7:23 AM Friday6 - March 2026
ಬ್ರೇಕಿಂಗ್ ನ್ಯೂಸ್
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ, ವಿಸ್ತೃತ, ಹವಾನಿಯಂತ್ರಿತ ಬಿ.ಸಿ. ರೋಡ್ ಶಾಖೆ… ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ: ಶುಭ ಹಾರೈಸಿದ ಡಿಕೆಶಿ- ಪೊನ್ನಣ್ಣ ಬೇಡ್ತಿ ಸಮೀಪ ಕೆಎಸ್ಸಾರ್ಟಿಸಿ ಬಸ್ -ಕಾರು ಡಿಕ್ಕಿ,: ಮಂಗಳೂರಿನ ಉದ್ಯಮಿ ಸಾವು ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ…

ಇತ್ತೀಚಿನ ಸುದ್ದಿ

ಉದುರುತ್ತಿದೆ ಶಾಲಾ ಆವರಣ ಗೋಡೆ ಕಲ್ಲುಗಳು; ಬಿಸಿಯೂಟದ ಕೊಠಡಿಯೂ ಅಪಾಯದಲ್ಲಿ: ಸಮಸ್ಯೆಗಳ ಸುಳಿಯಲ್ಲಿ ಅಜ್ಜಿಬೆಟ್ಟು ಪ್ರಾಥಮಿಕ ಶಾಲೆ

05/06/2024, 15:52

ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್

info.reporterkarnataka@gmail.ಕಂ

ಉದುರುತ್ತಿರುವ ಕಂಪೌಂಡಿನ ಕಲ್ಲುಗಳು, ಮತ್ತೊಂದು ಕಡೆ ಬಿರುಕುಬಿಟ್ಟಿರುವ ಕಂಪೌಂಡ್ ಇನ್ನೊಂದು ಕಡೆ ಕಂಪೌಂಡಿನ ಕಲ್ಲುಗಳು ಶಾಲಾ ರಸ್ತೆಯಲ್ಲಿ ಬಿದ್ದಿವೆ. ಅಷ್ಟೇ ಅಲ್ಲದೇ ಕಂಪೌಂಡಿನ ಮುಖದ್ವಾರವೂ ಕಂಪೌಂಡಿನಿಂದ ಬೇರ್ಪಟ್ಟಿದೆ.
ಇದು ಬಂಟ್ವಾಳ ಮೂಡ ಗ್ರಾಮದ ಅಜ್ಜಿಬೆಟ್ಟು ಬಳಿಯ ಸರಕಾರಿ ಹಿರಿಯ ಶಾಲೆಯ ಕಂಪೌಂಡಿನ ದುಸ್ಥಿತಿ. ಕಳೆದ ವರ್ಷ ಶಾಲೆಯ ಆವರಣದಿಂದ ಶಾಲಾ ಕಂಪೌಂಡು ಕುಸಿದುಬಿದ್ದಿದೆ.


ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಹೃದಯಭಾಗದಲ್ಲೇ ಇರುವ ಅಜ್ಜಿಬೆಟ್ಟು ಪ್ರಾಥಮಿಕ ಶಾಲೆ ಇನ್ನೇನು 100 ವರ್ಷ ಸಮೀಪಿಸುತ್ತಿದೆ. ಸರಕಾರಿ ಶಾಲೆ ಉಳಿವಿಗಾಗಿ ಶಾಲಾಭಿವೃದ್ದಿ ಸಮಿತಿಯಿಂದ ಎಲ್‌ಕೆಜಿ, ಯುಕೆಜಿ ಆರಂಭಸಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಆದರೆ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಶೌಚಾಲಯವು ಕುಸಿದು ಬಿದ್ದಿರುವ ಶಾಲಾ ಕಂಪೌಂಡಿನ ಬಳಿಯೇ ಇರುತ್ತದೆ. ಅದರ ಬಳಿಯಲ್ಲೇ ಕೆಲವು ಕಲ್ಲುಗಳು ನೇತಾಡುವಂತಾಗಿದೆ. ಈ ಸಂದರ್ಭ ಎಲ್ಲಾ ಶಿಕ್ಷಕರು ಈ ಸಂದರ್ಭ ಅವರ ಜೊತೆಗೆ ಹೋಗಬೇಕಾದ ಸಂದರ್ಭ ಎದುರಾಗಿದೆ.
*ದುಸ್ಥಿತಿಯಲ್ಲಿ ಶಾಲಾ ಶೌಚಾಲಯ:* ಶಾಲಾ ಆವರಣದಿಂದ ಸ್ವಲ್ಪ ದೂರದಲ್ಲಿವ ಶಾಲಾ ಶೌಚಾಲಯವೂ ಸಂಪೂರ್ಣ ದುರಸ್ತಿಯಾಗಬೇಕಿದೆ. ಅಲ್ಲದೆ, ಮಳೆಗಾಲದಲ್ಲಿ ಮಕ್ಕಳು ಈ ಶೌಚಾಲಯಕ್ಕೆ ತೆರಳಲು ಪ್ರಯಾಸಪಡುತ್ತಿದ್ದು, ಶಾಲಾ ಕಟ್ಟಡದ ಸನಿಹವೇ ಕಿರಿಯ ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ಅವಶ್ಯಕತೆ ಇದೆ. ಅಷ್ಟೇ ಅಲ್ಲದೇ ಶಾಲೆಯ ಬಿಸಿಯೂಟದ ಕೊಠಡಿಯ ಕೆಳಗಿನ ಭಾಗವೂ ಅಪಾಯಕಾರಿಯಾಗಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.
*ಶಾಲೆಯಲ್ಲಿ ಏನೇನಿದೆ:?* ಈಗಾಗಲೇ ದಾನಿಗಳ ನೆರವಿನಿಂದ ಶಾಲೆಗೆ ಕಂಪ್ಯೂಟರ್‌ಗಳನ್ನು ಒದಗಿಸಲಾಗಿದ್ದು, ಇದುವರೆಗೆ ೫ರಿಂದ ೭ನೇ ತರಗತಿವರೆಗೆ ತರಬೇತುದಾರರಿಂದ ತರಗತಿ ನಡೆಸಲಾಗಿತ್ತು. ಎಲ್.ಕೆ.ಜಿ. ಮತ್ತು ಯು.ಕೆ.ಜಿ.ಗೆ ನುರಿತ ಶಿಕ್ಷಕರು ಇದ್ದಾರೆ. ಈ ವರ್ಷ ೧ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣವನ್ನು ಆರಂಭಿಸಲಾಗುತ್ತದೆ. ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಕಲಿಕೆಗೆ ಸಂಬಂಧಿಸಿ ವಿಷುವಲ್ಸ್‌ಗಳನ್ನು ತೋರಿಸುವ ಮೂಲಕ ಬೋಧನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ.
ಶಾಲೆ ಮೂಲಭೂತ ಸೌಕರ್ಯಗಳಲ್ಲೊಂದಾದ ಶಾಲಾ ಕಂಪೌಂಡ್ ದುರಸ್ತಿ ಕಾಮಗಾರಿ ತುರ್ತು ಅವಶ್ಯಕತೆಯಾಗಿದ್ದು, ಯಾವುದೇ ಅವಘಡ ಆಗುವ ಮೊದಲೇ ಶಿಕ್ಷಣ ಇಲಾಖೆ ದುರಸ್ತಿಯ ಮಾಡುವ ಕೆಲಸ ಮಾಡಲಿ.
ಇನ್ನೇನು ಮಳೆಗಾಲ ಸಮೀಪಿಸುತ್ತಾ ಇದೆ. ಕಳೆದ ವರ್ಷ ಕುಸಿದು ಬಿದ್ದಿರುವ ಕಂಪೌಂಡು ಈ ವರ್ಷ ಜೋರು ಮಳೆಗೆ ಇಡೀ ಕಂಪೌಂಡು ರಸ್ತೆ ಪಾಲಾಗುವ ಸಂಭವ ಇದೆ. ಬಂಟ್ವಾಳ ಕ್ಷೇತ್ರ ಶಿಕ್ಷಣ ಇಲಾಖೆಗೆ ಕಳೆದ ವರ್ಷವೇ ಕಂಪೌಂಡು ದುಸ್ಥಿತಿಯ ಬಗ್ಗೆ ತಿಳಿಸಿದ್ದು, ಈ ವರೆಗೂ ಯಾವುದೇ ಕೆಲಸ ಆಗಲಿಲ್ಲ. ಶಾಲೆಯ ಶೌಚಾಲಯು ಕುಸಿದು ಬಿದ್ದಿರುವ ಕಂಪೌಂಡು ಬಳಿ ಇರುವುದರಿಂದ ಆದಷ್ಟು ಬೇಗ ಕಂಪೌಂಡು ಸರಿ ಮಾಡಬೇಕು ಎಂದು ಮುಖ್ಯೋಪಾಧ್ಯಾಯಿನಿ ಲಕ್ಷ್ಮೀ ಹೇಳುತ್ತಾರೆ.
ಶಾಲಾ ಮಕ್ಕಳ ಕಲಿಕೆ ಹಾಗೂ ಇತರ ಚಟುವಟಿಕೆಗಳಿಗೆ ಪ್ರೋತ್ಸಾಹಕವಾಗಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ತರಬೇತಿಯನ್ನು ಈ ವರ್ಷ ಆರಂಭಿಸಲಿದ್ದೇವೆ. ಶಾಲಾ ಮೂಲಸೌಕರ್ಯದ ತುರ್ತು ಅಗತ್ಯಗಳಿಗೆ ಸರಕಾರ ನೆರವು ನೀಡಬೇಕಾಗಿದೆ ಎಂದು ಎಸ್ ಡಿಎಂಸಿ ಅಧ್ಯಕ್ಷರ ಹರೀಶ ಮಾಂಬಾಡಿ ನುಡಿಯುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು