1:04 PM Thursday3 - July 2025
ಬ್ರೇಕಿಂಗ್ ನ್ಯೂಸ್
ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ…

ಇತ್ತೀಚಿನ ಸುದ್ದಿ

ತಲೆಖಾನ: ಗಂಡುಗಲಿ ಕುಮಾರರಾಮ ಜಯಂತಿ ಆಚರಣೆ: ಸಮಾಧಿ ಸ್ಥಳದಲ್ಲಿ ಭಾವಪೂರ್ಣ ನುಡಿನಮನ

25/08/2021, 09:43

ವಿರುಪಾಕ್ಷ ಸ್ವಾಮಿ ಸಾಲುಮಠ ಅಂತರಗಂಗೆ ರಾಯಚೂರು
info.reporterkarnataka@gmail.com

ಮುಸ್ಕಿ ತಾಲೂಕಿನ ತಲೆಕಾನ್ ಗ್ರಾಮದಲ್ಲಿ ಸುಲ್ತಾನರಿಗೆಸಿಂಹಸ್ವಪ್ನವಾಗಿ 64 ಯುದ್ಧ ತಂತ್ರ ನಿಪುಣನಾಗಿದ್ದ ಗಂಡುಗಲಿ ಕುಮಾರರಾಮ ಅವರ ಜಯಂತಿ ಆಚರಿಸಲಾಯಿತು.

ದಕ್ಷಿಣ ಭಾರತದಲ್ಲಿ ಶೌರ್ಯ ಪರಾಕ್ರಮ ಮೆರೆದ, ಕನ್ನಡ ನಾಡಿನ ನೆಲ- ಜಲ-  ಭಾಷೆ- ಸಂಸ್ಕೃತಿ ಉಳಿಸಲು ಹೋರಾಡಿದ ವೈರಿಗಳಿಗೆ ಸಿಂಹಸ್ವಪ್ನ ನಾದ ಗಂಡುಗಲಿ ಕುಮಾರರಾಮ ಜಯಂತಿಯನ್ನು ಪೂಜ್ಯ ಆತ್ಮಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ತಲೆಖಾನ್ ಗ್ರಾಮದಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಉಸ್ಕಿಹಾಳ ವಾಲ್ಮೀಕಿ ಮಠದ ಶ್ರೀ ಆತ್ಮಾನಂದ ಸ್ವಾಮೀಜಿಗಳು ಗ್ರಾಮದ ಸಮಾಧಿ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ,

 ವಾಲ್ಮೀಕಿ ಕುಲ ತಿಲಕ ಕುಮಾರರಾಮ ಪರನಾರಿ ಸಹೋದರತ್ವ ಭಾವನೆಯ ಆದರ್ಶಗಳನ್ನು ಸಂಸ್ಕೃತಿ, ಆಚಾರ ವಿಚಾರಗಳನ್ನು ಇಂದಿನ ಯುವ ಜನಾಂಗ ರೂಢಿಸಿಕೊಳ್ಳಬೇಕು. ಆತನ ಪರಾಕ್ರಮ, ಜನಪರ ಆಡಳಿತ ವೈಖರಿ, ಯುದ್ಧ ನೀತಿ, ಮಾನವೀಯ ಮೌಲ್ಯಗಳನ್ನು ಹೊಂದಿದ್ದನು. ಇಂತಹ ಮಹಾನ್ ವೀರನ ದೇಶ ಭಕ್ತಿ ನಾಡಿನ ರಕ್ಷಣೆಗಾಗಿ ಪ್ರಾಣ ಬಲಿದಾನ ಮಾಡಿದ್ದಾರೆ. ವಾಲ್ಮೀಕಿ ಸಮಾಜದ ಅದೆಷ್ಟೋ ರಾಜರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ತ್ಯಾಗ ಮಾಡಿದ ಸಮಾಜಕ್ಕೆ ಇಂದಿನ ಸರ್ಕಾರ ಸಮಾಜದ ಎಲ್ಲ ರೀತಿಯ ಸಹಕಾರ ಪಡೆದು ಮೀಸಲಾತಿಯಲ್ಲಿ ಮೀನಮೇಷ ಮಾಡುತ್ತಿರುವದು ವಿಷಾದನೀಯ ಸಂಗತಿಯಾಗಿದೆ. ಇನ್ನಾದರೂ ಈ ಸರ್ಕಾರ ಧೋರಣೆಯಿಂದ ಮುಕ್ತವಾಗುತ್ತಾ ಅಥವಾ ಮುಂದುವರಿಯುತ್ತಾ ಕಾದು ನೋಡಬೇಕಾಗಿದೆ ಎಂದು ಹೇಳಿದರು.

ನಂತರದಲ್ಲಿ ವಾಲ್ಮೀಕಿ ಸಮಾನ ಮನಸ್ಕರ ಸಂಘಟನೆ ಮುಖಂಡರಾದ ಅಶೋಕ ದಿದ್ದಿಗಿ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೊಲ್ಲ ಕುದುರೆ ಸವಾರಿ ಕುಮಾರರಾಮ ಜೀವನವ ಹಿನ್ನೆಲೆ, ರಾಜನೀತಿ ಬಗ್ಗೆ ಮಾತನಾಡಿದರು.

ಈ ಸಂದರ್ಭ ಶೇಖರಗೌಡ ಕಾಟಗಲ್ಲ, ಬಸವರಾಜ ತುಕ್ಕಲದಿನ್ನಿ, ಸೇತುರಾಮ ನಾಯಕ ಗೌಡೂರು,  ಕನಕಪ್ಪ ತಲೆಖಾನ, ರಮೇಶ ತಲೆಖಾನ,ಸೋಮಣ್ಣ ಲಿಂಗಸುಗೂರು, ಸೋಮಶೇಖರ ಸಿಂಧನೂರು, ಗ್ವಾಲಪ್ಪ ಉಸ್ಕಿಹಾಳ, ವೆಂಕಟೇಶ, ಅಮರೇಶ,ಜಕ್ಕಪ್ಪ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು