4:01 PM Tuesday18 - August 2026
ಬ್ರೇಕಿಂಗ್ ನ್ಯೂಸ್
ಭಾಗಮಂಡಲಕ್ಕೆ ಮಳೆ ನಡುವೆಯೇ ಬಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜಿಲ್ಲಾ ಉಸ್ತುವಾರಿ ಸಚಿವ ಜವಾಬ್ದಾರಿ ಬೇಡ: ದಿಢೀರನೇ ಸಿಎಂ ಡಿಕೆಶಿಗೆ ಸಚಿವ ಜಮೀರ್… ಕಾವಳಪಡೂರು: ನಿಷೇಧಿತ ಎಂಡಿಎಂಎ ಸೇರಿದಂತೆ 4.90 ಲಕ್ಷ ಮೌಲ್ಯದ ಮೌಲ್ಯದ ಸೊತ್ತು ವಶ;… ಎಚ್‌ಡಿಕೆ ದೊಡ್ಡ ನಾಟಕರತ್ನ: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್… ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗಸ್ಟ್ 16ರಂದು ಕೊಡಗಿಗೆ ಭೇಟಿ: ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ಯು.ಟಿ. ಖಾದರ್‌ಗೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಹೆಚ್ಚುವರಿ ಖಾತೆ… Surathkal | ಸುರತ್ಕಲ್ : ಶೀಟ್ ಅಳವಡಿಸುವ ಸಂದರ್ಭ ವಿದ್ಯುತ್ ತಂತಿ ಸ್ಪರ್ಶಿಸಿ… ಆಗುಂಬೆ | ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಂದ ಕಳಚಿ ಬಿದ್ದ ಟಯರ್ :… Maravoor | ಮರವೂರಿನ ಹೋಟೆಲ್‌ನಲ್ಲಿ ಕೇರಳದ ಕಾಸರಗೋಡು ಮೂಲದ 24 ವರ್ಷದ ಯುವಕ… ತೊಕ್ಕೊಟ್ಟು | ಬಾರ್ ಮುಂಭಾಗ ತಲವಾರು ಝಳಪಿಸಿ ದಾಂಧಲೆ ; ರೌಡಿ ಶೀಟರ್…

ಇತ್ತೀಚಿನ ಸುದ್ದಿ

ಮತದಾರರ ಜತೆಯೇ ಎಗರಾಡಿದ ‘ನೀರು ಕೊಡದ’ ಕಾರ್ಪೋರೇಟರ್: ಕಠಿಣ ಕ್ರಮಕ್ಕೆ ಮೇಯರ್, ಕಮಿಷನರ್ ಗೆ ಸ್ಥಳೀಯರ ಮನವಿ

19/07/2023, 22:45

ಮಂಗಳೂರು(reporterkarnataka.com): ನಾಗರಿಕರಿಗೆ ಕುಡಿಯುವ ನೀರು ಒದಗಿಸಲಾಗದ ಬಿಜೆಪಿ ಕಾರ್ಪೊರೇಟರ್ ಜಯಲಕ್ಷ್ಮೀ ಅವರು ತನ್ನ ವಾರ್ಡ್ ನ ನಾಗರಿಕರ ಮೇಲೆಯೇ ಎಗರಾಡಿ ಅಸಭ್ಯವಾಗಿ ವರ್ತಿಸಿದ ಕುರಿತು ಸ್ಥಳೀಯ ನಾಗರಿಕರು ಡಿವೈಎಫ್ ಐ ನೇತೃತ್ವದಲ್ಲಿ ಮೇಯರ್ ಹಾಗೂ ಪಾಲಿಕೆಯ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ.
ಉರ್ವಸ್ಟೋರ್ ಸಮೀಪದ ಸುಂಕದಕಟ್ಟೆ ವಸತಿ ಕಾಲೊನಿಯಲ್ಲಿ ಕಳೆದ 12 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಅದನ್ನು ಪರಿಹರಿಸಿ ಜನರ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ಕುಡಿಯುವ ನೀರು ಒದಗಿಸದೆ ಬೇಜವಾಬ್ದಾರಿ ತೋರಿಸಿದ ಕಾರ್ಪೋರೇಟರ್ ಅವರು ಸ್ಥಳೀಯರ ಜತೆ ಅಸಂಬದ್ಧವಾಗಿ ಮಾತನಾಡಿದ್ದರು. ಸ್ಥಳೀಯ ರನ್ನು ಭೇಟಿಯಾಗಿ ಎದುರು ನಿಂತು ಮಾತನಾಡಬೇಕಾಗಿದ್ದ ಕಾರ್ಪೊರೇಟರ್ ಜಯಲಕ್ಷ್ಮೀ ಅವರು ಅತ್ತ ಇತ್ತ ಓಡಾಡುತ್ತಾ, ಜನರಿಗೆ ಅಸಂಬದ್ಧ ಉತ್ತರ ನೀಡುತ್ತಿದ್ದರು. ಇದರ ವೀಡಿಯೊವೊಂದು ನಿನ್ನೆಯೇ ವೈರಲ್ ಆಗಿತ್ತು.


ಈ ಕುರಿತು ನಿಯೋಗವೊಂದು ಮೇಯರ್ ಹಾಗೂ ಪಾಲಿಕೆ ಕಮಿಷನರ್ ಅವರನ್ನು ಭೇಟಿಯಾಗಿ ಕಾರ್ಪೋರೇಟರ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ನಿಯೋಗದಲ್ಲಿ ಸಿಪಿಎಂ ನಾಯಕರಾದ ಸುನಿಲ್ ಕುಮಾರ್ ಬಜಾಲ್, ಪ್ರಶಾಂತ್ ಎಂ.ಬಿ. ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು