1:52 PM Thursday24 - July 2025
ಬ್ರೇಕಿಂಗ್ ನ್ಯೂಸ್
ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕಿಯ ಮೃತದೇಹ ಪತ್ತೆ: ಕೊಲೆ ಶಂಕೆ; ಕುಟುಂಬಸ್ಥರಿಂದ ದೂರು ಇಡೀ ಮಲೆನಾಡು ಪ್ರದೇಶದಲ್ಲಿ ಪ್ರಮುಖ ಆರೋಗ್ಯ ಕೇಂದ್ರವನ್ನಾಗಿ ಶಿವಮೊಗ್ಗ ಅಭಿವೃದ್ಧಿ: ಸಚಿವ ಡಾ.… ಐಟಿಐ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗ ಅವಕಾಶಕ್ಕಾಗಿ ಬಜಾಜ್ ಆಟೋ ಜತೆ ರಾಜ್ಯ… ಜಗದೀಪ್‌ ಧನಕರ್‌ ಆರೋಗ್ಯ ಚೆನ್ನಾಗಿದೆ, ಬಿಜೆಪಿ ಆರೋಗ್ಯವೇ ಚೆನ್ನಾಗಿಲ್ಲ: ಸಚಿವ ಡಾ. ಶರಣಪ್ರಕಾಶ್‌… Kodagu | ಶೌಚಾಲಯ ಗುಂಡಿಗೆ ಬಿದ್ದ ಕಾಡಾನೆ: ಸ್ವಪ್ರಯತ್ನದಿಂದಲೇ ಮೇಲೆದ್ದು ಬಂದ ಸಲಗ! ತುಳು ರಂಗಭೂಮಿಯ ಹಿರಿಯ ಕಲಾವಿದ ಚಿ.ರಮೇಶ್ ಕಲ್ಲಡ್ಕ ಇನ್ನಿಲ್ಲ: ‘ಶಿವದೂತಗುಳಿಗೆ’ ನಾಟಕದ ಭೀಮಾ… Davanagere | ವೀರಶೈವ ಲಿಂಗಾಯತ ಎಲ್ಲ ಗುರು ಭಕ್ತರು ಒಂದಾದರೆ ನಮ್ಮನ್ನು ತಡೆಯುವವರು… Chikkamagaluru | ಬಣಕಲ್ ಪ್ರೌಢ ಶಾಲೆಯಲ್ಲಿ ಲಾಸ್ಟ್ ಬೆಂಚ್ ಸ್ಟೂಡೆಂಟ್ಸ್ ಪರಿಕಲ್ಪನೆಗೆ ಮಂಗಳ:… Kodagu | ಮಹಿಳೆಗೆ ಹಲ್ಲೆ ನಡೆಸಿ ಸರ ಅಪಹರಣ: ಗ್ರಾಮಸ್ಥರ ಕೈಗೆ ಸಿಕ್ಕಿ… ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಂದ ಬಿಜೆಪಿ ಹಾಗೂ ಜೆಡಿಎಸ್ ಕಂಗೆಟ್ಟಿದೆ: ಪಾವಗಡದಲ್ಲಿ ಮುಖ್ಯಮಂತ್ರಿ…

ಇತ್ತೀಚಿನ ಸುದ್ದಿ

ದೊಂದಿ ಬೆಳಕಿನಲ್ಲಿ ಮಂತ್ರದೇವತೆ ಕೋಲ: ಭಕ್ತಿಯ ಪರಾಕಾಷ್ಠೆಗೆ ಏರಿಸಿದ ಮಾಬೆಟ್ಟು ವಿಶ್ವನಾಥ ಶೆಟ್ರರ ದೈವಾರಾಧನೆ

04/05/2024, 21:54

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಇತ್ತೀಚಿಗಿನ‌ ದಿನಗಳಲ್ಲಿ ನಡೆಯುತ್ತಿರುವ ಅಬ್ಬರದ ಕೋಲ,ನೇಮ ಮುಂತಾದ ದೈವಕಾರ್ಯಗಳ ನಡುವೆ ಇಲ್ಲೊಂದು ಕಡೆ ಸಾಂಪ್ರದಾಯಿಕವಾಗಿ ದೊಂದಿ ದೀಪದ ಬೆಳಕಿನಲ್ಲಿ ಮಂತ್ರದೇವತೆಯ ಕೋಲ‌ ನಡೆಸಿ ಎಲ್ಲರನ್ನೂ ಭಕ್ತಿಯ ಪರಾಕಾಷ್ಠೆಗೆ ಒಯ್ಯುವಲ್ಲಿ ಯಶಸ್ವಿಯಾಗಿದೆ.


ಇದು ನಡೆದಿರುವುದು ತುಳುನಾಡಿನ ಬಂಟ್ವಾಳ ತಾಲೂಕಿನ ರಾಯಿ ಎಂಬ ಪುಟ್ಟ ಊರಿನಲ್ಲಿ.
ಆಧುನಿಕ ಯುಗದಲ್ಲಿ ಎಲ್ಲವೂ ಬದಲಾಗುತ್ತಿದ್ದರೂ ತುಳುನಾಡಿನ ದೈವಾರಾಧನೆ ಇಂದಿಗೂ ಮೂಲ‌ ಸ್ವರೂಪವನ್ನು ಉಳಿಸಿಕೊಂಡಿದೆ. ಆದರೆ ಕೆಲವೊಂದು ಕಡೆಗಳಲ್ಲಿ ಮಿತಿ ಮೀರಿದ ಅಬ್ಬರ, ಅಲಂಕಾರ ನಡೆದು ಭಕ್ತಿಗಿಂತ ಆಡಂಬರ- ಸಡಗರವೇ ಹೆಚ್ಚಾಗಿ ಎದ್ದು ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಆಡಂಬರಕ್ಕೆ ಅಪವಾದ ಎಂಬ ರೀತಿಯಲ್ಲಿ ಬಂಟ್ವಾಳದ ರಾಯಿ ಎಂಬಲ್ಲಿ ದೈವಾರಾಧನೆ ನಡೆಸಲಾಗಿದೆ. ಸಾಂಪ್ರದಾಯ ಬದ್ಧವಾಗಿ ಮಂತ್ರದೇವತೆಯ ಕೋಲ ನಡೆದಿದೆ.ದೊಂದಿಯ ಬೆಳಕಿನಲ್ಲಿ ಮಂತ್ರದೇವತೆಯ ಕೋಲ‌ ನಡೆಸಲಾಗಿದೆ.
ಬಂಟ್ವಾಳದ ರಾಯಿ ಮಾಬೆಟ್ಟು ವಿಶ್ವನಾಥ ಶೆಟ್ಟಿ ಅವರ ಮನೆಯಲ್ಲಿ ಈ ಕೋಲ ನಡೆದಿದೆ.ದೊಂದಿ ಹಾಗೂ ದೀವಟಿಗೆಯ ಬೆಳಕಿನಲ್ಲಿ ಮಂತ್ರದೇವತೆ ಮಾಯದಿಂದ ಜೋಗದ ರೂಪಕ್ಕೆ ಇಳಿದು ನಂಬಿದವರಿಗೆ ತನ್ನ ವೈಭವವನ್ನು ತೋರಿಸಿದೆ. ಸಿರಿಸಿಂಗಾರದ ಸೇವೆಯನ್ನು ಪಡೆದು ಪ್ರಸನ್ನಳಾದ ಮಂತ್ರದೇವತೆಯ ಅಬ್ಬರ ದೀವಟಿಗೆಯ ಬೆಳಕಿನಲ್ಲಿ ಬೇರೆ ಲೋಕವನ್ನೇ ಧರೆಗಿಳಿಸುವಂತೆ ಮಾಡಿದೆ.

ಇತ್ತೀಚಿನ ಸುದ್ದಿ

ಜಾಹೀರಾತು