2:20 PM Thursday6 - November 2025
ಬ್ರೇಕಿಂಗ್ ನ್ಯೂಸ್
ಸಿ & ಡಿ ಸಮಸ್ಯೆ | ಎಲ್ಲರಿಗೂ ಅನುಕೂಲವಾಗುವ ರೀತಿ ಸಮಿತಿ ರಚನೆ:… Chikkamagaluru | ತುಂಡಾಗಿ ಬಿದ್ದಿದ್ದ ವಿದ್ಯುತ್ ವಯರ್ ಸ್ಪರ್ಶ: 3 ಹಸುಗಳು ದಾರುಣ… ಕೊರಗರು ಪ್ರಾಚೀನ ಪ್ರೋಟೋ ದ್ರಾವಿಡ ಪೂರ್ವಜರ ಜೀವಂತ ಪ್ರತಿನಿಧಿಗಳು: ಮಹತ್ವದ ಸಂಶೋಧನೆಯಿಂದ ಬಹಿರಂಗ ಸ್ಪರ್ಶ್‌ ಆಸ್ಪತ್ರೆಯ ಹೆಣ್ಣೂರು ಶಾಖೆಯಲ್ಲಿ “ಕ್ಯಾನ್ಸರ್‌ ಚಿಕಿತ್ಸಾ ಘಟಕ”ಕ್ಕೆ ನಟ ಶಿವರಾಜ್‌ ಕುಮಾರ್‌… Kodagu | ಮಡಿಕೇರಿ ತಾಳತ್ ಮನೆ ಬಳಿ ಡಸ್ಟ್ ರ್ ಕಾರಿಗೆ ಬೆಂಕಿ:… ರೈತರಿಗೆ ಅನ್ಯಾಯ ಆಗದಂತೆ ಕ್ರಮ: ಬೆಳಗಾವಿ ಕಬ್ಬು ಬೆಳೆಗಾರರ ಹೋರಾಟಕ್ಕೆ ಸಚಿವೆ ಹೆಬ್ಬಾಳ್ಕರ್… 40 ಸಾವಿರ ಲಂಚ ಸ್ವೀಕಾರ: ಮೆಸ್ಕಾಂ ಜೂನಿಯರ್ ಇಂಜಿನಿಯರ್ ಮಲ್ಲಿಕಾರ್ಜುನ ಸ್ವಾಮಿ ಲೋಕಾಯುಕ್ತ… ದೀಪಾಲಂಕೃತ ವಿಧಾನ ಸೌಧ ಈಗ ಟೂರಿಸ್ಟ್ ಎಟ್ರೆಕ್ಷನ್ ಸೆಂಟರ್: ಸ್ಪೀಕರ್ ಖಾದರ್ ನಡೆಗೆ… ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ | ಕೇವಲ‌ ಸಬ್ಸಿಡಿಗಾಗಿ ಸಿನಿಮಾ ಮಾಡಬೇಡಿ; ಒಳ್ಳೆ… ಮಂಡ್ಯ ಜಿಲ್ಲೆಯ 50ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಇಸಿಜಿ ಯಂತ್ರ

ಇತ್ತೀಚಿನ ಸುದ್ದಿ

ಕಲಿಯುವ ಛಲದಿಂದ ಸಂಕಲ್ಪ ಸಾಧಿಸಿದ ತನ್ವಿ!: ಕೆಳ ಮಧ್ಯಮ ಕುಟುಂಬದ ವಿದ್ಯಾರ್ಥಿನಿ ಎಂಬಿಬಿಎಸ್ ಸೀಟು ಪಡೆದ ಕತೆ!!

07/09/2024, 18:31

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ತೊಟ್ಟಿಲು ತೂಗಿದ ಕೈಗಳು ಇಡೀ ದೇಶವನ್ನೇ ಆಳ್ವಿಕೆ ಮಾಡಿದ ಉದಾಹರಣೆ ನಮ್ಮುಂದೆ ಇರುವಾಗ ಛಲವೊಂದಿದ್ದರೆ, ಏನನ್ನೂ ಸಾಧಿಸಬಹುದು ಎನ್ನುವುದು ಮತ್ತಷ್ಟು ಸ್ಷಷ್ಟ. ಇದಕ್ಕೊಂದು ನಮ್ಮ ನಿಮ್ಮ ನಡುವಿನ ಹುಡ್ಗಿಯೊಬ್ಬಳು ನಿದರ್ಶನ.
ಮಂಗಳೂರು ಹೊರವಲಯದ ಕೊಣಾಜೆ ಮುಟಿಂಜ ನಿವಾಸಿ ಪದ್ಮನಾಭ ಬಂಗೇರ ಹಾಗೂ ನೀರಜಾ ಅವರ ಪುತ್ರಿ ತನ್ವಿ ಛಲದಿಂದ ಗೆದ್ದಾಕೆ.ತನ್ವಿ ತಾಯಿ ಖಾಸಗಿ ಏಜೆನ್ಸಿಯಲ್ಲಿ ಅಕೌಂಟೆಂಟ್, ತಂದೆ ಮೇಸ್ತ್ರಿ. ಆರ್ಥಿಕವಾಗಿ ಅಷ್ಟೇನು ಗಟ್ಟಿಗರಲ್ಲ. ಆದರೆ ಪ್ರತಿಭೆ ಆ ಹುಡುಗಿಗೆ ಬೆನ್ನೆಲುಬು ತರಹ ಸಹಾಯ ಮಾಡಿತು. ಎಸ್‌ಎಸ್‌ಎಲ್‌ಸಿಯಲ್ಲಿ 613 ಅಂಕ, ಪಿಯುಸಿಯಲ್ಲಿ 575 ಅಂಕ ಪಡೆದವಳಾಕೆ. ವೈದ್ಯೆಯಾಗುವ ಕನಸು ಕಂಡಿದ್ದಳು. ಮಗಳು ವೈದ್ಯೆಯಾಗಬೇಕು ಎಂಬುದು ಪೋಷಕರ ಕನಸು ಕೂಡ ಆಗಿತ್ತು. ಆದರೆ ಲಕ್ಷಗಟ್ಟಲೆ ಶುಲ್ಕ ಪಾವತಿಸಿ ಎಂಬಿಬಿಎಸ್ ಓದುವುದು ಅವರಿಗೆ ಕನಸಿನ ಮಾತಾಗಿತ್ತು. ಈ ನಡುವೆ ಕಳೆದ ವರ್ಷದ ನೀಟ್ (NEET) ಪರೀಕ್ಷೆಯಲ್ಲಿ ಆಕೆ 720ಕ್ಕೆ 457 ಅಂಕಗಳನ್ನು ಗಳಿಸಿ 1,55,670 ರ್ಯಾಂಕ್ ಪಡೆದಿದ್ದಳು. ಈ ಶ್ರೇಣಿಯಲ್ಲಿ ಆಕೆ ಎಂಬಿಬಿಎಸ್ ಸೀಟು ಪಡೆದಿದ್ದರೂ, ಲಕ್ಷಾಂತರ ಶುಲ್ಕವನ್ನು ಪಾವತಿಸಬೇಕಾಗಿತ್ತು. ಈ ವೇಳೆ ಪೋಷಕರು ತನ್ವಿಗೆ ನರ್ಸಿಂಗ್ ಓದುವುದೇ ಸೂಕ್ತ ಎಂದು ನಿರ್ಧರಿಸಿದ್ದರು. ಆದರೆ ವೈದ್ಯಳಾಗುವ ಕನಸಿಗೆ ಮಾತ್ರ ಹಿಂದೆ ಸರಿಯಲಿಲ್ಲ. ಅಷ್ಟರಲ್ಲಿ ನಾನೇಕೆ ನೀಟ್ ಓದಿ ಮತ್ತೆ ಎಂಬಿಬಿಎಸ್ ಸೀಟು ಪಡೆಯಬಾರದು ಎಂದು ಹಠಕ್ಕೆ ಬಿದ್ದಳು. ಮಂಗಳೂರಿನಲ್ಲಿ ಎಂಬಿಬಿಎಸ್ ಸೀಟು ಪಡೆಯಬೇಕೆಂದು ಹಠಕ್ಕೆ ಬಿದ್ದು ಯೆನೆಪೊಯದಲ್ಲಿ ಉಚಿತ ಕೋಚಿಂಗ್ ಪಡೆದು ಈ ವರ್ಷ ನೀಟ್ ನಲ್ಲಿ 720ರಲ್ಲಿ 647 (28,782 ಆಲ್ ಇಂಡಿಯಾ ರ್ಯಾಂಕ್) ಗಳಿಸಿದ್ದಾಳೆ. ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಸೀಟು ಪಡೆದು ವಿದ್ಯಾರ್ಥಿಗಳಿಗೆ ಮಾದರಿ ಎನಿಸಿದ್ದಾಳೆ. ಗುರುಬೆಳದಿಂಗಳು ಫೌಂಡೇಶನ್ ಕುದ್ರೋಳಿ ತನ್ವಿಯ ಮುಂದಿನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು