3:05 PM Monday8 - June 2026
ಬ್ರೇಕಿಂಗ್ ನ್ಯೂಸ್
ಮಳೆಗಾಲ ಎಫೆಕ್ಟ್: ಜೂನ್ 10ರಿಂದ ಕೊಡಗು ಜಿಲ್ಲೆಯಲ್ಲಿ ಬುಲೆಟ್ ಟ್ಯಾಂಕರ್ ಸಹಿತ ಭಾರೀ… ಸೈಟ್ ಇಲ್ಲದವರಿಗೆ ಉಚಿತ ಸೈಟ್ ಭಾಗ್ಯ: ಮುಖ್ಯಮಂತ್ರಿ ಡಿಕೆಶಿ ಮಹತ್ವದ ಘೋಷಣೆ Mangaluru | ನೂತನ ಆರೋಗ್ಯ ಸಚಿವ ಯು.ಟಿ.ಖಾದರ್ ಗೆ ಕಡಲನಗರಿಯಲ್ಲಿ ಭಾರೀ ಸ್ವಾಗತ Chikkamagaluru | ಅಧಿಕಾರಿಗಳ ನಿರ್ಲಕ್ಷ: ಸ್ವಂತ ಖರ್ಚಿನಲ್ಲಿ ರಸ್ತೆ ದುರಸ್ತಿಗೆ ಮುಂದಾದ ಕಡಿದಾಳು… ತೀರ್ಥಹಳ್ಳಿ ತಾಲೂಕಿನ ಫಾರಂ ಹೌಸ್ ನಲ್ಲಿ ಕಳ್ಳತನ: 1 ಲಕ್ಷಕ್ಕೂ ಹೆಚ್ಚು ಮೌಲ್ಯದ… Belagavi | ಅಥಣಿ: ಮಳೆ ಅಬ್ಬರಕ್ಕೆ ನೆಲಕ್ಕುರುಳಿದ ಬೃಹತ್‌ ಕಟ್ಟಡ; ತಪ್ಪಿದ ಭಾರೀ… ಸಿಇಟಿ ಫಲಿತಾಂಶ ಪ್ರಕಟ: ತನಿಷಾ ಕಾರ್ತಿಕ್‌ಗೆ ಇಂಜಿನಿಯರಿಂಗ್‌ನಲ್ಲಿ ಪ್ರಥಮ ರ‍್ಯಾಂಕ್ ಆನೆ ತುಳಿತಕ್ಕೆ ಪತ್ನಿ ಬಲಿ: ಐಪಿಎಸ್ ಅಧಿಕಾರಿ ಸುನಿಲ್ ಅಚ್ಚಯ್ಯಗೆ ಸಿಎಂ ಡಿ… ಮುಲಾಜಿಲ್ಲದೇ ಕ್ರಮ ಎಂದ ರಾಗಾ: ರಾಗವೇ ಬದಲಿಸಿ ‘ಐ ಆಯಮ್ ಹ್ಯಾಪಿ’ ಎಂದ… ಯಾವ ಟ್ರಬಲ್ ಶೂಟರೂ ಇಲ್ಲ; ಅಸ್ಸಾಂಗೆ ಹೋಗಿ ಯಾಕೆ ಟ್ರಬಲ್ ಶೂಟರ್ ಆಗ್ಲಿಲ್ಲ:…

ಇತ್ತೀಚಿನ ಸುದ್ದಿ

ಟರ್ಪಾಲಿನೊಳಗಡೆ ಬ್ರಹ್ಮರಕೂಟ್ಲು ಟೋಲ್‌ಬೂತ್!!: ಸುಂಕ ವಸೂಲಿ ಸಿಬ್ಬಂದಿಗಳಿಗೆ ಸೌಕರ್ಯಗಳೇ ಇಲ್ಲ!

02/06/2024, 20:02

ಯಾದವ ಕುಲಾಲ್ ಅಗ್ರಬೈಲು ಬಂಟ್ವಾಳ

info.reporterkarnataka@gmail.com

ಟರ್ಪಾಲಿನಲ್ಲಿ ಮುಚ್ಚಿಕೊಂಡ ನಾಲ್ಕು ಬೂತ್‌ಗಳು,ಟರ್ಪಾಲಿನೊಳಗಡೆ ಕಬ್ಬಿಣದ ತುಕ್ಕು ಹಿಡಿದ ಮೆಶ್‌ನಿಂದ ನಿರ್ಮಾಣ ಮಾಡಿದ ಸುಂಕ ವಸೂಲಿಯ ಪುಟ್ಟ ಕೊಠಡಿ, ಅದರ ಸುತ್ತಲೂ ಕಬ್ಬಿಣದ ಶೀಟುಗಳ ರಾಶಿ, ಮತ್ತೊಂದು ಕಡೆ ತುಕ್ಕು ಹಿಡಿದಿರುವ ಕಬ್ಬಿಣದ ಪೈಪುಗಳ ರಾಶಿ ಹೀಗೆ ಕಬ್ಬಿಣದ ಪಂಜರದೊಳಗಿಂದ ದಿನದಲ್ಲಿ ಲಕ್ಷಾಂತರ ಸುಂಕ ವಸೂಲಿ ಮಾಡುತ್ತಿದ್ದರೂ ಕಾರ್ಮಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.


ಇದು ಮಂಗಳೂರು-ಬೆಂಗಳೂರು ಮಧ್ಯ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲುವಿನಲ್ಲಿ ಹಲವಾರು ವರ್ಷಗಳಿಂದ ಸುಂಕ ವಸೂಲಿ ಮಾಢುತ್ತಿರುವ ಟೋಲ್ ಕೇಂದ್ರದ ದುಸ್ಥಿತಿ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ದಿನಕ್ಕೆ ಲಕ್ಷಾಂತರ ಹಣವನ್ನು ರಾತ್ರಿ ಹಗಲೆನ್ನದೇ, ಮಳೆ ಬಿಸಿಲೆನ್ನದೇ ರಸ್ತೆಯಲ್ಲೇ ನಿಂತು ದಿನನಿತ್ಯ ಪ್ರವಾಸಿಗರಿಂದ ಬೈಗಳನ್ನೂ ತಿಂದರೂ ಸುಂಕ ವಸೂಲಿ ಮಾಡಿ ನೀಡುವ ಬೂತ್ ಮಾತ್ರ ಗ್ರಾಮೀಣ ಭಾಗದಲ್ಲಿರುವ ಗೂಡಂಗಡಿಗೆ ತರ್ಪಾಲ್ ಮುಚ್ಚಿದ ಸ್ಥಿತಿಯಲ್ಲಿದೆ.
*ಮೇಲ್ಚಾವಣಿ ರಿಪೇರಿ:*
ಕಳೆದ ಕೆಲವು ದಿನಗಳಿಂದ ಟೋಲ್ ಪ್ಲಾಜಾದ ಮೇಲ್ಚಾವಣಿ ಶೀಟು ಇಲ್ಲದಿರುವ ಕಡೆ ಹೊಸ ಶೀಟುಗಳನ್ನು ಹಾಕಿದ್ದು, ಅದರಲ್ಲಿ ಉಳಿದ ಹಳೆಯ ತುಕ್ಕು ಹಿಡಿದಿರುವ ಕಬ್ಬಿಣದ ಕಂಬಗಳು, ಕಬ್ಬಿಣದ ಶೀಟುಗಳು ಸುಂಕ ವಸೂಲಿ ಕೇಂದ್ರದ ಹತ್ತಿರವೇ ರಾಶಿಯಾಗಿ ಬಿದ್ದಿದೆ. ಇದರಿಂದ ಇಲ್ಲಿರುವ ಕಾರ್ಮಿಕರಿಗೆ ಬರುವ ವಾಹನಗಳ ಸುಂಕ ವಸೂಲಿ ಮಾಡಲು ತೊಂದರೆಯಾಗುತ್ತಿದೆ.
*ರಾತ್ರಿ ಮರಳು ಲಾರಿ ವಿರುದ್ಧ ದಿಕ್ಕಿನಲ್ಲಿ ಸಂಚಾರ:* ಸರ್ವೀಸ್ ರಸ್ತೆಯಲ್ಲಿ ಘನವಾಹನಗಳಿಗೆ ತಡೆಬೇಲಿ ನಿರ್ಮಿಸಿರುವುದರಿಂದ ಬಿ.ಸಿ.ರೋಡಿನಿಂದ ಮರಳು ಕೊಂಡೊಯ್ಯಲು ಬರುತ್ತಿರುವ ಹೆಚ್ಚಿನ ವಾಹನಗಳು ರಾತ್ರಿ ಹೊತ್ತಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲೇ ವಿರುದ್ಧ ದಿಕ್ಕಿನಲ್ಲೇ ನಿರಂತರ ಸಂಚಾರ ಮಾಡುತ್ತಿವೆ. ಈ ಸಮಯದಲ್ಲಿ ಸುಂಕ ವಸೂಲಿ ಮಾಡುವ ಕಾರ್ಮಿಕರು ಮಾತ್ರ ಇದ್ದು, ಪೊಲೀಸ್ ಇಲಾಖೆ ಯಾವುದೇ ಸಿಬ್ಬಂದಿಯನ್ನು ನೇಮಿಸದೇ ಇರುವುದರಿಂದ ವಸೂಲಿ ಮಾಡುವ ಸಂದರ್ಭದಲ್ಲಿ ಪ್ರಾಣ ಭಯವೂ ಕಾಡುತ್ತಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ವ್ಯವಸ್ಥಿತ ರೀತಿಯಲ್ಲಿ ಈ ಟೋಲ್ ಬೂತ್‌ನ್ನು ನಿರ್ಮಾಣ ಮಾಡಬೇಕಾಗಿದೆ. ಇದರಿಂದ ಟೋಲ್ ವಸೂಲಿ ಕಾರ್ಮಿಕಗರಿಗೂ ಅನುಕೂಲವಾಗಲಿದೆ ಜೊತೆಗೆ ವಾಹನ ಸವಾರರಿಗೂ ಕೂಡ.
ಎಲ್ಲ ಕಡೆ ಟೋಲ್‌ಗೇಟ್ ವ್ಯವಸ್ಥೆ ಇರುವಂತೆ ಬ್ರಹ್ಮರಕೂಟ್ಲುವಿನಲ್ಲಿ ಇಲ್ಲ. ಸುಂಕ ನೀಡುವವರಿಗೇ ಯಾವುದೇ ವ್ಯವಸ್ಥೆ ಇಲ್ಲ. ಟೋಲ್ ಬೂತ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೂ ಸರಿಯಾದ ಭದ್ರತೆ ಇಲ್ಲ. ಅಷ್ಟೇ ಅಲ್ಲದೇ ಟೋಲ್‌ಗೇಟ್ ಬಳಿ ಬರುವಾಗ ತುಕ್ಕು ಹಿಡಿದಿರುವ ಕಬ್ಬಿಣದ ಕೋಟೆಯೊಳಗೆ ಹೊಕ್ಕಿದಂತಾಗುತ್ತದೆ. ಪೈಂಟ್ ಬಳಿಯದೆ ಎಷ್ಟು ವರ್ಷಗಳಾಗಿರಬಹುದು ಎಂದು ಮಾಧವ ಬಿ.ಸಿ.ರೋಡು ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು