3:23 PM Tuesday21 - April 2026
ಬ್ರೇಕಿಂಗ್ ನ್ಯೂಸ್
ಕಳಸ: ಕಾಫಿ ತೋಟದ ಕಾರ್ಮಿಕರ ಮಕ್ಕಳ ಮೇಲೆ ಸಾಕು ನಾಯಿಗಳ ದಾಳಿ; ಓರ್ವ… ಪ್ರಧಾನಿ ಮೋದಿ ಜತೆ ಗುಟ್ಟಾಗಿ ಮಾತನಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಇಡಿ ಶಾಕ್: ಶಾಸಕ ಹ್ಯಾರಿಸ್, ನಲಪಾಡ್ ನಿವಾಸ ಸೇರಿ 17… ಚಿರತೆಯಿಂದ ಅತ್ತೆಯ ಕಾಪಾಡಿದ ಸೊಸೆಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ಸಚಿವ ಲಕ್ಷ್ಮಿ… ಮೈಸೂರು | ಕಾವೇರಿ ನದಿಯಲ್ಲಿ ಮುಳುಗಿ 6 ಜನ‌ ಜಲಸಮಾಧಿ: ದರ್ಗಾಕ್ಕೆ ಬಂದವರು… ಎನ್ ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಭಯದಿಂದ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುತ್ತಿಲ್ಲ:… ಚಾಮರಾಜನಗರ ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತರ ಕುಟುಂಬಕ್ಕೆ ಕಡೆಗೂ ಸಿಕ್ತು ಸರ್ಕಾರಿ ನೌಕರಿ… ಎನ್. ಆರ್. ಪುರ | ಭದ್ರಾ ನದಿಯ ಬ್ಯಾಕ್ ವಾಟರ್ ನಲ್ಲಿ ಈಜಲು… ಬನ್ನೇರುಘಟ್ಟಕ್ಕೆ ದಕ್ಷಿಣ ಆಫ್ರಿಕಾದಿಂದ ಹೊಸ ಅತಿಥಿಗಳು: ಸಚಿವ ಈಶ್ವರ್ ಖಂಡ್ರೆಯಿಂದ 4 ಚೀತಗಳಿಗೆ… ನವ ಮಂಗಳೂರು ಬಂದರಿಗೆ ಐಷಾರಾಮಿ ಕ್ರೂಸ್ ಹಡಗು ಆಗಮನ: ಕರಾವಳಿ ಪ್ರವಾಸೋದ್ಯಮಕ್ಕೆ ಉತ್ತೇಜನ

ಇತ್ತೀಚಿನ ಸುದ್ದಿ

ಚಂಡಮಾರುತದ ಅಬ್ಬರ: ಕಡವಿನಬಾಗಿಲು ನಂದಿನಿ ನದಿ ಬದಿಯಲ್ಲಿ ಕಟ್ಟಲಾಗಿರುವ ರಸ್ತೆ ತಡೆಗೋಡೆ ಕುಸಿತ

17/05/2021, 20:06

ಹಳೆಯಂಗಡಿ(reporterkarnataka news);

ಹೊಯ್ಗೆಗುಡ್ಡೆ-ಕದಿಕೆ ನದಿ ಬದಿ ಮೂಲಕ ಚಿತ್ರಾಪು ಮತ್ತು ಸಸಿಹಿತ್ಲುಗಳನ್ನು ಸಂಪರ್ಕಿಸುವ ನೇರ ಸಂಪರ್ಕ ರಸ್ತೆಗೆ ಕಡವಿನಬಾಗಿಲು ಸಮೀಪ ನಂದಿನಿ ನದಿಯ ಬದಿಯಲ್ಲಿ ಕಟ್ಟಲಾಗಿರುವ ರಸ್ತೆ ತಡೆಗೋಡೆ ಕುಸಿದಿದೆ.

2015ರಲ್ಲಿ ರಸ್ತೆ ನಿರ್ಮಾಣವಾದಂದಿನಿಂದಲೂ ಈ ಸ್ಥಳದಲ್ಲಿ ರಸ್ತೆ ತಡೆಗೋಡೆ ಬೇರೆ ಬೇರೆ ಕಡೆಗಳಲ್ಲಿ ಹಲವು ಬಾರಿ ಕುಸಿದಿದೆ. ಪ್ರಸಕ್ತ ಕುಸಿದಿರುವ ತಡೆಗೋಡೆ ಕಳೆದ ವರ್ಷವೇ ಬಿರುಕುಬಿಟ್ಟಿದ್ದು, ಇತ್ತೀಚಿನ ದಿನಗಳಲ್ಲಿ ಬಿರುಕು ಹೆಚ್ಚುತ್ತಾ ಹೋಗಿತ್ತು. ಕೊನೆಗೆ ಮೊನ್ನೆಯ ‘ತೌಕ್ತೆ’ ಚಂಡಮಾರುತದ ನೀರಿನ ಪ್ರವಾಹ ಮತ್ತು ಅಬ್ಬರದ ಅಲೆಗಳ ಆಘಾತಕ್ಕೆ ಕುಸಿದು ಹೋಗಿದೆ.

ಈ ರಸ್ತೆಯು ಕದಿಕೆ-ಹೊಯ್ಗೆಗುಡ್ಡೆ ಪ್ರದೇಶದ ಜೀವನಾಡಿಯಾಗಿದ್ದು, ಚಿತ್ರಾಪು ಮತ್ತು ಸಸಿಹಿತ್ಲುಗಳನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಈಗಾಗಲೇ ಮಳೆಗಾಲ ಆರಂಭವಾಗಿದೆ. ರಸ್ತೆಯು ಮಳೆಗಾಲದಲ್ಲಿ ನಂದಿನಿ ನದಿಯ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವ ಮುನ್ನ ತಕ್ಷಣ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ಹೊಯ್ಗೆಗುಡ್ಡೆ, ಕದಿಕೆ, ಚಿತ್ರಾಪು, ಸಸಿಹಿತ್ಲು, ಹಳೆಯಂಗಡಿ, ಪಡುಪಣಂಬೂರಿನ ಜನರು ಮೀನುಗಾರಿಕಾ ಇಲಾಖೆಯ ಎಂಜಿನಿಯರ್ ಗಳನ್ನು ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು