ಇತ್ತೀಚಿನ ಸುದ್ದಿ
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ವತಿಯಿಂದ ನಾಡಹಬ್ಬ ದಸರಾಕ್ಕೆ ದೇಣಿಗೆ ಹಸ್ತಾಂತರ
10/10/2024, 20:31

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಅತ್ಯಂತ ವಿಜೃಂಭಣೆಯಿಂದ ನಡೆಯುವ ನಾಡಹಬ್ಬ ದಸರಾಕ್ಕೆ ಪಟ್ಟಣ ಪಂಚಾಯಿತಿ ವತಿಯಿಂದ ತಾಲೂಕು ಆಡಳಿತ ವರ್ಗಕ್ಕೆ ಎರಡೂವರೆ ಲಕ್ಷ ರೂ ಮೊತ್ತದ ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು.
ಎರಡನೇ ಮೈಸೂರು ಎಂದೇ ಖ್ಯಾತಿ ಪಡೆದಿದ್ದ ತೀರ್ಥಹಳ್ಳಿಯಲ್ಲಿ ನವರಾತ್ರಿ ಉತ್ಸವದ ದಸರಾ ಮಹೋತ್ಸವವೂ ಬಹಳ ವಿಜೃಂಭಣೆಯಿಂದ ನಡೆಯುತ್ತಿದ್ದು ಪಟ್ಟಣ ಪಂಚಾಯಿತಿ ಎಲ್ಲಾ ರೀತಿ ಯಲ್ಲೂ ಸಹಕಾರ ನೀಡುತ್ತಿದ್ದು, ಬನ್ನಿ ಮಂಟಪಕ್ಕೆ ಸಂಬಂಧಪಟ್ಟಂತೆ ಸುಣ್ಣ ಬಣ್ಣ ಹೊಡೆಯುವದಲ್ಲದೆ, ಜಂಗಲ್ ಕಟಿಂಗ್ ಸೇರಿದಂತೆ ಸಂಪೂರ್ಣವಾಗಿ ನೆಹರು ಉದ್ಯಾನವನದ ಬನ್ನಿ ಮಂಟಪ ಸುಂದರವಾಗಿ ಕಾಣುವಂತೆ ಪಟ್ಟಣ ಪಂಚಾಯತ್ ವಿಶೇಷ ಸಹಕಾರ ನಿಡುತ್ತಿದೆ.
ದಸರಾ ಉತ್ಸವಕ್ಕೆ ಎರಡುವರೆ ಲಕ್ಷ ರೂಪಾಯಿಗಳನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಹಮತುಲ್ಲಾ ಅಸಾದಿ, ಉಪಾಧ್ಯಕ್ಷರಾದ ಗೀತಾ ರಮೇಶ್ ಗುರುವಾರ ತಾಲೂಕು ಕಚೇರಿಗೆ ತೆರಳಿ ಜಿಲ್ಲಾ ಉಪ ವಿಭಾಗ ಅಧಿಕಾರಿಯವರಿಗೆ ಚೆಕ್ ಹಸ್ತಾಂತರ ಮಾಡಿದರು.