ಇತ್ತೀಚಿನ ಸುದ್ದಿ
ಮಂಗಳೂರು: ಸಿ.ಟಿ. ರವಿ, ಮಾಧುಸ್ವಾಮಿ ವಿರುದ್ಧ ತುಳು ಸಂಘಟನೆ ಪ್ರತಿಭಟನೆ; ಜೆಡಿಎಸ್ ಮುಖಂಡೆ ಸುಮತಿ ಹೆಗ್ಡೆ ಸಾಥ್
25/02/2023, 19:40
ಮಂಗಳೂರು(reporterkarnataka.com): ಮಾಂಸಾಹಾರ ತಿಂದು ನಾಗಬನ ಪಾವಿತ್ರ್ಯಕ್ಕೆ ಧಕ್ಕೆ ತಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಲಘುವಾಗಿ ಮಾತನಾಡಿದ ಸಚಿವ ಮಾಧುಸ್ವಾಮಿ ವಿರುದ್ಧ ತುಳುನಾಡಿನ ದೈವಾರಾಧನೆ ಸಂರಕ್ಷಣೆ ಯುವ ವೇದಿಕೆ ಆಶ್ರಯದಲ್ಲಿ ನಗರದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಲಾಯಿತು. ಜೆಡಿಎಸ್ ಮುಖಂಡೆ ಸುಮತಿ ಹೆಗ್ಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತುಳುನಾಡಿನ ದೈವ ಭಾಷೆ ಹಾಗೂ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವನ್ನು ಕುಹಕವಾಡಿದ ಬಿಜೆಪಿಯ ಸಚಿವ ಮಾಧುಸ್ವಾಮಿ ಹಾಗೂ ನಾಗಬನಗಳಿಗೆ ಮಾಂಸಾಹಾರ ತಿಂದು ಬನಗಳ ಪಾವಿತ್ರ್ಯತೆಗೆ ಧಕ್ಕೆ ತಂದಿರುವುದೂ ಮಾತ್ರವಲ್ಲ ಗುಳಿಗೆ ಪಂಜುರ್ಲಿ ನಮ್ಮ ಪಕ್ಷದ ಪರ ಎಂದು ಸಿ.ಟಿ.ರವಿಯವರ ಹೇಳಿಕೆಯ ವಿರುಧ್ದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯ ನೇತ್ರತ್ವವನ್ನು ತುಳುನಾಡ ದೈವಾರಾಧನೆ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದು , ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ.ಸುಮತಿ ಎಸ್ ಹೆಗ್ಡೆ ಸಾಥ್ ನೀಡಿದರು. ಈ ಸಂಧರ್ಭ ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ಪ್ರ. ಕಾರ್ಯದರ್ಶಿ ಅಲ್ತಾಫ್ ತುಂಬೆ, ಜಾವೇದ್ ಪಾಂಡೇಶ್ವರ , ಕವಿತಾ, ಮನೋಜ್ ಕುಮಾರ್ ,ಸುನಿತಾ ಹಾಗೂ ಹಲವರು ಭಾಗವಹಿಸಿದ್ದರು.














