11:20 PM Friday14 - November 2025
ಬ್ರೇಕಿಂಗ್ ನ್ಯೂಸ್
Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್ ಎಲ್ಲಾ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠ ಸ್ಥಾಪಿಸಿದ್ದು ನಾನೇ: ಸಿಎಂ ಸಿದ್ದರಾಮಯ್ಯ Bangalore | ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಾವಣಗೆರೆ ನಡುವೆ ನೇರ ಫ್ಲೈಬಸ್… Kodagu | ವಿರಾಜಪೇಟೆ: ಆತ್ಮಹತ್ಯೆಗೆ ಯತ್ನಿಸಿದ್ದ ಗೃಹಿಣಿ 3 ದಿನಗಳ ಬಳಿಕ ಚಿಕಿತ್ಸೆ… ಕೆಂಪು ಕೋಟೆ ಬಾಂಬ್ ಬ್ಲಾಸ್ಟ್ ಪ್ರಕರಣ | ಇಡೀ ದೇಶವೇ ಖಂಡಿಸಬೇಕಿದೆ: ಮಾಜಿ…

ಇತ್ತೀಚಿನ ಸುದ್ದಿ

ಕೈಕೊಟ್ಟ ಪ್ರೀತಿಸಿದ ಹುಡುಗ: ಮನನೊಂದ ಬಡ ಕುಟುಂಬದ ವಿದ್ಯಾರ್ಥಿನಿ ಸಾವಿಗೆ ಶರಣು

03/02/2023, 14:06

ರಾಹುಲ್ ಅಥಣಿ ಬೆಳಗಾವಿ

info.reporterkarnataka@gmail.com

ಅಥಣಿ ತಾಲೂಕಿನ ಸಂಬರಗಿಯಲ್ಲಿ ಅದೊಂದು ಬಡ ಕುಟುಂಬ. ಮನೆಗಳಲ್ಲಿ ಆಗುವ ತೊಂದರೆ, ಹಣದ ಅಭಾವ ಕಂಡು ತಾನೂ ಕೂಡ ಮನೆಗೆ ಆಸರೆಯಾಗಬೇಕೆಂದು ಕಾಲೇಜು ಜೊತೆಗೆ ಆಸ್ಪತ್ರೆ ಕೆಲಸಕ್ಕೆ ಸೇರ್ಕೊಂಡು ಮನೆ ನಡೆಸಲು ಸಹಾಯ ಮಾಡಲು ಮುಂದಾದ ವಿದ್ಯಾರ್ಥಿನಿ, ಆದರೆ, ಆ ವಿದ್ಯಾರ್ಥಿ ಅದೊಂದು ಮಾಡಿದ ತಪ್ಪಿನಿಂದ ಇಂದು ತನ್ನ ಪ್ರಾಣ ಕಳೆದುಕೊಂಡಿದ್ದಾಳೆ.

ಅಷ್ಟಕ್ಕೂ ಆ ವಿದ್ಯಾರ್ಥಿ ಮಾಡಿದ್ದಾದರೂ ಏನು ಗೊತ್ತಾ? ಹಾಗಾದರೆ ಈ ಸ್ಟೋರಿ ಓದಿ ನೋಡಿ..
ಹೀಗೆ ಮನೆಯಲ್ಲಿ ಕಣ್ಣೀರು ಹಾಕುತ್ತಿರುವ ಮಹಿಳೆಯರು, ನನ್ನ ಮಗಳಿಗೆ ನ್ಯಾಯ ಕೊಡಸಿ ಎಂದು ಚಿರಾಡುತ್ತಿರುವ ತಾಯಿ ಈ ಎಲ್ಲ ದೃಶ್ಯಗಳು ಕಂಡು ಬಂದದ್ದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ, ಸುಮಾರು 21 ವರ್ಷದ ತೇಜಸ್ವಿನಿ ಗಂಗಪ್ಪ ಗುಜ್ಜರ ವಿದ್ಯಾರ್ಥಿ ತಾನಾಯಿತು ತನ್ನ ಕಾಲೇಜಾಯತು ಎಂದು ದಿನಂಪ್ರತಿ ಕಾಲೇಜಿಗೆ ಹೋಗಿ ಬರುವ ವಿದ್ಯಾರ್ಥಿ. ಕಳೆದ ಎರಡು ವರ್ಷದ ಹಿಂದೆ ಅಥಣಿ ಪಟ್ಟಣದ ಆಶೀಪ ದೇಸಾಯಿ ಎಂಬ ಯುವಕನ ಜೊತೆ ಸ್ನೇಹಕ್ಕೆ ಮುಂದಾಗುತ್ತಾಳೆ, ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಪರಸ್ಪರ ಪ್ರೀತಿಸಲು ಮುಂದಾಗುತ್ತಾರೆ. ಪ್ರೀತಿ ಮದುವೆ ಹಂತಕ್ಕೆ ತಲುಪಿದಾಗ ಯುವಕ ಆಶೀಪ‌ ಮದುವೆ ನಿರಾಕರಿಸುತ್ತಾನೆ. ಮದುವೆ ನಿರಾಕರಣೆಯಾದ ಬಳಿಕ ತೇಜಸ್ವಿನಿ ತನ್ನ ಪ್ರೀತಿಯ ಬಗ್ಗೆ ತನ್ನ ತಾಯಿ ಶೋಭಾ ಬಳಿ ಹೇಳಿದಾಗ ಶೋಭಾ ಆಶೀಪ ಜೊತೆ ಮಾತನಾಡಲು ಮುಂದಾಗುತಾಳೆ. ಆದರೆ, ಶೋಭಾ ಮಾತಿಗೆ ಬೆಲೆ ಕೊಡದ ಆಶೀಪ ಬಾಯಿಗೆ ಬಂದ ಹಾಗೆ ಬೈತ್ತಾನಂತೆ. ಈ ವಿಚಾರವಾಗಿ ಶೋಭಾ ಖಾಸಗಿ ವಾಹಿನಿಗೆ ಹೇಳಿದ್ದು ಹೀಗೆ…
ಆರೋಪಿ ಆಸೀಫ್‌ ತೇಜಸ್ವಿನಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಇತ್ತೇನು ಸಾಚಾ ಅಲ್ಲ ಈಗಾಗಲೇ ಅಥಣಿ ಪೋಲಿಸ್ ಠಾಣೆಯಲ್ಲಿ ಇತನ ವಿರುದ್ದ ಎರಡು ಪ್ರಕರಣ ದಾಖಲಾಗಿದ್ದವು, ಇತನಿಗೆ ಮೊದಲಿನಿಂದಲೂ ಹುಡಗಿಯರ ಶೋಕಿ ಬೇರೆ ಇತ್ತಂತೆ, ತೇಜಸ್ವಿನ ಮರಳು ಮಾಡು ತನ್ನ ಬುಟ್ಟಿಗೆ ಹಾಕೊಂಡಿದ್ದ. ಈ ಕಿರಾತಕ ಆಶೀಪ ಜ.26 ರಂದು ಮದುವೆ ಆಗುವುದಿಲ್ಲ ಎಂದು ನಿರಾಕರಿಸಿದಾಗ ಮನನೊಂದ ತೇಜಸ್ವಿನಿ ಕೀಟನಾಶಕ ಸೇವಿಸಿದ್ದಳು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಜ.27 ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.


ಈ ಬಗ್ಗೆ ತೇಜಸ್ವಿನಿ ತಂದೆ ಗಂಗಪ್ಪ ಹೇಳೊದು ಹೀಗೆ;
ಬಾಳಿ ಬಳಕಾಗಬೇಕಾದ ಮಗಳು ಪ್ರೀತಿಗೆ ಮರಳಾಗಿ ಇಂದು ಸಾವನಪ್ಪಿದ್ದು, ಪ್ರೀತಿಯ ಮೊಸಕ್ಕೆ ತನ್ನ ಪ್ರಾಣವನ್ನ ಕಳೆದುಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಕಾರಣವಾದ ಆಶೀಪಗೆ ಕಠಿಣ ಶಿಕ್ಷೆ ಆಗಲೇ ಬೇಕು ನನ್ನ ಮಗಳಿಗೆ ನ್ಯಾಯ ಒದಗಿಸಬೇಕೆಂದು ಅಂಗಲಾಚುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು