12:09 PM Monday7 - September 2026
ಬ್ರೇಕಿಂಗ್ ನ್ಯೂಸ್
ಮಹಿಳಾ ಉದ್ಯೋಗಿಗಳಿಗೆ ಕಾರ್ಪೊರೇಟ್ ಎನ್‌ಪಿಎಸ್: ಪೆನ್ಷನ್‌ ಬಜಾರ್ -ಉಬುಂಟು ಒಪ್ಪಂದ ಪುತ್ತೂರು ಶಾಸಕರ ಆರೋಪ | ಕೆಆರ್ ಐಡಿಎಲ್ ಸಂಸ್ಥೆಗೆ ಗುತ್ತಿಗೆ: ಉಸ್ತುವಾರಿ ಸಚಿವ… ಕ್ರೈಂ ಡೈರಿ | ಸೆರೆ ಸಿಕ್ಕ ‘ರಿಪ್ಪರ್ ಚಂದ್ರನ್’ ಎಂಬ ಸರಣಿ ಹಂತಕ:… ತುಮಕೂರು-ರಾಯದುರ್ಗ- ಚಿತ್ರದುರ್ಗ | 2027 ಡಿಸೆಂಬರ್ ಅಂತ್ಯಕ್ಕೆ ರೈಲು ಮಾರ್ಗ ಆರಂಭ ಕಸ್ತೂರಿ ರಂಗನ್ ವರದಿ ವಿರೋಧಿಸಿ ನವೆಂಬರ್ 16ರಿಂದ ತೀರ್ಥಹಳ್ಳಿ ಟು ಶಿವಮೊಗ್ಗ ಪಾದಯಾತ್ರೆ:… *ಡಿಸೆಂಬರ್ ಒಳಗೆ ಜಗತ್ತಿಗೆ ಗಂಡಾತರ: ‘ಅಷ್ಟಮಂಗಲ ಪ್ರಶ್ನೆ’ಯಲ್ಲಿ ಕಾಳಸರ್ಪ ದೋಷದ ಭವಿಷ್ಯ* ಚಾಮರಾಜನಗರ | ಒಂಟಿ ಸಲಗದ ಜತೆ ಪ್ರಾಣ ಪಣಕ್ಕಿಟ್ಟು ಸೆಲ್ಫಿ; ಬೈಕ್ ಸವಾರರ… ಸೆಪ್ಟೆಂಬರ್ 8 ಮಾತೆ ಮರಿಯಮ್ಮನವರ ಜನ್ಮದಿನ ಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಲು ಆಗ್ರಹ ಕುಡಿದು ಗಾಡಿ ಚಲಾಯಿಸಿದ ಯುವಕನ ತಡೆಯಲೆತ್ನಿಸಿದ ಪೊಲೀಸ್ ಸಿಬ್ಬಂದಿ: ಖಾಕಿಗೆ ಕುಡುಕನಿಂದ ಅವಾಜ್;… ಕುಕ್ಕೆ ಸುಬ್ರಹ್ಮಣ್ಯ: ಭಕ್ತರ ಗಮನಕ್ಕೆ; ಈ ದಿನಗಳಲ್ಲಿ ಕ್ಷೇತ್ರದಲ್ಲಿ ಸರ್ಪಸಂಸ್ಕಾರ ಪೂಜೆ ಇರೋದಿಲ್ಲ

ಇತ್ತೀಚಿನ ಸುದ್ದಿ

ಉತ್ತರ ಕರ್ನಾಟಕದಲ್ಲಿ ಕಾರಹುಣ್ಣಿಮೆ ಸಂಭ್ರಮ: ಗಡಿ ಭಾಗದಲ್ಲಿ ಮಣ್ಣೆತ್ತಿನ ಖರೀದಿ ಜೋರು; ಹಸುಗಳಿಗೆ ಬಣ್ಣದ ಹಗ್ಗ ಗೊಂಡೆಗೆ ಮುಗಿಬಿದ್ದ ರೈತರು

03/06/2023, 21:14

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ರಾಜ್ಯದಲ್ಲಿ ಕಾರ ಹುಣ್ಣಿಮೆಯನ್ನ ಸಂಭ್ರಮದಿಂದ ಆಚರಿಸಲ್ಪಡುತ್ತದೆ. ಅದರಲ್ಲು ಉತ್ತರ ಕರ್ನಾಟಕದಲ್ಲಿ ತನ್ನದೇ ವಿಶೇಷತೆಯಿಂದ ಆಚರಿಸಲ್ಪಡುತ್ತದೆ. ಇದರಂಗವಾಗಿ ಮಣ್ಣೆತ್ತಿನ ಖರೀದಿಯು ಜೋರಾಗಿಯೇ ನಡೆಯಿತು.
ಬೆಳಗಾವಿಯ ಕಾಗವಾಡ ವಿಧಾನ ಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಕಾರಹುಣ್ಣಿಮೆ ನಿಮಿತ್ಯ ಬಣ್ಣ ಬಣ್ಣದ ಹಗ್ಗ ಗೊಂಡೆಗಳನ್ನ ತೆಗೆದುಕೊಳ್ಳಲು ರೈತರು ಅಂಗಡಿ ಮುಂಗ್ಗಟ್ಟಿಗೆ ಮುಗಿ ಬಿದಿದ್ದರು. ಗ್ರಾಮದ ಕುಂಬಾರರ ಮನೆಯಲ್ಲಿನ ಮಣ್ಣೆತ್ತಿನ ಪೂಜೆ ಮಾಡುವುದು ವಾಡಿಕೆ ಇದೆ ಅದರಂತೆ ಮಣ್ಣೆತ್ತಿನ ಖರೀದಿಯು ಜೋರಾಗಿ ಇತ್ತು.

ಸುಮಾರು ಮೂರು ದಿನಗಳ ಕಾಲ ಆಚರಿಸುವ ಕಾರಹುಣ್ಣಿಮೆ ಮಳೆಗಾಲದ ಮೊದಲ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೊದಲನೆ ದಿನ ಹೊನ್ನಹುಗ್ಗಿ, ಎರಡನೆ ದಿನ ಕಾರ ಹುಣ್ಣಿಮೆ ಹಾಗೂ ಮೂರನೇ ದಿನ ಕರಿ ಹರಿಯುವಿಕೆ ಅಂತಾ ಆಚರಿಸಲ್ಪಡುತ್ತದೆ. ಕಾರ ಹುಣ್ಣಿಮೆ ಆಚರಣೆಗೆ ತನ್ನದೇ ಪುರಾತನ ಹಿನ್ನೆಲೆಯು ಇದೆ.
ಒಮ್ಮೆ ಕೈಲಾಸದಲ್ಲಿ ಪಾರ್ವತಿ ದೇವಿಯು ಹುಗ್ಗಿ ( ಪಾಯಸ ) ಮಾಡುವಾಗ ಬೆರಳಲ್ಲಿದ್ದ ಚಿನ್ನದ ಉಂಗುರ ಜಾರಿ ಪಾತ್ರೆಯಲ್ಲಿದ್ದ ಕುದಿಯುವ ಹುಗ್ಗಿ ( ಪಾಯಸ ) ದಲ್ಲಿ ಬಿಳ್ಳುತ್ತದೆ. ಅವಾಗ ಪಾರ್ವತಿ ದೇವಿಯು ಉಂಗುರ ಹೊರತೆಗೆಯಲು ಪ್ರಯತ್ನಿಸುತ್ತಾಳೆ. ಎಷ್ಟೇ ಪ್ರಯತ್ನ ಪಟ್ಟರು ಉಂಗುರ ಹೊರತೆಗೆಯಲು ಆಗದೆ ಇದ್ದಾಗ ಪಾರ್ವತಿ ದೇವಿಯು ಶಿವನ ಮೊರೆ ಹೋಗುತ್ತಾಳೆ. ಅವಾಗ ಶಿವನ ವಾಹನ ನಂದಿಗೆ ಶಿವ ಆದ್ನೇ ನೀಡುತ್ತಾನೆ. ಅವಾಗ ನಂದಿಯು ತನ್ನ ಕೊಂಬಿ ನಿಂದ ಕುದಿಯುತ್ತಿದ್ದ ಹುಗ್ಗಿ ( ಪಾಯಸ ) ದಿಂದ ಚಿನ್ನದ ಉಂಗುರ ಹೊರತೆಗೆದು ಪಾರ್ವತಿ ದೇವಿಗೆ ಕೊಡುತ್ತಾನೆ. ಅವಾಗ ಪಾರ್ವತಿ ದೇವಿಯು ಅಂದಿನಿಂದ ಈ ದಿನವನ್ನ ಕಾರ ಹುಣ್ಣಿಮೆ ಅಂತ ಆಚರಿಸಲಿ ಅಂತ ಆಶೀರ್ವಾದ ಮಾಡಿದಳು. ಕುದಿಯುವ ಪಾತ್ರೆಯಿಂದ ಹೊನ್ನ ಹೊರ ತೆಗೆದ ದಿನವನ್ನ ಹೊನ್ನಹುಗ್ಗಿ ಅಂತ ಆಚರಿಸಲಿ ಎಂದು ಆಶೀರ್ವದಿಸಿದ ದಿನದಿಂದ ಕಾರ ಹುಣ್ಣಿಮೆ ಆಚರಿಸಲಾಗುತ್ತದೆ ಅಂತ ಪ್ರತೀತಿ ಇದೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ಸುದ್ದಿ

ಜಾಹೀರಾತು