿ ಬಂಟ್ವಾಳ್ ಮತ್ತು ಲಿಯೋ ರಾಣಿಪುರ ಅವರ ಮಾಲೀಕತ್ವದಲ್ಲಿ ಹಾಗೂ ನಿರ್ವಹಣೆಯಲ್ಲಿ ನಗರದ ಬಿಕರ್ನಕಟ್ಟೆ ಜಂಕ್ಷನ್ ನಲ್ಲಿ ಉದ್ಘಾಟನೆಯಾಯಿತು.


ಎನ್.ಆರ್.ಐ. ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಮೈಕಲ್ ಡಿಸೋಜ ಅವರು ಅನ್ವಿತಾ ಫೋಟೋಗ್ರಾಫಿ ಮತ್ತು ಆನ್ಸಿಟಾ ವಿಡಿಯೋಗ್ರಾಫಿ ಸ್ಟುಡಿಯೋವನ್ನು ಉದ್ಘಾಟಿಸಿದರು. ಯುನಿವರ್ಸಲ್ ಮೆಲೋಡಿಯಸ್ ಆಡಿಯೋ ವಿಡಿಯೋ ಸ್ಟುಡಿಯೋವನ್ನು ಎನ್.ಆರ್.ಐ. ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಜೇಮ್ಸ್ ಮೆಂಡೋನ್ಸಾ ಅವರು ಉದ್ಘಾಟಿಸಿದರು. ಉದ್ಘಾಟನೆ ಬಳಿಕ, ರೆ. ಫಾ. ವಾಲ್ಟರ್ ಡಿಸೋಜಾ (ಓಸಿಡಿ) ಅವರು ಆಶೀರ್ವಾದ ಸಮಾರಂಭವನ್ನು ನಡೆಸಿದರು.
ಈ ವೇಳೆ, ಲಿಯೋ ರಾಣಿಪುರ ಅವರ ನೇತೃತ್ವದಲ್ಲಿ ನಡೆದ ಸಾಮಾಜಿಕ ಚಟುವಟಿಕೆಗಳನ್ನು ವಿವರಿಸುವ ಕರಪತ್ರವನ್ನು ಸಹ ಉದ್ಘಾಟಿಸಲಾಯಿತು. ಈ ಕರಪತ್ರವನ್ನು ಅಧಿಕೃತವಾಗಿ ಮಂಗಳೂರು ಡಯೋಸಿಸ್’ನ ಪಿಆರ್ ಒ ಮತ್ತು ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೊಯ್ ಕ್ಯಾಸ್ತೆಲಿನೊ ಅವರು ಬಿಡುಗಡೆ ಮಾಡಿದರು. ಉದ್ಘಾಟನಾ ಸಮಾರಂಭದಲ್ಲಿ ಫಾ. ಡೊಮಿನಿಕ್ ವಾಜ್ (ಧರ್ಮಗುರುಗಳು, ಇನ್ಫೆಂಟ್ ಮೇರಿ ಚರ್ಚ್, ಬಜ್ಜೋಡಿ), ಸ್ಟಾನಿ ಆಲ್ವಾರೆಸ್, (ಅಧ್ಯಕ್ಷರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ), ಜೊನ್ ಮೊಂತೇರೊ (ಅಧ್ಯಕ್ಷರು, ರಚನಾ ಮಂಗಳೂರು), ರೊನ್ಸ್ ಬಂಟ್ವಾಳ್ (ಅಧ್ಯಕ್ಷರು, ಮಹಾರಾಷ್ಟ್ರ ಕರ್ನಾಟಕ ಕಾರ್ಯನಿರತ ಪತ್ರಿಕೋದ್ಯಮಿ), ಫಾ. ಸುದೀಪ್ ಪಾವ್ಲ್ (ಸಂದೇಶ ಫೌಂಡೇಶನ್, ಮಂಗಳೂರು), ಫಾ. ವಿನ್ಸೆಂಟ್ ಡಿಸೋಜಾ (ಸಿ.ಓ.ಡಿ.ಪಿ, ಮಂಗಳೂರು), ಶ ಅನಿಲ್ ಲೋಬೋ (ಅಧ್ಯಕ್ಷರು, ಎಂ.ಸಿ.ಸಿ. ಬ್ಯಾಂಕ್, ಮಂಗಳೂರು), ನವೀನ್ ಲೋಬೋ (ಸದಸ್ಯರು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ),ಕಿಶೋರ್ ಫೆರ್ನಾಂಡಿಸ್ (ಮಾಂಡ್ ಸೊಭಾಣ್, ಮಂಗಳೂರು), ಮ್ಯಾಕ್ಸಿಮ್ ಮೊರಾಸ್ (ಸಾಮಾಜಿಕ ಕಾರ್ಯಕರ್ತ), ಅರುಣ್ ಡಿಸೋಜಾ (ಅಧ್ಯಕ್ಷರು, ಕ್ಯಾಥೋಲಿಕ್ ಸಭಾ, ಮಂಗಳೂರು), ಎ.ಪಿ. ಮೊಂತೇರೊ (ಕಾರ್ಯದರ್ಶಿ, ಕ್ಯಾಥೋಲಿಕ್ ಸಭಾ, ಮಂಗಳೂರು ಪ್ರದೇಶ), ಫ್ಲಾಯ್ಡ್ ಕಾಸ್ಸಿಯಾ (ಕಾರ್ಯದರ್ಶಿ, ಕೆಎನ್ಎಸ್, ಮಂಗಳೂರು), ಡೋನಾಲ್ಡ್ ಪಿರೇರಾ (ಬುಡ್ಕುಲೋ ಮೀಡಿಯಾ ನೆಟ್‌ವರ್ಕ್), ನಾರ್ಬರ್ಟ್ (ನಿರ್ದೇಶಕ, ಸಿನಿಕುಡ್ಲಾ), ವಿಲಿಯಂ ರೆಬೆಲ್ಲೋ (ಉದ್ಯಮಿ), ಅಕ್ಷತಾ ಜಯನ್ (ಕಟ್ಟಡದ ಮ್ಹಾಲಿಕೆ) ಮುಂತಾದ ಗಣ್ಯರು ಭಾಗವಹಿಸಿದ್ದರು.
ಈ ಸ್ಟುಡಿಯೋ ಯುವ ಪ್ರತಿಭೆಗಳನ್ನು ಬೆಂಬಲಿಸುವುದರೊಂದಿಗೆ ಕೊಂಕಣಿ ಭಾಷೆಯನ್ನು ಉತ್ತೇಜಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುವುದಕ್ಕೆ ನವೀನ ವೇದಿಕೆಯನ್ನು ಒದಗಿಸುತ್ತದೆ. ಸೃಜನಶೀಲತೆ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ಇದು ಹೊಸ ಆಯಾಮವನ್ನು ನೀಡುತ್ತದೆ. ರೋಷನ್ ಕ್ರಾಸ್ತಾ ಕಾರ್ಯಕ್ರಮವನ್ನು ನಿರ್ವಹಿಸಿದರೆ, ಸ್ಟ್ಯಾನ್ಲಿ ಬಂಟ್ವಾಳ್ ಮತ್ತು ಲಿಯೋ ರಾಣಿಪುರ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು