9:02 AM Friday5 - July 2024
ಬ್ರೇಕಿಂಗ್ ನ್ಯೂಸ್
ಶ್ರಮ ಸಂಸ್ಕೃತಿ ಗೌರವಿಸುವ ಹಬ್ಬ ಮಣ್ಣೆತ್ತಿನ ಅಮಾವಾಸ್ಯೆ: ಉತ್ತರ ಕರ್ನಾಟಕದಲ್ಲೆಡೆ ಭಾರೀ ಸಂಭ್ರಮ ಮಂಗಳೂರಿನ ವಿವಿಧಡೆ ಟ್ರಾಫಿಕ್ ಪೊಲೀಸರಿಂದ ಕರ್ಕಶ ಹಾರ್ನ್, ಎಲ್ಇಡಿ ಲೈಟ್ ತೆರವು ಕಾರ್ಯಾಚರಣೆ ಹುಣಸಗಿ: ವಿದ್ಯಾನಂದ ಶರಣರ 18ನೇ ವರ್ಷದ ಪುಣ್ಯಸ್ಮರಣೆ; ಸತ್ಸಂಗ ಸಂಜೀವಿನಿ ಕೂಟ ನೀಟ್ ಪರೀಕ್ಷೆ ಹಗರಣ: ಕೇಂದ್ರ ಸರಕಾರ ವಿರುದ್ಧ ಕಾಂಗ್ರೆಸ್, ಎನ್ ಎಸ್ ಯುಐ… ಚಾರ್ಮಾಡಿ ಘಾಟಿಯಲ್ಲಿ ಕಸ ಎಸೆದ ಎಳನೀರು ವಾಹನದ ಚಾಲಕನ ಮೇಲೆ ಕೇಸ್; ಚಾಲಕನಿಂದಲೇ… ಪಿಎಂ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ಕಲ್ಯಾಣ ಕರ್ನಾಟಕ ಅಭಿವೃದ್ದಿ, ಬೆಂಗಳೂರಿನಲ್ಲಿ ಸುರಂಗ… 1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ… ಶಹಪುರ್ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯದ ಬದನೆ ಸಾಂಬಾರಿನಲ್ಲಿ ಹುಳ… ನಿಮ್ಮ ಕನಸಿನ ಮನೆಯನ್ನು ಬಹುಮಾಮವಾಗಿ ಗೆಲ್ಲಬೇಕೆ ? ಹಾಗಿದ್ದರೆ ಇಲ್ಲಿದೆ ಸುವರ್ಣಾವಕಾಶ ಫುಟ್ ಪಾತ್ ಇರುವುದು ಸಾರ್ವಜನಿಕರಿಗೆ; ಅನಧಿಕೃತ ಗೂಡಂಗಡಿಗಳ ತೆರವಿಗೆ ಕ್ರಮ: ಮೇಯರ್ ಸುಧೀರ್…

ಇತ್ತೀಚಿನ ಸುದ್ದಿ

1.80 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಬೆಳಗೇರಾ ಸೇತುವೆ ಸಂಚಾರಕ್ಕೆ ರೆಡಿ: ಹೋರಾಟಕ್ಕೆ ಸಂದ ಜಯ ಎಂದ ಉಮೇಶ ಕೆ. ಮುದ್ನಾಳ

29/06/2024, 21:09

ಶಿವು ರಾಠೋಡ ಹುಣಸಗಿ ಯಾದಗಿರಿ

info.reporterkarnataka@gmail.com

ಕಳೆದ ಎರಡು ವರ್ಷಗಳ ಧಾರಾಕಾರ ಸುರಿದ ಮಳೆಗೆ ಇನ್ನಷ್ಟು ಕೊಚ್ಚಿಕೊಂಡು ಹೋದ ಸೇತುವೆ ನಿರ್ಮಾಣಕ್ಕೆ ಭತ್ತ ನಾಟಿ ಮಾಡುವ ಮುಖಾಂತರ ವಿನೂತನ ಪ್ರತಿಭಟನೆ ನಡೆಸಿದ್ದಕ್ಕೆ ಇದೀಗ 1ಕೋಟಿ 80 ಲಕ್ಷ ರೂ. ಗಳ ವೆಚ್ಚದಲ್ಲಿ ಹೊಸ ಸೇತುವೆ ನಿರ್ಮಾಣವಾಗಿದೆ ಎಂದು ಸಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ತಿಳಿಸಿದ್ದಾರೆ.


ಈ ಕುರಿತು ಸ್ಥಳಕ್ಕೆ ಭೇಟ ನೀಡಿ ಸೇತುವೆ ನಿರ್ಮಾಣವಾಗಿದ್ದನ್ನು ಮನಗಂಡ ನಂತರ ಹೇಳಿಕೆ ನೀಡಿದ ಅವರು, ಕಳೆದ ವರ್ಷ ಮಹಿಳೆಯರು ಹಾಗೂ ರೈತರು ಸೇರಿಕೊಂಡು ಬತ್ತದ ನಾಟಿಯನ್ನು ಹಾಡು ಹಾಡುವ ಮಾಡುವ ಮೂಲಕ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಇದಾದ ನಂತರ ಸೇತುವೆ ಹಾಗೂ ರಸ್ತೆ ಸುಮಾರು 1.80 ಕೋ.ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗಿದೆ. ಈ ಸೇತುವೆಯಿಂದ ಕೇವಲ ಮುಂಡರಗಿ-ಬೆಳಗೇರಿ ಅಲ್ಲದೇ ಸುತ್ತಮುತ್ತಲ ಹತ್ತಾರು ಹಳ್ಳಿಗಳಿಗೆ ಅನುಕೂಲವಾಗಲಿದೆ. ಇದರ ಜೊತೆಗೆ ಬಸ್ ಸಂಚಾರ ಬಂದಾಗಿತ್ತು. ಈದೀಗ ಬಸ್ ಸಂಚಾರವೂ ಆರಂಭವಾಗಲಿದೆ ಎಂದು ಅವರು ತಿಳಿಸಿದರು.


ಜೊತೆಗೆ ಸ್ಥಳದಲ್ಲಿಯೇ ಯಾದಗಿರಿ ಮತಕ್ಷೇತ್ರದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದಾಗ ಶಾಸಕರು ಸಧ್ಯ ತಾತ್ಕಾಲಿಕವಾಗಿ ನಿರ್ಮಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ನಬಾರ್ಡ, ಕೆಕೆಆರ್‌ಡಿಬಿ ಇಲ್ಲವೇ ತಮ್ಮ ಶಾಸಕರ ಅನುದಾನದಲ್ಲಿ ಸೇತುವೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅದರಂತೆ ಈದೀಗ ಸೇತುವೆ ನಿರ್ಮಾಣವಾಗಿರುವುದು ಹೋರಾಟಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದರು. ಈದೀಗ ಶಾಸಕರು ಸಮಯ ನಿಗದಿಪಡಿಸಿ ಒಂದು ವಾರದಲ್ಲಿಯೇ ಸೇತುವೆ ಉದ್ಘಾಟನೆ ನೆರವೇರಿಸುವಂತೆ ಒತ್ತಾಯ ಮಾಡುವುದಾಗಿ ತಿಳಿಸಿದ್ದಾರೆ.
ಈ ವೇಳೆ ಬೆಳಗೇರಾ ಗ್ರಾಮಸ್ಥರಾದ ಆಂಜಿನೇಯ ನಾಯ್ಕೋಡಿ, ರಫೀಕ್ ಪಟೇಲ್, ಬಾಬುಖಾನ್, ಈರಪ್ಪ, ನಿಂಗಪ್ಪ ಮೋನಪ್ಪ ಸೇರಿ ಅನೇಕರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು