8:18 AM Thursday18 - September 2025
ಬ್ರೇಕಿಂಗ್ ನ್ಯೂಸ್
ಕೃಷ್ಣಾ ಮೇಲ್ದಂಡೆ ಯೋಜನೆ: ಮುಳುಗಡೆ ರೈತರ ನೀರಾವರಿ ಜಮೀನಿಗೆ 40 ಲಕ್ಷ, ಒಣಭೂಮಿಗೆ… Belagavi | ಶೀಘ್ರವೇ ಅಂಗನವಾಡಿ ಕಾರ್ಯಕರ್ತೆಯರು, ಸಿಬ್ಬಂದಿಗೆ ಬಡ್ತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೂ ಸ್ವಾಧೀನ ಪ್ರಕ್ರಿಯೆ ಅಕ್ರಮ ಕೂಡಲೇ ಕೈಬಿಡಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಆಗ್ರಹ ಪಾಲಿಕೆಯೇ ಪಾಪರ್‌ ಆಗಿರುವಾಗ ಹೊಸದಾಗಿ ಇಂಜಿನಿಯರ್‌ಗಳನ್ನು ಹೇಗೆ ನೇಮಿಸುತ್ತಾರೆ: ಪ್ರತಿಪಕ್ಷದ ನಾಯಕ ಆರ್.… ಮತಗಳ್ಳತನಕ್ಕೆ ಅವಕಾಶ ನೀಡಬೇಡಿ: ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ಪರಿಹಾರದಾಸೆಗೆ ಪತಿಯ ಕೊಲೆಗೈದು ಹುಲಿ ಕೊಂದಿದೆ ಎಂದು ಕಥೆ ಕಟ್ಟಿ ಸಿಕ್ಕಿಬಿದ್ದ ಪತ್ನಿ;… Kodagu | ಮಡಿಕೇರಿ ದಸರಾ: ರಾಜ್ಯ ಸರಕಾರದಿಂದ1.50 ಕೋಟಿ ಅನುದಾನ ಬಿಡುಗಡೆ 2026ರ ಮಾರ್ಚ್‌ಗೆ PM KUSUM 2ನೇ ಹಂತ ಅನುಷ್ಠಾನ: ಕೇಂದ್ರ ಸಚಿವ ಪ್ರಹ್ಲಾದ್… ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು…

ಇತ್ತೀಚಿನ ಸುದ್ದಿ

ಪಾಲಿಕೆ ಮಾಡಬೇಕಿದ್ದ ಕೆಲಸವನ್ನು ಪೊಲೀಸ್ ಇಲಾಖೆ ಮಾಡಿತು!: ಕೆಪಿಟಿ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿದ್ದ ಅಲಂಕಾರಿಕ ಗಿಡ ತೆರವು

17/06/2023, 15:03

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಸ್ತೆಯ ಡಿವೈಡರ್ ಮತ್ತು ಸರ್ಕಲ್ ಗಳಲ್ಲಿ ನಿರ್ಮಿಸಿದ ಮಿನಿ ಗಾರ್ಡನ್ ಗಳು ನಗರದ ಸುಂದರವನ್ನು ವೃದ್ಧಿಸಿದರೆ, ಕೆಲವೊಮ್ಮೆ ನಗರದೊಳಗೆ ವಾಹನ ಅಪಘಾತಕ್ಕೂ ಕಾರಣವಾಗುತ್ತದೆ. ಡಿವೈಡರ್ ಮತ್ತು ಸರ್ಕಲ್ ನಲ್ಲಿ ನಿರ್ಮಿಸಿದ ಗಾರ್ಡ್ ನ ಎದುರುಗಡೆಯ ರಸ್ತೆಗೆ ಅಡ್ಡವಾಗಿ ಬೆಳೆದರೆ ಅದು ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಅಂಥದೊಂದು ಸನ್ನಿವೇಶ ನಗರದ ಕೆಪಿಟಿ ಜಂಕ್ಷನ್ ನಲ್ಲಿ ನಡೆದಿದೆ.
ಕೆಪಿಟಿ ಜಂಕ್ಷನ್ ನಲ್ಲಿರುವ ಸಣ್ಣ ವೃತ್ತದಲ್ಲಿ ಗಾರ್ಡನ್ ಬೆಳೆಸಲಾಗಿದೆ.


ಗಿಡಗಳು ಸೊಂಪಾಗಿ ದಟ್ಟವಾಗಿ ಎತ್ತರಕ್ಕೆ ಬೆಳೆದಿದೆ. ವೃತ್ತವೇನೋ ಗಾರ್ಡನ್ ನಿಂದ ತುಂಬಾ ಸೊಗಸಾಗಿ ಕಾಣುತ್ತಿದೆ. ಆದರೆ ದಟ್ಟವಾಗಿ, ಎತ್ತರಕ್ಕೆ ಬೆಳೆದ ಅಲಂಕಾರಿಗಳ ಗಿಡಗಳು ರಸ್ತೆಗೆ ಪೂರ್ತಿ ಅಡ್ಡವಾಗಿದೆ. ಬಿಜೈ ಕಡೆಯಿಂದ ನಂತೂರು ಭಾಗಕ್ಕೆ ಸಂಚರಿಸುವ ವಾಹನ ಸವಾರರಿಗೆ ಎದುರುಗಡೆಯ ರಸ್ತೆ ಕಾಣದಷ್ಟು ಅಲಂಕಾರಿಕ ಗಿಡಗಳು ಬೆಳೆದಿವೆ. ಇದೇ ಪರಿಸ್ಥಿತಿ ಏರ್ ಪೊರ್ಟ್ ರೋಡಿನಿಂದ ಬಿಜೈ ಕಡೆಗೆ ಬರುವ ವಾಹನ ಸವಾರರದ್ದಾಗಿದೆ. ಏರ್ ಪೊರ್ಟ್ ಕಡೆಯಿಂದ ಬಿಜೈಯತ್ತ ಸಾಗುವ ವಾಹನ ಸವಾರರಿಗೂ ಇಲ್ಲಿ ರಸ್ತೆ ಕಾಣೊಲ್ಲ. ಈ ಕುರಿತು ಸಾರ್ವಜನಿಕರೊಬ್ಬರು ಎಸಿಪಿ ಗೀತಾ ಕುಲಕರ್ಣಿ ಅವರಿಗೆ ದೂರು ನೀಡಿದ್ದರು. ಸುಗಮ ಸಂಚಾರದ ಹಿನ್ನೆಲೆಯಲ್ಲಿ ಎಸಿಪಿ ಗೀತಾ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಅವರ ನೇತೃತ್ದಲ್ಲಿ ರಸ್ತೆಗೆ ತಡೆಯಾಗಿ ಬೆಳೆದು ನಿಂತಿದ್ದ ಅಲಂಕಾರಿಕ ಗಿಡಗಳನ್ನು ಸೋಮವಾರ ಟ್ರಿಮ್ ಮಾಡಲಾಯಿತು. ಪಾಲಿಕೆ ಮಾಡಬೇಕಾದ ಕೆಲಸವನ್ನು ಪೊಲೀಸ್ ಇಲಾಖೆಯೇ ಮಾಡಿತು. ಕಾನ್ ಸ್ಟೇಬಲ್ ಒಬ್ಬರು ಗಿಡಗಳನ್ನು ಟ್ರಿಮ್ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

ಇತ್ತೀಚಿನ ಸುದ್ದಿ

ಜಾಹೀರಾತು