1:55 PM Sunday11 - May 2025
ಬ್ರೇಕಿಂಗ್ ನ್ಯೂಸ್
Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!! Karnataka CM | ಮೈಶುಗರ್ ಕಾರ್ಖಾನೆಗೆ 50 ಕೋಟಿ ಕೊಟ್ಟಿದ್ದಷ್ಟೆ ಅಲ್ಲ, ವಿದ್ಯುತ್… ಆಪರೇಷನ್ ಸಿಂಧೂರ; ಪ್ರಧಾನಿ ಮೋದಿ ಅವರ ಬದ್ಧತೆ, ಧೃಢ ನಿರ್ಧಾರವನ್ನು ಸ್ವಾಗತಿಸಿದ ಮಾಜಿ… ಬೆಂಗಳೂರು ಜ್ಞಾನಭಾರತಿ ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆಗೆ 35 ಲಕ್ಷ ರೂ. ವಂಚನೆ: ಎಫ್… Doddaballapura | ಘಾಟಿ ಸುಬ್ರಹ್ಮಣ್ಯ ಕ್ಷೇತ್ರ: ಸರಳ ಸಾಮೂಹಿಕ ವಿವಾಹದಲ್ಲಿ 66 ಜೋಡಿಗಳಿಗೆ…

ಇತ್ತೀಚಿನ ಸುದ್ದಿ

ಉತ್ತರ ಕರ್ನಾಟಕದಲ್ಲಿ ಕಾರಹುಣ್ಣಿಮೆ ಸಂಭ್ರಮ: ಗಡಿ ಭಾಗದಲ್ಲಿ ಮಣ್ಣೆತ್ತಿನ ಖರೀದಿ ಜೋರು; ಹಸುಗಳಿಗೆ ಬಣ್ಣದ ಹಗ್ಗ ಗೊಂಡೆಗೆ ಮುಗಿಬಿದ್ದ ರೈತರು

03/06/2023, 21:14

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ರಾಜ್ಯದಲ್ಲಿ ಕಾರ ಹುಣ್ಣಿಮೆಯನ್ನ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಅದರಲ್ಲು ಉತ್ತರ ಕರ್ನಾಟಕದಲ್ಲಿ ತನ್ನದೇ ವಿಶೇಷತೆಯಿಂದ ಆಚರಿಸಲ್ಪಡುತ್ತದೆ. ಇದರಂಗವಾಗಿ ಮಣ್ಣೆತ್ತಿನ ಖರೀದಿಯು ಜೋರಾಗಿಯೇ ನಡೆಯಿತು.
ಬೆಳಗಾವಿಯ ಕಾಗವಾಡ ವಿಧಾನ ಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ಯ ಬಣ್ಣ ಬಣ್ಣದ ಹಗ್ಗ ಗೊಂಡೆಗಳನ್ನ ತೆಗೆದುಕೊಳ್ಳಲು ರೈತರು ಅಂಗಡಿ ಮುಂಗ್ಗಟ್ಟಿಗೆ ಮುಗಿ ಬಿದಿದ್ದರು. ಗ್ರಾಮದ ಕುಂಬಾರರ ಮನೆಯಲ್ಲಿನ ಮಣ್ಣೆತ್ತಿನ ಪೂಜೆ ಮಾಡುವುದು ವಾಡಿಕೆ ಇದೆ ಅದರಂತೆ ಮಣ್ಣೆತ್ತಿನ ಖರೀದಿಯು ಜೋರಾಗಿ ಇತ್ತು.

ಸುಮಾರು ಮೂರು ದಿನಗಳ ಕಾಲ ಆಚರಿಸುವ ಕಾರಹುಣ್ಣಿಮೆ ಮಳೆಗಾಲದ ಮೊದಲ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೊದಲನೆ ದಿನ ಹೊನ್ನಹುಗ್ಗಿ, ಎರಡನೆ ದಿನ ಕಾರ ಹುಣ್ಣಿಮೆ ಹಾಗೂ ಮೂರನೇ ದಿನ ಕರಿ ಹರಿಯುವಿಕೆ ಅಂತಾ ಆಚರಿಸಲ್ಪಡುತ್ತದೆ. ಕಾರ ಹುಣ್ಣಿಮೆ ಆಚರಣೆಗೆ ತನ್ನದೇ ಪುರಾತನ ಹಿನ್ನೆಲೆಯು ಇದೆ.
ಒಮ್ಮೆ ಕೈಲಾಸದಲ್ಲಿ ಪಾರ್ವತಿ ದೇವಿಯು ಹುಗ್ಗಿ ( ಪಾಯಸ ) ಮಾಡುವಾಗ ಬೆರಳಲ್ಲಿದ್ದ ಚಿನ್ನದ ಉಂಗುರ ಜಾರಿ ಪಾತ್ರೆಯಲ್ಲಿದ್ದ ಕುದಿಯುವ ಹುಗ್ಗಿ ( ಪಾಯಸ ) ದಲ್ಲಿ ಬಿಳ್ಳುತ್ತದೆ. ಅವಾಗ ಪಾರ್ವತಿ ದೇವಿಯು ಉಂಗುರ ಹೊರತೆಗೆಯಲು ಪ್ರಯತ್ನಿಸುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರು ಉಂಗುರ ಹೊರತೆಗೆಯಲು ಆಗದೆ ಇದ್ದಾಗ ಪಾರ್ವತಿ ದೇವಿಯು ಶಿವನ ಮೊರೆ ಹೋಗುತ್ತಾಳೆ. ಅವಾಗ ಶಿವನ ವಾಹನ ನಂದಿಗೆ ಶಿವ ಆದ್ನೇ ನೀಡುತ್ತಾನೆ. ಅವಾಗ ನಂದಿಯು ತನ್ನ ಕೊಂಬಿ ನಿಂದ ಕುದಿಯುತ್ತಿದ್ದ ಹುಗ್ಗಿ ( ಪಾಯಸ ) ದಿಂದ ಚಿನ್ನದ ಉಂಗುರ ಹೊರತೆಗೆದು ಪಾರ್ವತಿ ದೇವಿಗೆ ಕೊಡುತ್ತಾನೆ. ಅವಾಗ ಪಾರ್ವತಿ ದೇವಿಯು ಅಂದಿನಿಂದ ಈ ದಿನವನ್ನ ಕಾರ ಹುಣ್ಣಿಮೆ ಅಂತ ಆಚರಿಸಲಿ ಅಂತ ಆಶೀರ್ವಾದ ಮಾಡಿದಳು. ಕುದಿಯುವ ಪಾತ್ರೆಯಿಂದ ಹೊನ್ನ ಹೊರ ತೆಗೆದ ದಿನವನ್ನ ಹೊನ್ನಹುಗ್ಗಿ ಅಂತ ಆಚರಿಸಲಿ ಎಂದು ಆಶೀರ್ವದಿಸಿದ ದಿನದಿಂದ ಕಾರ ಹುಣ್ಣಿಮೆ ಆಚರಿಸಲಾಗುತ್ತದೆ ಅಂತ ಪ್ರತೀತಿ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು