11:56 AM Wednesday8 - May 2024
ಬ್ರೇಕಿಂಗ್ ನ್ಯೂಸ್
ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,… ಮಾಜಿ ಪ್ರಧಾನಿ ದೇವೇಗೌಡರಿಗೆ ನೀಡಿದ್ದ, ಸಂಸದ ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ಹಾಸನದ ಸರಕಾರಿ… ಎಸ್ಐಟಿ ತಂಡಕ್ಕೆ ಸ್ವತಃ ತಾನೇ ಗೇಟ್ ತೆರೆದ ಎಚ್.ಡಿ. ರೇವಣ್ಣ!: ಪುತ್ರನ ಬಂಧನದ… ಸೂರ್ಯಾಘಾತ: ವಿಟ್ಲ ಸಮೀಪ ಬಸ್ಸಿನ ಗ್ಲಾಸ್ ಒಡೆದು ಬಾಲಕ ಸಹಿತ 3 ಮಂದಿಗೆ… ಸುಬ್ರಹ್ಮಣ್ಯ: ನವ ವಿವಾಹಿತ ಸಿಡಿಲು ಬಡಿದು ದಾರುಣ ಸಾವು; 15 ದಿನಗಳ ಹಿಂದೆಯಷ್ಟೇ… ತುಂಬೆ ವೆಂಟೆಡ್ ಡ್ಯಾಮ್ ನಲ್ಲಿ ನೀರಿನ ಒಳಹರಿವು ಸ್ಥಗಿತ: ಮೇ 5ರಿಂದ ಪಾಲಿಕೆ… ಮುಳ್ಳೇರಿಯ: ಇತ್ತ ಮಗಳ ಮದುವೆಯ ಮದರಂಗಿ ಶಾಸ್ತ್ರ ನಡೆಯುತ್ತಿದ್ದಂತೆ ಅತ್ತ ಅಪ್ಪ ಆತ್ಮಹತ್ಯೆ ಕೊರೊನಾ ಲಸಿಕೆ ಕೋವಿಶೀಲ್ಡ್‌ ಅಡ್ಡ ಪರಿಣಾಮಗಳು: ಅಧ್ಯಯನ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ… ಸೆಕ್ಸ್ ವೀಡಿಯೊ ಪ್ರಕರಣ: ಜೆಡಿಎಸ್ ನಾಯಕ ರೇವಣ್ಣಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು…

ಇತ್ತೀಚಿನ ಸುದ್ದಿ

ತಲೆಖಾನ: ಗಂಡುಗಲಿ ಕುಮಾರರಾಮ ಜಯಂತಿ ಆಚರಣೆ: ಸಮಾಧಿ ಸ್ಥಳದಲ್ಲಿ ಭಾವಪೂರ್ಣ ನುಡಿನಮನ

25/08/2021, 09:43

ವಿರುಪಾಕ್ಷ ಸ್ವಾಮಿ ಸಾಲುಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮುಸ್ಕಿ ತಾಲೂಕಿನ ತಲೆಕಾನ್ ಗ್ರಾಮದಲ್ಲಿ ಸುಲ್ತಾನರಿಗೆಸಿಂಹಸ್ವಪ್ನವಾಗಿ 64 ಯುದ್ಧ ತಂತ್ರ ನಿಪುಣನಾಗಿದ್ದ ಗಂಡುಗಲಿ ಕುಮಾರರಾಮ ಅವರ ಜಯಂತಿ ಆಚರಿಸಲಾಯಿತು.

ದಕ್ಷಿಣ ಭಾರತದಲ್ಲಿ ಶೌರ್ಯ ಪರಾಕ್ರಮ ಮೆರೆದ, ಕನ್ನಡ ನಾಡಿನ ನೆಲ- ಜಲ-  ಭಾಷೆ- ಸಂಸ್ಕೃತಿ ಉಳಿಸಲು ಹೋರಾಡಿದ ವೈರಿಗಳಿಗೆ ಸಿಂಹಸ್ವಪ್ನ ನಾದ ಗಂಡುಗಲಿ ಕುಮಾರರಾಮ ಜಯಂತಿಯನ್ನು ಪೂಜ್ಯ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ತಲೆಖಾನ್ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಸ್ಕಿಹಾಳ ವಾಲ್ಮೀಕಿ ಮಠದ ಶ್ರೀ ಆತ್ಮಾನಂದ ಸ್ವಾಮೀಜಿಗಳು ಗ್ರಾಮದ ಸಮಾಧಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ,

 ವಾಲ್ಮೀಕಿ ಕುಲ ತಿಲಕ ಕುಮಾರರಾಮ ಪರನಾರಿ ಸಹೋದರತ್ವ ಭಾವನೆಯ ಆದರ್ಶಗಳನ್ನು ಸಂಸ್ಕೃತಿ, ಆಚಾರ ವಿಚಾರಗಳನ್ನು ಇಂದಿನ ಯುವ ಜನಾಂಗ ರೂಢಿಸಿಕೊಳ್ಳಬೇಕು. ಆತನ ಪರಾಕ್ರಮ, ಜನಪರ ಆಡಳಿತ ವೈಖರಿ, ಯುದ್ಧ ನೀತಿ, ಮಾನವೀಯ ಮೌಲ್ಯಗಳನ್ನು ಹೊಂದಿದ್ದನು. ಇಂತಹ ಮಹಾನ್ ವೀರನ ದೇಶ ಭಕ್ತಿ ನಾಡಿನ ರಕ್ಷಣೆಗಾಗಿ ಪ್ರಾಣ ಬಲಿದಾನ ಮಾಡಿದ್ದಾರೆ. ವಾಲ್ಮೀಕಿ ಸಮಾಜದ ಅದೆಷ್ಟೋ ರಾಜರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ತ್ಯಾಗ ಮಾಡಿದ ಸಮಾಜಕ್ಕೆ ಇಂದಿನ ಸರ್ಕಾರ ಸಮಾಜದ ಎಲ್ಲ ರೀತಿಯ ಸಹಕಾರ ಪಡೆದು ಮೀಸಲಾತಿಯಲ್ಲಿ ಮೀನಮೇಷ ಮಾಡುತ್ತಿರುವದು ವಿಷಾದನೀಯ ಸಂಗತಿಯಾಗಿದೆ. ಇನ್ನಾದರೂ ಈ ಸರ್ಕಾರ ಧೋರಣೆಯಿಂದ ಮುಕ್ತವಾಗುತ್ತಾ ಅಥವಾ ಮುಂದುವರಿಯುತ್ತಾ ಕಾದು ನೋಡಬೇಕಾಗಿದೆ ಎಂದು ಹೇಳಿದರು.

ನಂತರದಲ್ಲಿ ವಾಲ್ಮೀಕಿ ಸಮಾನ ಮನಸ್ಕರ ಸಂಘಟನೆ ಮುಖಂಡರಾದ ಅಶೋಕ ದಿದ್ದಿಗಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೊಲ್ಲ ಕುದುರೆ ಸವಾರಿ ಕುಮಾರರಾಮ ಜೀವನವ ಹಿನ್ನೆಲೆ, ರಾಜನೀತಿ ಬಗ್ಗೆ ಮಾತನಾಡಿದರು.

ಈ ಸಂದರ್ಭ ಶೇಖರಗೌಡ ಕಾಟಗಲ್ಲ, ಬಸವರಾಜ ತುಕ್ಕಲದಿನ್ನಿ, ಸೇತುರಾಮ ನಾಯಕ ಗೌಡೂರು,  ಕನಕಪ್ಪ ತಲೆಖಾನ, ರಮೇಶ ತಲೆಖಾನ,ಸೋಮಣ್ಣ ಲಿಂಗಸುಗೂರು, ಸೋಮಶೇಖರ ಸಿಂಧನೂರು, ಗ್ವಾಲಪ್ಪ ಉಸ್ಕಿಹಾಳ, ವೆಂಕಟೇಶ, ಅಮರೇಶ,ಜಕ್ಕಪ್ಪ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು