8:54 AM Tuesday2 - December 2025
ಬ್ರೇಕಿಂಗ್ ನ್ಯೂಸ್
ನಶಾಮುಕ್ತ, ದ್ವೇಷಮುಕ್ತ ಸಮಾಜ ನಿರ್ಮಿಸೋಣ: ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಕರೆ ಮಂಗಳೂರಿನ ಫುಡ್ ಡೆಲಿವರಿ ಬಾಯ್ ನಿಂದ ಸೋಮವಾರಪೇಟೆಯಲ್ಲಿ ಸರಗಳ್ಳತನ..! Kodagu | ನೇಣು ಬಿಗಿದು ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ Tarikere | ಚಿರತೆ ದಾಳಿಗೆ ಬಾಲಕಿ ಬಲಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು… Kodagu | ಹುಣಸೂರು: ರೈತರ ಮೇಲೆ ದಾಳಿ ನಡೆಸುತ್ತಿದ್ದ ಹುಲಿ ಸೆರೆ; ನಿಟ್ಟುಸಿರು… Udupi | ನದಿ, ವೃಕ್ಷ ಸಂರಕ್ಷಣೆ ಸೇರಿದಂತೆ ನವ ಸಂಕಲ್ಪಗಳ ಪಾಲನೆಗೆ ಪ್ರಧಾನಿ… Udupi | ಕೃಷ್ಣನಗರಿಯಲ್ಲಿ ಪ್ರಧಾನಿ ಮೋದಿಗೆ ಬೆಳ್ಳಿ ಕಡೆಗೋಲು ಕೊಡುಗೆ Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ… ಪ್ರಧಾನಿ ಮೋದಿ ಇಂದು ಉಡುಪಿಗೆ: ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ… ಉಡುಪಿಗೆ ಪ್ರಧಾನಿ ಭೇಟಿ: ಎಸ್‌ಪಿಜಿ ಜತೆಗೆ ಖಾಕಿ ಸರ್ಪಗಾವಲು: ನಿಗದಿತ ಸಮಯಕ್ಕೆ ಮುಂಚಿತವಾಗಿಯೇ…

ಇತ್ತೀಚಿನ ಸುದ್ದಿ

ಲವಿ ಗಂಜಿಮಠ ಹಾಗೂ ‘ಆಮ್ಚೆಂ ಶೆತ್’ ಪತ್ರಿಕೆಗೆ ‘ರಾಕ್ಣೊ’ ಪ್ರಶಸ್ತಿ

01/09/2024, 20:52

ಮಂಗಳೂರು(reporter Karnataka.com): ಕೊಂಕಣಿ ಭಾಷೆಯ ಪ್ರಸಿದ್ಧ ಲೇಖಕಿಯಾಗಿರುವ ಲವಿ ಗಂಜಿಮಠ ರವರಿಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಹಾಗೂ ‘ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024’ ವನ್ನು ಬಜ್ಪೆ ಧರ್ಮ ಕೇಂದ್ರದ ಪತ್ರಿಕೆ ‘ಆಮ್ಚೆಂ ಶೆತ್’ ಎಂಬ ಪತ್ರಿಕೆಗೆ ಸೆಪ್ಟೆಂಬರ್ 1ರಂದು ನೀಡಿ ಗೌರವಿಸಲಾಯಿತು.

ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಕ್ಷೇತ್ರದ ಧರ್ಮಧ್ಯಕ್ಷರಾಗಿರುವ ಅತಿ ವಂದನೀಯ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾರವರು ಪ್ರಶಸ್ತಿ ಪ್ರದಾನ ಮಾಡಿದರು. ‘ರಾಕ್ಣೊ’ ವಾರಪತ್ರಿಕೆಯ ಸಂಪಾದಕರಾಗಿರುವ ವಂದನೀಯ ರೂಪೇಶ್ ಮಾಡ್ತಾ ಅವರು ಪ್ರಶಸ್ತಿಯ ಹಾಗೂ ಸಮಾವೇಶದ ಉದ್ದೇಶಗಳನ್ನು ವಿವರಿಸಿದರು. ‘ಕೊಂಕಣಿ ಭಾಷೆಗೆ ಅದರದ್ದೇ ಆದ ದಿಗಂತವಿದೆ. ಈ ಭಾಷೆಗೆ ಬೆಳೆಯಲು ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿರುವ ‘ರಾಕ್ಣೊ’ ಪತ್ರಿಕೆಗೆ ಸಹಕಾರ ಕೋರುತ್ತೇನೆ. ಪ್ರಶಸ್ತಿ ವಿಜೇತರಿಗೆ ಮತ್ತು ಎಲ್ಲಾ ಸಾಹಿತಿಗಳಿಗೆ ಅಭಿನಂದಿಸುತ್ತೇನೆ ‘ ಎಂದು ಬಿಷಪ್ ಆಶೀರ್ವಚನ ನೀಡಿದರು.
ಡಾ. ಎಡ್ವರ್ಡ್ ನಜ್ರೆತ್ ರವರು ಪ್ರಶಸ್ತಿ ವಿಜೇತರ ಪರಿಚಯ ಮಾಡಿಕೊಟ್ಟರು. ನಂತರ ನಡೆದ ಕೊಂಕಣಿ ಲೇಖಕರ ಸಮಾವೇಶದಲ್ಲಿ ಪ್ರಸಿದ್ಧ ಕೊಂಕಣಿ ಕವಿ ಆಂಡ್ರ್ಯೂ ಎಲ್ ಡಿಕೂನ್ಹಾರವರು ಕವಿತೆ ಮತ್ತು ಕಾವ್ಯಾತ್ಮಕ ಬದುಕು ಎಂಬ ಬಗ್ಗೆ, ಲವೀ ಗಂಜಿಮಠರವರು ಪತ್ರಿಕೆಯನ್ನು ಸಂಪಾದಸುವ ಬಗ್ಗೆ ಹಾಗೂ ‘ ನಮಾನ್ ಬಾಳಕ್ ಜೆಜು’ ಪತ್ರಿಕೆಯ ಸಂಪಾದಕರಾಗಿರುವ ವಂದನೀಯ ಐವನ್ ಡಿಸೋಜ಼ರವರು ಓದುಗರ ಪತ್ರವನ್ನು ಬರೆಯುವ ಬಗ್ಗೆ ವಿವರಿಸಿದರು. ನಂತರ ವಂದನೀಯ ರೂಪೇಶ್ ಮಾಡ್ತಾರವರು ಸಂವಾದವನ್ನು ನಡೆಸಿಕೊಟ್ಟರು. ಕಾರ್ಯಕ್ರಮವನ್ನು ಸಂಪಾದಕ ಮಂಡಳಿಯ ಸದಸ್ಯರಾಗಿರುವ ಫ್ರಾನ್ಸಿಸ್ ಡಿ ಕೂನ್ಹಾರವರು ನಿರ್ವಹಿಸಿದರು. ಸಂಪಾದಕ ಮಂಡಳಿಯ ಸದಸ್ಯರಾಗಿರುವ ಪ್ರಮೋದ್ ಹೊಸ್ಪೆಟ್ , ಡಾ. ಎಡ್ವರ್ಡ್ ನಜ್ರೆತ್ ಹಾಗೂ ಲವೀ ಗಂಜಿಮಠ ಅವರು ಸಹಕರಿಸಿದರು. ಹಿರಿಯ ಸಾಹಿತಿಗಳಾದ ವಂದನೀಯ ಅಲ್ಫೋನ್ಸ್ ಡಿಲೀಮಾ, ಡಾಲ್ಫಿ ಕಾಸ್ಸಿಯ, ಎಚ್. ಆರ್. ಆಳ್ವ ಅಲ್ಲದೆ 70 ಹೆಸರಾಂತ ಬರಹಗಾರರು ಭಾಗವಹಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು