3:48 PM Wednesday17 - June 2026
ಬ್ರೇಕಿಂಗ್ ನ್ಯೂಸ್
ದೆಹಲಿ ಮಟ್ಟದಲ್ಲಿ ಹೈವೋಲ್ಟೇಜ್ ಸಂಧಾನ: ಬೆಂಗಳೂರು ಅಭಿವೃದ್ಧಿ ಸಚಿವರಾಗಿ ಕೃಷ್ಣ ಬೈರೇಗೌಡ ಅಧಿಕಾರ… ತೀರ್ಪು ಮುನ್ನವೇ ಶಂಕಿತ ಉಗ್ರ ಕೊಡಗು ಮೂಲದ ಅಬ್ದುಲ್ ಖಾದರ್ ಸಾವು ಮೈಸೂರು ದುರಂತ: ಅಕ್ರಮ ಪಬ್, ಬಾರ್, ರೆಸ್ಟೋರೆಂಟ್‌ಗಳ ಮೇಲೆ ಕ್ರಮ: ಸಚಿವ ಡಾ.… ವಿಜಯಪುರ | ಭೀಕರ ರಸ್ತೆ ಅಪಘಾತ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ 3… ವಿರಾಜಪೇಟೆ ಸಮೀಪದ ರೆಸಾರ್ಟ್ ಈಜುಕೋಳದಲ್ಲಿ ಬಿದ್ದು ಗೋವಾದ ಪ್ರವಾಸಿಗ ಸಾವು ಇಂದಿರಾ ಲಂಕೇಶ್ ನಿಧನ: ಮಾಜಿ ಸಿಎಂ ಸಿದ್ಧರಾಮಯ್ಯ, ಖ್ಯಾತ ನಟ ಪ್ರಕಾಶ್ ರೈ… ಮೈಸೂರು ಪಬ್‌ನಲ್ಲಿ ಭೀಕರ ಅಗ್ನಿ ದುರಂತ: ಇಬ್ಬರು ಸಜೀವ ದಹನ; ಹಲವರ ಸ್ಥಿತಿ… ಶಬರಿಮಲೆ ಮಣಿಕಂಠನ ದರ್ಶನಕ್ಕಾಗಿ ಇರುಮುಡಿ ಹೊತ್ತು ಶಬರಿಮಲೆಗೆ ಹೊರಟ ಕೇಂದ್ರ ಸಚಿವ ಕುಮಾರಸ್ವಾಮಿ ಬಾಗಲಕೋಟೆ: ಭೂ ವ್ಯವಹಾರ ಸಂಬಂಧ ಅಧಿಕಾರಿಗೆ ರೈತನಿಂದ ಚಪ್ಪಲಿ ಸೇವೆ ಕುಶಾಲನಗರ: ನದಿ ಪಾಲಾಗಿದ್ದ ಮತ್ತೋರ್ವ ಯುವಕನ ಮೃತದೇಹ ಪತ್ತೆ

ಇತ್ತೀಚಿನ ಸುದ್ದಿ

ಹೊಸ ವರ್ಷ ಸ್ವಾಗತಕ್ಕೆ ಕಡಲನಗರಿ ಸಜ್ಜು: ಬೀಚ್ ಗಳಲ್ಲಿ ಜನಸಾಗರ, ಅಲ್ಲಲ್ಲಿ ವಿಶೇಷ ಕಾರ್ಯಕ್ರಮ, ದೇಗುಲ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ

31/12/2023, 22:08

ಮಂಗಳೂರು(reporterkarnataka.com): ಹೊಸ ವರ್ಷ 2024 ಬರಮಾಡಿಕೊಳ್ಳಲು ಕಡಲನಗರಿ ಮಂಗಳೂರು ಸಜ್ಜಾಗಿದೆ. ಜಾತಿ, ಧರ್ಮ, ಪ್ರಾಂತ್ಯ, ಭಾಷೆಯ ವೈರುಧ್ಯಗಳ ನಡುವೆ ತುಳುವರು ಹೊಸ ವರ್ಷಕ್ಕೆ ನಗುಮೊಗದಿಂದ ಸಿದ್ದರಾಗಿದ್ದಾರೆ.


ವರ್ಷದ ಕೊನೆಯ ದಿನ ಭಾನುವಾರ ಬಂದಿರುವುದರಿಂದ ಕರಾವಳಿಗರು ಫುಲ್ ಖುಷಿಯಲ್ಲಿದ್ದಾರೆ. ಜಿಲ್ಲೆಯ ಜನತೆ ಇಂದು ಬೆಳಗ್ಗೆಯೇ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಪೊಳಲಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಎಲ್ಲ ದೇಗುಲಗಳು ಇಂದು ಬೆಳಗ್ಗಿನಿಂದಲೇ ರಶ್ ಇತ್ತು. ಕಡಲನಗರಿಯ ಶರವು, ಮಂಗಳಾದೇವಿ. ಕುದ್ರೋಳಿ ದೇಗುಲಗಳಿಗೆ ಸಾಕಷ್ಟು ಜನರು ಧಾವಿಸಿ ದೇವರಿಗೆ ನಮಿಸಿ ಬಂದಿದ್ದಾರೆ.
ಸಂಜೆ 4 ಗಂಟೆ ಕಳೆಯುತ್ತಿದ್ದಂತೆ ಮಂಗಳೂರಿನ ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಉಳ್ಳಾಲ ಸೋಮೇಶ್ವರ ಬೀಚ್, ಸುರತ್ಕಲ್ ಎನ್ ಐಟಿಕೆ ಬೀಚ್, ಸಸಿಹಿತ್ಲು ಬೀಚ್ ಪ್ರವಾಸಿಗರಿಂದ ಮತ್ತು ವಿಹಾರಾರ್ಥಿಗಳಿಂದ ತುಂಬಿತ್ತು. ಪಣಂಬೂರು ಬೀಚ್ ನಲ್ಲಿ ಜನರ ಖುಷಿ ಕಳೆಗಟ್ಟಿತ್ತು. ಗಾಳಿಪಟ ಹಾರಾಟ, ಬೆಲೂನ್ ಹಾರಾಟ ನಡೆಯಿತು.



ದೇಗುಲಗಳ ಜತೆ ಚರ್ಚ್ ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮಂಗಳೂರಿನ ಮಿಲಾಗ್ರಿಸ್ ಚರ್ಚ್,ವೆಲೆಂನ್ಸಿಯ ದೇರೆಬೈಲ್ ಚರ್ಚ್, ರೊಸಾರಿಯೊ ಚರ್ಚ್, ಬಿಜೈ ಚರ್ಚ್, ಸೈಂಟ್ ಸೆಬಾಸ್ಟಿಯನ್ ಚರ್ಚ್ ಸೇರಿದಂತೆ ಎಲ್ಲ ಚರ್ಚ್ ಗಳಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು.

ಇತ್ತೀಚಿನ ಸುದ್ದಿ

ಜಾಹೀರಾತು