3:27 PM Monday30 - March 2026
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ. ಎಂ.… Kodagu | ಶನಿವಾರಸಂತೆ: ಟ್ರ್ಯಾಕ್ಟರ್ -ಕಾರು ಅಪಘಾತ; ಟ್ರ್ಯಾಕ್ಟರ್ ಚಾಲಕ ಸಾವು ರಾಜ್ಯದಲ್ಲಿ ಆಟೋ ಎಲ್‌ಪಿಜಿ ಕೊರತೆ ಇಲ್ಲ: ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ… ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರಕಾರಿ ಶುಶ್ರೂಷಾ ಕಾಲೇಜು 2ನೇ ಘಟಿಕೋತ್ಸವ ಕೇಂದ್ರ ಸರಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ… ಕೈ ನಾಯಕರ ಸಂಧಾನ ಯಶಸ್ವಿ: ದಾವಣಗೆರೆ ದಕ್ಷಿಣ ಬಂಡಾಯ ಅಭ್ಯರ್ಥಿ ಪೈಲ್ವಾನ್ ಸ್ಪರ್ಧೆಯಿಂದ… ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿಯುತ್ತಿರುವ ಮೀಸಲು ಅರಣ್ಯ; ಅಪಾಯದಲ್ಲಿ ಜೀವ ಸಂಕುಲ 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ: ಸಚಿವ ಮಧು ಬಂಗಾರಪ್ಪ… ತುಮಕೂರು | ಮಧ್ಯರಾತ್ರಿ ಕುಡುಕ ಪುಂಡರ ಅಟ್ಟಹಾಸ: 10ಕ್ಕೂ ಅಧಿಕ ವಾಹನಗಳ ಗ್ಲಾಸ್… ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯಾದ ಉಪ ಚುನಾವಣೆ: ಪೈಲ್ವಾನ್ ಮನವೊಲಿಸಲು ಜಮೀರ್‌ಗೆ ಮುಖ್ಯಮಂತ್ರಿ ಸೂಚನೆ

ಇತ್ತೀಚಿನ ಸುದ್ದಿ

ಮಾಜಿ ಯೋಧನಿಗೆ ಕೊಟ್ಟ ಜಾಗದಲ್ಲಿ ಮೋಸ; ಸೈನಿಕ ಭವನದ ಕೊರತೆ, ಸೌಲಭ್ಯ ವಂಚನೆ: ಮಾಜಿ ಸೈನಿಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರ ಅಳಲು

06/07/2024, 17:22

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ವತಿಯಿಂದ ಸೈನಿಕರಿಗೆ ಸಿಗಬೇಕಾದ ಸೌಲಭ್ಯಗಳು ದೊರಕದೇ ಇರುವುದು ಮತ್ತು ದೇಶಕ್ಕಾಗಿ ಒಬ್ಬ ಯೋಧ ಹುತಾತ್ಮನಾದಾಗ ಪಾರ್ಥಿವ ಶರೀರ ಬಂದಾಗ ಅಂತಿಮ ನಮನ ಸಲ್ಲಿಸಲು ಒಂದು ಸ್ಥಳವೂ ಇಲ್ಲದಿರುವುದು. ಹಾಗೆ ಒಂದು ಭವನವು ಇಲ್ಲದಂತಾಗಿದೆ ಇದೆಂಥ ವಿಪರ್ಯಾಸ..
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್ ಪಾಟೀಲ್ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಳಲು ವ್ಯಕ್ತಪಡಿಸಿದರು.
ಮಾಜಿ ಸೈನಿಕರು 27- 28 ವರ್ಷ ದುಡಿದು ಬಂದ ಹಣದಲ್ಲಿ ಒಂದು ಜಮೀನು ಖರೀದಿಸಿದರು. ಸರ್ವೇ ನಂಬರ್ 216/ ಪೋವ 1/1ನಲ್ಲಿ 3 ಎಕರೆ N.A. ನಿವೇಶನದ ಮಾಲೀಕರಾದ ವೆಂಕಟೇಶ್ ಸುರೇಂದ್ರ ರಾವ್ ದೇಶಪಾಂಡೆ, ಉಪ್ಪಣ್ಣ ಸುರೇಂದ್ರ ರಾವ್ ದೇಶಪಾಂಡೆ, ಶಾಮ್ ಸುಂದರ್ ಸುರೇಂದ್ರ ರಾವ್ ದೇಶಪಾಂಡೆ ಕುಟುಂಬಸ್ಥರು. ನಿಂಗನಗೌಡ ಎಸ್ ಪಾಟೀಲ್ ಅವರು. ತಮ್ಮ ತಾಯಿ ಹಾಗೂ ಅಕ್ಕನ ಹೆಸರಿನಲ್ಲಿ ಖರೀದಿಸಿದ ಜಾಗವನ್ನು ಮಾಲೀಕರು ತಮಗೆ ನೀಡಿರುವ ಪತ್ರದಲ್ಲಿ ಕೊಟ್ಟಿರುವ ಜಾಗದಲ್ಲಿ ಅಳತೆಯಲ್ಲೂ ಮೋಸ ಮಾಡುತ್ತಿದ್ದಾರೆ. ಅದನ್ನು ಜಿಲ್ಲಾಧಿಕಾರಿಗಳಿಗೆ, ಹುಣಸಗಿ ಪಟ್ಟಣ ಪಂಚಾಯತಿ ಅಧಿಕಾರಿಗಳಿಗೂ ತಿಳಿಸಿದರೂ ಅದರ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲಿ ಇರುವುದು ಖಂಡನೆ ಅಪರಾಧ ಎಂದು ತಮ್ಮ ನೋವನ್ನು ತೋರಿಕೊಂಡರು.
ಯಾದಗಿರಿ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಸಹ ನಿರ್ದೇಶಕರು ಕೂಡ ಸೈನಿಕರ ಕುಟುಂಬಕ್ಕೆ ಅನ್ಯಾಯವಾಗುತ್ತಿದೆ ಎಂದು ಗಮನ ಹರಿಸದೇ ಇರುವುದು ನೋವಿನ ಸಂಗತಿ ಎಂದು ಅವರು ನುಡಿದರು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಯಾದಗಿರಿ ಜಿಲ್ಲಾಧ್ಯಕ್ಷರು ಲಿಂಗನಗೌಡ ಎಸ್. ಪಾಟೀಲ್,
ಯಾದಗಿರಿ ಪ್ರಧಾನ ಕಾರ್ಯದರ್ಶಿ ಮಡಿವಾಳಪ್ಪ ಎಸ್ ಕಟ್ಟಿಮನಿ ಹುಣಸಗಿ, ಅಧ್ಯಕ್ಷರು ವೀರೇಶ್ ಪ್ರಭುಗೌಡ ಗೋಳೇಬಾಳ್, ಸುರಪುರ ತಾಲೂಕ ಅಧ್ಯಕ್ಷ ಭೀಮ ನಾಯಕ್ ಲಕ್ಷ್ಮಿಪುರ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು