ಇತ್ತೀಚಿನ ಸುದ್ದಿ
ಭೈರಾಪುರ-ಹೊಸಕೆರೆಯಲ್ಲಿ ನಡೆದ ಜೀಪ್ ರ್ಯಾಲಿ: ಅರಣ್ಯ ಸಚಿವ ಈಶ್ವರ ಖಂಡ್ರೆ ಗರಂ; ತನಿಖೆಗೆ ಆದೇಶ
02/09/2024, 13:42
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆ ತಾಲೂಕಿನ ಭೈರಾಪುರ-ಹೊಸಕೆರೆಯಲ್ಲಿ ನಡೆದ ಜೀಪ್ ರ್ಯಾಲಿ ಕುರಿತು ಅರಣ್ಯ ಸಚಿವ ಈಶ್ವರ ಖಂಡ್ರೆ ಗರಂ ಆಗಿದ್ದಾರೆ. ಪಶ್ಚಿಮ ಘಟ್ಟಗಳ ತಪ್ಪಲು, ಅರಣ್ಯ ಇರೋದು ಮೋಜು ಮಸ್ತಿಗಲ್ಲ ಎಂದು ಅವರು ಖಾರವಾಗಿಯೇ ಹೇಳಿದ್ದಾರೆ. ಹಾಗೆ ಅರಣ್ಯ ಇಲಾಖೆ ವಿರುದ್ಧವೂ ಅರಣ್ಯ ಸಚಿವರು ಕಿಡಿ ಕಾರಿದ್ದಾರೆ.
ಬೈಕ್ ರ್ಯಾಲಿ ಕುರಿತು ಅರಣ್ಯ ಇಲಾಖೆ ವಿರುದ್ಧವೇ ಅರಣ್ಯ ಸಚಿವರೇ ತನಿಖೆಗೆ ಆದೇಶ ನೀಡಿದ್ದಾರೆ.
ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಭೈರಾಪುರ-ಹೊಸಕೆರೆಯಲ್ಲಿ ಜೀಪ್ ರ್ಯಾಲಿ ನಡೆದಿದೆ.
ಆನೆ ಕಾರಿಡಾರ್ ವ್ಯಾಪ್ತಿಯ 9 ಗುಡ್ಡಗಳ ವ್ಯಾಪ್ತಿಯಲ್ಲಿ ಈ ರ್ಯಾಲಿ ನಡೆದಿದೆ. ಸುಮಾರು 80ಕ್ಕೂ ಹೆಚ್ಚು ಜೀಪ್ ಗಳು ರ್ಯಾಲಿಯಲ್ಲಿ ಪಾಲ್ಗೊಂಡಿದ್ದವು. ಸಿಸಿಎಫ್ ದರ್ಜೆಯ ಅಧಿಕಾರಿಗಳ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.
ಅರಣ್ಯ, ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ಸೂಚನೆ ನೀಡಲಾಗಿದೆ.