7:21 PM Monday17 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಶಿವಳ್ಳಿ ಸ್ಪಂದನದ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲು

27/10/2024, 22:35

ಮಂಗಳೂರು(reporterkarnataka.com): ಶಿವಳ್ಳಿ ಸ್ಪಂದನ ಬ್ರಾಹ್ಮಣ ಸಂಘದ ಹೆಸರಲ್ಲಿ ನಕಲಿ ಲೆಟರ್ ಹೆಡ್ ಹಾಗೂ ಸೀಲ್ ಬಳಸಿ ವಂಚನೆ ಮಾಡಿದ ಪ್ರಕರಣ ಕುರಿತು ಕೇಸ್ ದಾಖಲಿಸಲಾಗಿದೆ.
ಭಾಸ್ಕರ ಭಟ್ ಮತ್ತು ನಕಲಿ ಪದಾಧಿಕಾರಿಗಳ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾಸ್ಕರ ಭಟ್ ಬಿ. ಮಂಗಳಾದೇವಿ ಎಂಬವರು ತಾವೇ ಕಾರ್ಯದರ್ಶಿ ಎಂದು ಹೇಳಿಕೊಂಡು ಸಂಘದ ನಕಲಿ ಕಾಗದ ಪತ್ರ ತಯಾರಿಸಿ ಲೆಟರ್ ಹೆಡ್ ಮತ್ತು ಸೀಲ್ ಬಳಸಿ ಮೋಸ ವಂಚನೆ ಮಾಡಿದ್ದಾರೆ ಎಂದು ಶಿವಳ್ಳಿ ಸ್ಪಂದನ ಕಾರ್ಯದರ್ಶಿ ಕದ್ರಿಯ ಕೆ. ಕೃಷ್ಣ ಭಟ್ ದೂರು ನೀಡಿದ್ದರು.

ಡಿಆರ್ ರಿಜಿಸ್ಡ್ರಾರ್ ಕಚೇರಿಗೆ ಸಂಘದ ನವೀಕರಣ ಮಾಡಲು ಹೋದಾಗ ಅಲ್ಲಿ ಭಾಸ್ಕರ ಭಟ್ ಬೇರೆಯೇ ಪದಾಧಿಕಾರಿಗಳ ಪಟ್ಟಿ ನೀಡಿ ಅರ್ಜಿ ಸಲ್ಲಿಸಿದ್ದರು.
ಅಲ್ಲಿಂದ ಸ್ವೀಕೃತಿ ಪತ್ರ ಬರೆದು ಇತರ ನಕಲಿ ಕಾಗದ ಪತ್ರಗಳನ್ನು ಕರ್ನಾಟಕ ಬ್ಯಾಂಕಿಗೆ ನೀಡಿ ಅಲ್ಲಿಯೂ ಅವರ ಹೆಸರಿನ ಜತೆ ಉದಯಶಂಕರ ಭಟ್, ಗಿರೀಶ್ ಎಂಬವರ ಹೆಸರನ್ನು ಬ್ಯಾಂಕ್ ಖಾತೆಯಲ್ಲಿ ನೋಂದಣಿ ಮಾಡಿದ್ದರು. ಖಾತೆಯಲ್ಲಿರುವ ಹಣವನ್ನು ಲಪಟಾಯಿಸಲು ಈ ಕೃತ್ಯ ನಡೆಸಿದ್ದರು ಎಂದು ಕಾರ್ಯದರ್ಶಿ ಕೃಷ್ಣ ಭಟ್ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು