3:20 PM Sunday18 - January 2026
ಬ್ರೇಕಿಂಗ್ ನ್ಯೂಸ್
ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಸರ್ವ ಸಜ್ಜು: ಜ.18ರಂದು ಶೋಭಾ ಯಾತ್ರೆ; ಶೀರೂರು ಶ್ರೀಗಳಿಂದ… ಕೊಡಗಿನ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ: ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲು

ಇತ್ತೀಚಿನ ಸುದ್ದಿ

ಕುಡ್ಲದ ಕುಂಟಿಕಾನ ಜಂಕ್ಷನ್ ನಲ್ಲಿ ನಿತ್ಯವೂ ಟ್ರಾಫಿಕ್ ಜಾಮ್!: ದುಡಿದು ಸುಸ್ತಾಗಿದ್ದ ಜನರಿಗೆ ತಲೆ ಸುತ್ತುಭರಿಸುವ ಕಿರಿಕಿರಿ!

01/06/2024, 21:04

ಮಂಗಳೂರು(reporterkarnataka.com): ಟ್ರಾಫಿಕ್ ಜಾಮ್ ಗೆ ಕಡಲನಗರಿ ಕುಡ್ಲ ಸಿಟಿ ತುಂಬಾ ಪ್ರಸಿದ್ದಿ. ಈ ಮೊದಲು ಮಂಗಳೂರಿನ ಹೃದಯಭಾಗದಲ್ಲಿ ಮಾತ್ರ ಟ್ರಾಫಿಕ್ ಜಾಮ್ ಉಂಟಾಗುತ್ತಿದ್ದರೆ, ಇದೀಗ ಹೊಟ್ಟೆಯ ಭಾಗದಲ್ಲೂ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಟ್ರಾಫಿಕ್ ಜಾಮ್ ಸಾಲಿಗೆ ಕುಂಟಿಕಾನ ಜಂಕ್ಷನ್ ಕೂಡ ಸೇರಿದೆ.


ಎಜೆ ಆಸ್ಪತ್ರೆ ಸಮೀಪದ ಕುಂಟಿಕಾನ ಜಂಕ್ಷನ್ ಅಂದ್ರೆ ನಗರದ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಂಧಿಸುವ ಜಾಗ. ಇಲ್ಲಿ ಅಪಘಾತದ ಸಾಧ್ಯತೆ ಹೆಚ್ಚಾಗಿರುವುದರಿಂದ ಹೆದ್ದಾರಿಗೆ ಫ್ಲೈ ಓವರ್ ನಿರ್ಮಿಸಲಾಗಿದೆ. ಸಿಟಿ ಬಸ್ ಹಾಗೂ ಇತರ ವಾಹನಗಳು ಫ್ಲೈ ಓವರ್ ಕೆಳಗಡೆಯಿಂದ ಹಾದು ಹೋಗುತ್ತದೆ. ಆದರೆ ಫ್ಲೈ ಓವರ್ ಕೆಳಗಡೆ ಸಮರ್ಪಕವಾದ ಸರ್ವಿಸ್ ರಸ್ತೆ ಇಲ್ಲ. ತುಂಬಾ ಕಿರಿದಾದ ಕೊರಕಲಾದ ರಸ್ತೆ ಇದೆ.
ಸುಮಾರು 25 ವರ್ಷಗಳ ಹಿಂದೆ ಕುಂಟಿಕಾನ ಜಂಕ್ಷನ್ ಜನರಿಲ್ಲದೆ ಬಣಗುಟ್ಟುತ್ತಿತ್ತು. ಅಪರೂಪಕ್ಕೆ ಇಲ್ಲಿ ಸಿಟಿ ಬಸ್ ಗಳು ನಿಲ್ಲುತ್ತಿತ್ತು. ಯಾಕೆಂದರೆ, ಬಸ್ ಏರುವವರು, ಇಳಿಯುವವರು ಇರುತ್ತಿರಲಿಲ್ಲ. ಈಗ ಎಲ್ಲ ಬಸ್ ಗಳು ನಿಲ್ಲುತ್ತದೆ. ಎಜೆ ಆಸ್ಪತ್ರೆ ಬಂದ ಬಳಿಕ ಈ ಜಂಕ್ಷನ್ ಸಾಕಷ್ಟು ಅಭಿವೃದ್ಧಿ ಹೊಂದಿದೆ. ವಾಣಿಜ್ಯ ಕಟ್ಟಡಗಳು ನಿರ್ಮಾಣವಾಗಿದೆ. ಹೊಟೇಲ್ ಗಳು ಬಂದಿವೆ. ಜಂಕ್ಷನ್ ನಲ್ಲೇ ಶಿಕ್ಷಣ ಸಂಸ್ಥೆಯೊಂದು ಹೊಸತಾಗಿ ತಲೆ ಎತ್ತಿದೆ. ಇದರೊಂದಿಗೆ ಅನತಿ ದೂರದಲ್ಲಿ ಸೈಂಟ್ ಆ್ಯನ್ಸ್ ಶಾಲೆ ಇದೆ. ಪಕ್ಕದಲ್ಲೇ ಕೆಎಸ್ಸಾರ್ಟಿಸಿ ಡಿಪೋ, ಆಗ್ನಿಶಾಮಕ ದಳ ಕಚೇರಿ,
ಡಿ ಮಾರ್ಟ್, ಕಾರ್ ಶೋ ರೂಮ್ ಎಲ್ಲವೂ ಇದೆ. ಇವೆಲ್ಲದರ ಫಲಶ್ರುತಿ ಎಂಬಂತೆ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಒಂದಿಬ್ಬರು ಟ್ರಾಫಿಕ್ ಪೊಲೀಸರು ಕೂಡ ಇರುತ್ತಾರೆ. ಆದರೆ ಸಂಜೆ ವೇಳೆ ವಾಹನಗಳ ದಟ್ಟಣೆ ಹೆಚ್ಚಾಗುತ್ತದೆ. ಹಾಗೆ ಕೆಲವು ವಾಹನ ಚಾಲಕರ ಅವಸರ ಹಾಗೂ ರೂಲ್ಸ್ ಬ್ರೇಕ್ ಮಾಡುವುದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ತಾಸುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶೀಘ್ರದಲ್ಲೇ ಮಂಗಳೂರು ಟ್ರಾಫಿಕ್ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.

ಇತ್ತೀಚಿನ ಸುದ್ದಿ

ಜಾಹೀರಾತು