8:48 AM Friday6 - March 2026
ಬ್ರೇಕಿಂಗ್ ನ್ಯೂಸ್
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ, ವಿಸ್ತೃತ, ಹವಾನಿಯಂತ್ರಿತ ಬಿ.ಸಿ. ರೋಡ್ ಶಾಖೆ… ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಆರತಕ್ಷತೆ: ಶುಭ ಹಾರೈಸಿದ ಡಿಕೆಶಿ- ಪೊನ್ನಣ್ಣ ಬೇಡ್ತಿ ಸಮೀಪ ಕೆಎಸ್ಸಾರ್ಟಿಸಿ ಬಸ್ -ಕಾರು ಡಿಕ್ಕಿ,: ಮಂಗಳೂರಿನ ಉದ್ಯಮಿ ಸಾವು ದನದ ಅವಶೇಷ ಪತ್ತೆ: ಕೊಪ್ಪ-ತೀರ್ಥಹಳ್ಳಿ ರಾಷ್ಟಿಯ ಹೆದ್ದಾರಿ ತಡೆದು ಭಜರಂಗ ದಳ ಕಾರ್ಯಕರ್ತರ… ಡಿಕೆಶಿ ಮೇಲೆ ಕಣ್ಗಾವಲು | ಎಚ್ ಡಿಕೆ, ಆರ್. ಅಶೋಕ್ ಹೇಳಿಕೆ ‘’ತಾ… ಚೆನ್ನೈ ವಿಶೇಷ ಸಮಾವೇಶದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್: ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಕುರಿತು… ಚೆನ್ನಪಟ್ಟಣ | ಕೊಡಗಿನ ಸಾಕಾನೆಗಳ ಯಶಸ್ವಿ ಕಾರ್ಯಾಚರಣೆ: ನಿರಂತರ ಉಪಟಳ ನೀಡುತ್ತಿದ್ದ ಮಕ್ನಾ… ಬೆಂಗಳೂರಿನ ನೈಜೆಲ್ ಫೆರ್ನಾಂಡಿಸ್‌ಗೆ ಅಪರೂಪದ ‘ಪಾಪಲ್ ನೈಟ್‌ಹುಡ್’ ಗೌರವ ಪ್ರದಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ ನಿರಂತರ ಕಾಡಾನೆ ದಾಳಿಗೆ ಕಂಗಾಲಾದ ಮಲೆನಾಡಿಗರು: ಕಳೆದೊಂದು ವರ್ಷದಲ್ಲಿ 9 ಜನ ಕಾಡಾನೆ…

ಇತ್ತೀಚಿನ ಸುದ್ದಿ

ಹೊಸ ವರ್ಷ ಸ್ವಾಗತಕ್ಕೆ ಕಡಲನಗರಿ ಸಜ್ಜು: ಬೀಚ್ ಗಳಲ್ಲಿ ಜನಸಾಗರ, ಅಲ್ಲಲ್ಲಿ ವಿಶೇಷ ಕಾರ್ಯಕ್ರಮ, ದೇಗುಲ, ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ

31/12/2023, 22:08

ಮಂಗಳೂರು(reporterkarnataka.com): ಹೊಸ ವರ್ಷ 2024 ಬರಮಾಡಿಕೊಳ್ಳಲು ಕಡಲನಗರಿ ಮಂಗಳೂರು ಸಜ್ಜಾಗಿದೆ. ಜಾತಿ, ಧರ್ಮ, ಪ್ರಾಂತ್ಯ, ಭಾಷೆಯ ವೈರುಧ್ಯಗಳ ನಡುವೆ ತುಳುವರು ಹೊಸ ವರ್ಷಕ್ಕೆ ನಗುಮೊಗದಿಂದ ಸಿದ್ದರಾಗಿದ್ದಾರೆ.


ವರ್ಷದ ಕೊನೆಯ ದಿನ ಭಾನುವಾರ ಬಂದಿರುವುದರಿಂದ ಕರಾವಳಿಗರು ಫುಲ್ ಖುಷಿಯಲ್ಲಿದ್ದಾರೆ. ಜಿಲ್ಲೆಯ ಜನತೆ ಇಂದು ಬೆಳಗ್ಗೆಯೇ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲು, ಪೊಳಲಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಎಲ್ಲ ದೇಗುಲಗಳು ಇಂದು ಬೆಳಗ್ಗಿನಿಂದಲೇ ರಶ್ ಇತ್ತು. ಕಡಲನಗರಿಯ ಶರವು, ಮಂಗಳಾದೇವಿ. ಕುದ್ರೋಳಿ ದೇಗುಲಗಳಿಗೆ ಸಾಕಷ್ಟು ಜನರು ಧಾವಿಸಿ ದೇವರಿಗೆ ನಮಿಸಿ ಬಂದಿದ್ದಾರೆ.
ಸಂಜೆ 4 ಗಂಟೆ ಕಳೆಯುತ್ತಿದ್ದಂತೆ ಮಂಗಳೂರಿನ ಪಣಂಬೂರು ಬೀಚ್, ತಣ್ಣೀರು ಬಾವಿ ಬೀಚ್, ಉಳ್ಳಾಲ ಸೋಮೇಶ್ವರ ಬೀಚ್, ಸುರತ್ಕಲ್ ಎನ್ ಐಟಿಕೆ ಬೀಚ್, ಸಸಿಹಿತ್ಲು ಬೀಚ್ ಪ್ರವಾಸಿಗರಿಂದ ಮತ್ತು ವಿಹಾರಾರ್ಥಿಗಳಿಂದ ತುಂಬಿತ್ತು. ಪಣಂಬೂರು ಬೀಚ್ ನಲ್ಲಿ ಜನರ ಖುಷಿ ಕಳೆಗಟ್ಟಿತ್ತು. ಗಾಳಿಪಟ ಹಾರಾಟ, ಬೆಲೂನ್ ಹಾರಾಟ ನಡೆಯಿತು.



ದೇಗುಲಗಳ ಜತೆ ಚರ್ಚ್ ಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮಂಗಳೂರಿನ ಮಿಲಾಗ್ರಿಸ್ ಚರ್ಚ್,ವೆಲೆಂನ್ಸಿಯ ದೇರೆಬೈಲ್ ಚರ್ಚ್, ರೊಸಾರಿಯೊ ಚರ್ಚ್, ಬಿಜೈ ಚರ್ಚ್, ಸೈಂಟ್ ಸೆಬಾಸ್ಟಿಯನ್ ಚರ್ಚ್ ಸೇರಿದಂತೆ ಎಲ್ಲ ಚರ್ಚ್ ಗಳಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಪ್ರಾರ್ಥನೆ ನೆರವೇರಿತು.

ಇತ್ತೀಚಿನ ಸುದ್ದಿ

ಜಾಹೀರಾತು