8:09 AM Saturday20 - September 2025
ಬ್ರೇಕಿಂಗ್ ನ್ಯೂಸ್
Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್… ಪಂಚ ಗ್ಯಾರಂಟಿ ಯೋಜನೆಗಳಿಗೆ 98 ಸಾವಿರ ಕೋಟಿ; ಅಭಿವೃದ್ಧಿಗೆ 8 ಸಾವಿರ ಕೋಟಿ:… New Delhi | ಕಾಂಗ್ರೆಸ್ ಸರಕಾರದ ಪಂಚೇಂದ್ರಿಯಗಳು ನಿಷ್ಕ್ರಿಯವಾಗಿವೆ: ಕೇಂದ್ರ ಸಚಿವ ಕುಮಾರಸ್ವಾಮಿ… Bangaluru | ರೈತ ಮುಖಂಡರ ನಿಯೋಗ ಸಿಎಂ ಸಿದ್ದರಾಮಯ್ಯ ಭೇಟಿ: ರೈತರ ಸಮಸ್ಯೆ… ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.…

ಇತ್ತೀಚಿನ ಸುದ್ದಿ

ಪ್ರಸಿದ್ಧ ರಂಗ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಶಿವಕುಮಾರಿ ಇನ್ನಿಲ್ಲ: ಗಣ್ಯರ ಸಂತಾಪ

13/08/2023, 13:43

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ರಾಜ್ಯೋತ್ಸವ ಪ್ರಶಸ್ತಿ ರಂಗಕಲಾವಿದೆ, ವಾಲ್ಮೀಕಿ ಸಮುದಾಯದ ರಾಜ್ಯಮಟ್ಟದ ಹಿರಿಯ ಕಲಾವಿದೆ ಕೂಡ್ಲಗಿಯ ಬಿ.ಶಿವಕುಮಾರಿ(55)
ಹೃದಯಘಾತದಿಂದ ನಿಧನರಾಗಿದ್ದಾರೆ.
ಅವರು ಓರ್ವ ಪುತ್ರ, ಸಹೋದರರು ಸಹೋದರಿಯರು, ಅಮ್ಮ, ಚಿಕ್ಕಮ್ಮಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟಗಲಿದ್ದಾರೆ.ಅವರು ತಮ್ಮ ಚಿಕ್ಕ ವಯಸ್ಸಿನಿಂದಲೇ ರಂಗಕಲಾ ಕ್ಷೇತ್ರಕ್ಕೆ, ಪಾದಾರ್ಪಣೆ ಮಾಡಿದವರು. ಅವರು ತಮ್ಮ ಸುಮಾರು ಮೂರ್ನಾಲ್ಕು ದಶಕಗಳ ಕಾಲ, ನಿರಂತರವಾಗಿ ರಂಗ ಕಲೆಯಲ್ಲಿ ತಮ್ಮನ್ನ ಅರ್ಪಿಸಿಕೊಂಡವರಾಗಿದ್ದಾರೆ. ರಾಜ್ಯದೆಲ್ಲೆಡೆ ತಮ್ಮ ಮನೋಜ್ಞವಾದ ಹಾಡುಗಾರಿಕೆ ಹಾಗೂ ಅಭಿನಯದ ಕಲೆಯಿಂದ ಹೆಸರು ಮಾಡಿ, ರಾಜ್ಯದೆಲ್ಲೆಡೆ ಅಭಿಜಾತ ರಂಗ ಕಲಾವಿದೆ ಎಂಬ ಕೀರ್ತಿ ಹೊಂದಿದ್ದರು. ಅವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ , ರಾಜ್ಯ ರಂಗಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ. ಹತ್ತಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಹಾಗೂ ಅಂಖ್ಯಾತ ವೇದಿಕೆಗಳಲ್ಲಿ, ಸನ್ಮಾನ ಪ್ರಶಸ್ತಿ ಪುರಸ್ಕಾರಗಳನ್ನು ತಮ್ಮ ಮುಡಿಗೆ ಹೊಂದಿದ್ದವರು.

ಸಂತಾಪ: ರಂಗಕಲಾವಿದೆ ಬಿ.ಶಿವಕುಮಾರಿ ರವರ ಅಗಲಿಕೆಗೆ, ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಜಿಲ್ಲೆಯ ರಾಜ್ಯದ ಸಮಸ್ತ ವಾಲ್ಮೀಕಿ ಸಮುದಾಯವರು. ವಿವಿದ ಸಮುದಾಯದವರು.ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು. ಪಟ್ಟಣ ಪಂಚಾಯ್ತಿ ಅಧ್ಯಕ್ಷ ಉಪಾಧ್ಯಕ್ಷರು ಸರ್ವ ಸದಸ್ಯರು. ಜಿಲ್ಲಾ ಪಂಚಾಯ್ತಿ ಹಾಗೂ ವಿವಿದ ಜನ ಪ್ರತಿನಿಧಿಗಳು. ಶ್ರೀಪೇಟೆಬಸವೇಶ್ವರ ಭಜನೆ ಹಾಗೂ ರಂಗ ಕಲಾವಿದರ ಸಂಘ ಹಾಗೂ ಶ್ರಿರಾಮಲಿಂಗೇಶ್ವರ ರಂಗ ಕಲಾವಿದರ ಹಾಗೂ ಭಜನೆ ಮತ್ತು ಡೊಳ್ಳು ಕುಣಿತ ಕಲಾವಿದರ ಸಂಘ. ವಿವಿದ ಕಲಾವಿದರ ಸಂಘಟನೆಗಳು, ವಿವಿದ ಕನ್ನಡ ಪರ ಸಂಘಟನೆಗಳು, ವಿಬಿದ ಮಹಿಳಾ ಸಘಟನೆಗಳುಕೂಡ್ಲಿಗ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಮಿಕ, ದಲಿತ, ರೈತ ಸಂಘಟನೆಗಳು. ವಿವಿದ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು.ವಿವಿದ ಪಕ್ಷಗಳ ಮುಖಂಡರು ಹಾಗೂ ಕಾರ್ಯಕಕರ್ತರು. ಪತ್ರಕರ್ತರು, ಸಮಾಜ ಸೇವಕರು, ಗಣ್ಯಮಾನ್ಯರು, ಹಿರಿಯ ರಂಗಕಲಾವಿದರು. ಯುವ ಕಲಾವಿದರು. ಹೋರಾಟಗಾರರು. ಸಂಗೀತ ಕಲಾವಿದರು. ರಂಗ ನಿರ್ಧೇಶಕರು. ಸಾಹಿತಿಗಳು, ನಾಡಿನ ಗಣ್ಯರು ರಂಗ ಕಲಾವಿದೆ ಬಿ.ಶಿವಕುಮಾರಿಯವ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು