2:10 PM Friday17 - May 2024
ಬ್ರೇಕಿಂಗ್ ನ್ಯೂಸ್
ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ… ಹಾಸನ: ಮಹಿಳೆಯರ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಸಂತ್ರಸ್ತರು ಹಾಗೂ ಮಾಹಿತಿದಾರರಿಗೆ ಸಹಾಯವಾಣಿ… ರಾಜ್ಯದ 2ನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಅಂತ್ಯ; ಇಬ್ಬರು ಮಾಜಿ ಸಿಎಂ,…

ಇತ್ತೀಚಿನ ಸುದ್ದಿ

ಆಯುರ್ವೆದ ಮತ್ತು ಜನಪರ ವೈದ್ಯ ಸಂಶೋಧನೆ ಸಾಮರ್ಥ್ಯ ವಿಸ್ತರಣೆ ಯೋಜನೆಗೆ ಕೇಂದ್ರ ಸಚಿವ ಸರ್ಬಾನಂದ ಮತ್ತು ಸಿಎಂ ಪೆಮಾ ಖಂಡು ಶಿಲಾನ್ಯಾಸ

28/12/2023, 18:38

ಬೆಂಗಳೂರು(reporterkarnataka.com): ಈಶಾನ್ಯ ಆಯುರ್ವೇದ ಮತ್ತು ಜನಪದ ವೈದ್ಯ ಸಂಶೋಧನಾ ಸಂಸ್ಥೆಯ ಸಾಮರ್ಥ್ಯ ವಿಸ್ತರಣೆಗೆ 53 ಕೋಟಿ ರೂ. ವೆಚ್ಚದಲ್ಲಿ ಸಂಸ್ಥೆಯಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗೆ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಮತ್ತು ಆಯುಷ್ ಸಚಿವ ಸರ್ಬಾನಂದ ಸೋನೋವಾಲ್ ಮತ್ತು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಅವರು ಮಂಗಳವಾರ ಪಾಸಿಘಾಟ್ನಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ಸರ್ಬಾನಂದ ಸೋನೋವಾಲ್,’ಜನಪದ ವೈದ್ಯ ಪದ್ಧತಿಯು ಸಾವಿರಾರು ವರ್ಷಗಳಿಂದ ಮಾನವೀಯ ಚಿಕಿತ್ಸೆ ಮೂಲಕ ಶ್ರೀಮಂತ ಪರಂಪರೆಯನ್ನು ಹೊಂದಿದೆ. ವಂಶಪಾರಂಪರ್ಯವಾಗಿ ಈ ಪದ್ಧತಿ ಜೀವಂತವಾಗಿಡುವ ಮೂಲಕ ನಮ್ಮ ಸಮುದಾಯಗಳಲ್ಲಿ ಈಗಲೂ ಜೀವಂತವಾಗಿ ಉಳಿದುಕೊಂಡು ಬಂದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ನಮ್ಮ ಆಯುರ್ವೆದ ಮತ್ತು ಜನಪದ ಔಷಧಗಳಿಗೆ ಉತ್ತೇಜನ ನೀಡಿ ಪುನಶ್ಚೇತನ ನೀಡಿ ಆರೋಗ್ಯ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಜನರಿಗೆ ಸಮೃದ್ಧವಾದ ಜೀವನ ಅನುಭವ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಈ ಪ್ರಯತ್ನಕ್ಕೆ ಪೂರಕವಾಗಿ, ಮೋದಿ ಸರ್ಕಾರವು ಆಯುರ್ವೇದ ಮತ್ತು ಜಾನಪದ ಔಷಧ ಸಂಶೋಧನೆಯ ಈಶಾನ್ಯ ಸಂಸ್ಥೆಯಲ್ಲಿ ಹೆಚ್ಚುವರಿ ಮೂಲಸೌಕರ್ಯಗಳನ್ನು ನಿರ್ಮಿಸಲು ಹೂಡಿಕೆಯನ್ನು ಮಾಡಿದೆ, ಇದು ಆಯುರ್ವೇದ ಮತ್ತು ಜಾನಪದ ಔಷಧದಲ್ಲಿ ಅದರ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ಉತ್ತೇಜಿಸಲು ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೆಚ್ಚಿಸುತ್ತದೆ. ಅರುಣಾಚಲ ಪ್ರದೇಶದಲ್ಲಿ ಶೀಘ್ರದಲ್ಲೇ ಸೋವಾ ರಿಗ್ಪಾದಲ್ಲಿ ಹೊಸ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದರು.
ಸಂಸ್ಥೆಯು ವೈಜ್ಞಾನಿಕ ಸಾಕ್ಷ್ಯ, ದಾಖಲೆ, ಸಂಶೋಧನೆಯ ಜೊತೆಗೆ ಈಶಾನ್ಯದ ಜನೌಷಧವನ್ನು ಮೌಲ್ಯೀಕರಿಸುವ ಕೆಲಸ ಮಾಡುತ್ತಿದೆ. ಇನ್‍ಸ್ಟಿಟ್ಯೂಟ್‍ನಲ್ಲಿನ ಸಾಮರ್ಥ್ಯದ ವಿಸ್ತರಣೆಯು ಶೈಕ್ಷಣಿಕ ಕಟ್ಟಡ, ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‍ಗಳು, ಸಿಬ್ಬಂದಿ ವಸತಿಗೃಹಗಳು ಮತ್ತು ನಿರ್ದೇಶಕರ ಬಂಗಲೆಯನ್ನು ಒಳಗೊಂಡಿದೆ. ಹಾಸ್ಟೆಲ್‍ಗಳು ಸಂಸ್ಥೆಯ 70 ಹುಡುಗರು ಮತ್ತು 70 ಹುಡುಗಿಯರಿಗೆ ಅವಕಾಶ ಕಲ್ಪಿಸುತ್ತವೆ. ಆಯುರ್ವೇದದಲ್ಲಿ ಪದವಿಪೂರ್ವ ಕೋರ್ಸ್, ಆಯುರ್ವೇದ ಮೆಡಿಸಿನ್ ಮತ್ತು ಸರ್ಜರಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಗುಣಮಟ್ಟವನ್ನು ನೀಡಲು ಆಯುರ್ವೇದ ಕಾಲೇಜು ತೆರೆಯಲು ಹೆಚ್ಚುವರಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಹೂಡಿಕೆಯನ್ನು ಒದಗಿಸುತ್ತದೆ. ಪಾಸಿಘಾಟ್ನ ಈಶಾನ್ಯ ಆಯುರ್ವೇದ ಮತ್ತು ಜನಪದ ವೈದ್ಯ ಸಂಶೋಧನಾ ಸಂಸ್ಥೆಯಲ್ಲಿರುವ ಹೊಸ ಆಯುರ್ವೇದ ಕಾಲೇಜು ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣಾ ಸೇವೆಗಳ ಮೂಲಕ ಆಯುರ್ವೇದವನ್ನು ಉತ್ತೇಜಿಸುತ್ತದೆ ಮತ್ತು ಅಭಿವೃದ್ಧಿಪಡಿಸುತ್ತದೆ. ಇಂಜಿನಿಯರಿಂಗ್ ಪ್ರಾಜೆಕ್ಟ್ಸ್ (ಇಂಡಿಯಾ) ಲಿಮಿಟೆಡ್, ಭಾರತ ಸರ್ಕಾರದ ಉದ್ಯಮ, ಯೋಜನೆಗೆ ಕಾರ್ಯಗತಗೊಳಿಸುವ ಸಂಸ್ಥೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, “ಅರುಣಾಚಲ ಪ್ರದೇಶದ ಸಂಸ್ಥೆ – ಈಶಾನ್ಯ ಆಯುರ್ವೇದ ಮತ್ತು ಜಾನಪದ ಔಷಧ ಸಂಶೋಧನಾ ಸಂಸ್ಥೆ – ಜರಿನಪದ ಔಷಧದ ಶ್ರೀಮಂತಿಕೆಯನ್ನು ಬಳಸಿಕೊಳ್ಳುವಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಸಂತೋಷ ತಂದಿದೆ. ವೈವಿಧ್ಯಮವಾಗಿರುವ ಈಶಾನ್ಯ. ಔಷಧೀಯ, ಆಯುರ್ವೇದಿಕ್ ಮತ್ತು ಏರೊಮ್ಯಾಟಿಕ್ ವಲಯಗಳಿಗೆ ಉತ್ತಮ ವಾಣಿಜ್ಯ ಸಾಮಥ್ರ್ಯವನ್ನು ಹೊಂದಿದೆ. ಶ್ರೀಮಂತವಾಗಿರುವ ಆಯುರ್ವೆದ ಮತ್ತು ಏರೋಮ್ಯಾಟಿಕ್ ಔಷಧ ಪದ್ಧತಿಗಳ ಜತೆ ಈಶಾನ್ಯ ಹಾಗೂ ಇಲ್ಲಿನ ರಾಜ್ಯಗಳು ವಾಣಿಜ್ಯವಾಗಿ ವಿಸ್ತಾರಗೊಳ್ಳುತ್ತಿದೆ ಎಂದರು.
ಕಾರ್ಯಕ್ರಮವನ್ನು ಅರುಣಾಚಲ ಪ್ರದೇಶದ ಸ್ಪೀಕರ್ ಪಸಾಂಗ್ ದೋರ್ಜಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ, ಅಲೋ ಲಿಬಾಂಗ್, ಅರುಣಾಚಲ ಪೂರ್ವದ ಸಂಸದ ತಾಪಿರ್ ಗಾವೊ, 38 ಪಾಸಿಘಾಟ್ ಪೂರ್ವದ ಶಾಸಕ ಕಳಿಂಗ್ ಮೊಯೊಂಗ್, ಪಾಸಿಘಾಟ್ ಪಶ್ಚಿಮದ ಶಾಸಕ, ನಿನ್ನೊಗ್ ಎರಿಂಗ್, ರಾಜ್ಯ ಮಾಹಿತಿ ಆಯುಕ್ತ ಗುಂಝುಮ್ ಹೈದರ್, ರಾಜ್ಯ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಟೊಮೊ ರಿಬಾ ಇತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು