1:09 AM Thursday23 - April 2026
ಬ್ರೇಕಿಂಗ್ ನ್ಯೂಸ್
ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್… ವಿದೇಶಿ ಮಹಿಳೆಯ ಅತ್ಯಾಚಾರ ದೌರ್ಜನ್ಯ ಪ್ರಕರಣ: ‘ದೇವಿ ವಿಲ್ಲಾ’ ಹೋಂಸ್ಟೇ ಪರವಾನಗಿ ರದ್ದು ಬಸವಕಲ್ಯಾಣ ಬಸವೇಶ್ವರ ರಥೋತ್ಸವದಲ್ಲಿ ಭೀಕರ ದುರಂತ: ರಥದ ಚಕ್ರಕ್ಕೆ ಸಿಲುಕಿ ಭಕ್ತನ ಎರಡು… ತಮಿಳುನಾಡಿನಲ್ಲಿ ಮತದಾನ: ಸಿಎಂ ಸ್ಟಾಲಿನ್, ಸೂಪರ್ ಸ್ಟಾರ್ ರಜನೀಕಾಂತ್, ಪ್ರಸಿದ್ಧ ನಟ ವಿಜಯ್… ಪ್ರಧಾನಿ ಮೋದಿಗೆ ಭಯೋತ್ಪಾದಕ ಎಂದು ನಿಂದನೆ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಚುನಾವಣಾ ಆಯೋಗ… ಚಾಮರಾಜನಗರ | ಮಲೆ ಮಹದೇಶ್ವರ ವನ್ಯಜೀವಿ ಧಾಮದ ದಟ್ಟ ಕಾಡಿನಲ್ಲಿ ಮಾನವನ ಅಸ್ಥಿಪಂಜರ…

ಇತ್ತೀಚಿನ ಸುದ್ದಿ

ಚಿತ್ತಾಪುರ ರಾಘವೇಂದ್ರ ಮಠದಲ್ಲಿ ಶ್ರೀ ಶಂಕರ ಉಪದೇಶಾಮೃತ ಉಪನ್ಯಾಸ

09/07/2024, 19:41

ಶಿವು ರಾಠೋಡ ಚಿತ್ತಾಪುರ ಯಾದಗಿರಿ

info.reporterkarnataka@gmail.com

ಸನಾತನ ಧರ್ಮವನ್ನು ಉಳಿಸಲು ಶ್ರೀ ಶಂಕರಾಚಾರ್ಯರು ಸತತ ಹೋರಾಟ ಮಾಡಿ ಸನಾತನ ಧರ್ಮವನ್ನು ಉಳಿಸಿ ನಮ್ಮ ಸಂಸ್ಕೃತಿಯನ್ನು ಬೆಳಿಸಿದ್ದಾರೆ ಎಂದು ಶಿರಳಗಿ ತಾಲೂಕಿನ ಚೈತನ್ಯ ರಾಜಾರಾಮ್ ಕ್ಷೇತ್ರದ ಸಿದ್ದಾಪುರದ ಶ್ರೀಗಳಾದ ಶ್ರೀ ಬ್ರಹ್ಮಾನಂದ ಭಾರತಿ ತೀರ್ಥರು ಉಪನ್ಯಾಸ ನೀಡಿದರು.


ಪಟ್ಟಣದ ಬ್ರಾಹ್ಮಣ ಗಲ್ಲಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಶ್ರೀ ಶಂಕರ ಉಪದೇಶಾಮೃತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಪ್ರ ಬಾಂಧವರಿಗೆ ಉಪನ್ಯಾಸ ನೀಡಿದ ಅವರು, ಶಂಕರಾಚಾರ್ಯರು ಜಗತ್ತಿನಲ್ಲಿ ತನ್ನದೆ ಆದ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿರುವ ಸನಾತನ ಧರ್ಮವನ್ನು ಉಳಿಸಲು ಅಖಂಡ ಭಾರತವನ್ನು ಒಂದು ಮಾಡಿ ನಾಲ್ಕು ದಿಕ್ಕುಗಳಲ್ಲಿ ಶಾಖಾಮಠಗಳನ್ನು ಸ್ಥಾಪನೆ ಮಾಡಿ ಅವತ್ತಿನಿಂದ ಇವತ್ತಿನ ವರೆಗೆ ಸನಾತನ ಧರ್ಮವನ್ನು ಎತ್ತಿ ಹಿಡಿದು ರಕ್ಷಣೆ ಮಾಡಿದ್ದಾರೆ. ಭಾರತದಲ್ಲಿ ಬ್ರಿಟಿಷರು, ಫ್ರೆಂಚರು, ಮೊಗಲರು ಬಂದು ಸನಾತನ ಧರ್ಮವನ್ನು ಅಳಿಸಲು ಸಾಕಷ್ಟು ಪ್ರಯತ್ನ ಮಾಡಿದರು ಅದರಂತೆ ವಿದೇಶದ ಅನೇಕ ಮತಗಳು ಸರ್ವನಾಶ ವಾಗಿ ಹೋದವು. ಆದರೆ ಸನಾತನ ಸಂಸ್ಕೃತಿ ನಾಶವಾಗಲಿಲ್ಲ. ಮತ್ತೆ ಮುಂದೆಯೂ ನಾಶವಾಗುವುದಿಲ್ಲ. ಯಾಕಂದರೆ ಯತಿ ವರಣ್ಯ ಶಂಕರಾಚಾರ್ಯರು ಎಲ್ಲವನ್ನು ಸಂ‌ಸ್ಕೃತಿಯ ಉಳಿವಿಗಾಗಿ ಸಮರ್ಪಣೆ ಮಾಡಿದ್ದಾರೆ. ಇಂಥವರಿಗೆ ಕೃತಜ್ಞತೆ ಸಲ್ಲಿಸಲು ಪೂಜೆ, ಆರಾಧನೆ, ಪ್ರಾರ್ಥನೆ ಮಾಡಿದರೆ ಸಾಲದು ಹೊರತಾಗಿ ನಮ್ಮ ಸನಾತನ ಧರ್ಮದ ಬಗ್ಗೆ, ಉಪನಿಷತ್ತು, ಭಗವದ್ಗೀತೆ,ಶ್ರೀ ಶಂಕರಾಚಾರ್ಯರ ಬಗ್ಗೆ ಜನರಿಗೆ ಜಾಗೃತಿ ಮೂಡಿಸಬೇಕು. ಇದರ ಅರ್ಥಗಳಿಂದ, ಶಂಕರಾಚಾರ್ಯರ ಉಪದೇಶಗಳಿಂದ, ಭಗವದ್ಗೀತೆಯ ಸಾರದಿಂದ ನಮ್ಮ ಬದುಕಿನ ಜೊತೆಗೆ ಪ್ರಪಂಚದ ಎಲ್ಲರ ಬದುರು ಸುಂದರವಾಗಿಸಲು ಸಾಧ್ಯ ಎಂದು ಉಪದೇಶ ಮಾಡಿದರು.
ಈ ಕಾರ್ಯಕ್ರಮದ ಅಂಗವಾಗಿ ಶೃತಿ ಜಾನಿಬ್, ಉಮಾ ದೇಶಪಾಂಡೆ,ಸಕ್ಕುಬಾಯಿ ಕುಲಕರ್ಣಿ ಮತ್ತು ಅನೇಕ ಮಹಿಳೆಯರಿಂದ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಶ್ರೀ ಬ್ರಹ್ಮಾನಂದ ಭಾರತಿ ತೀರ್ಥರ ಆಗಮನಕ್ಕೆ ವಿಪ್ರರು ಸಾಂಪ್ರದಾಯಿಕ ಉಡುಪಿನಲ್ಲಿ ಸ್ವಾಗತ ಕೋರಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಮಠದ ಅರ್ಚಕ ಗುರುರಾಜಾ ಆಚಾರ್ಯ, ಸಮಾಜದ ಅಧ್ಯಕ್ಷ ಗಿರಿಶ್ ಜಾನಿಬ್, ಕಾರ್ಯದರ್ಶಿ ಅನಂತನಾಗ ದೇಶಪಾಂಡೆ ಸೇರಿದಂತೆ ವಿಪ್ರ ಸಮಾಜದ ಅನೇಕ ಮುಖಂಡರು ಮತ್ತು ಮಹಿಳೆಯರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು