ಇತ್ತೀಚಿನ ಸುದ್ದಿ
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಅಂತರ್ ಕಾಲೇಜು ಸ್ಪರ್ಧೆ
26/01/2023, 20:31

ಮಂಗಳೂರು(reporterkarnataka.com): ಸಂತ ಅಲೋಶಿಯಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ಇನೋಯ ಇಂಟರ್ ಕಾಲೇಜು ಸ್ಪರ್ಧೆ ಕಾಲೇಜಿನ ಆವರಣದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿಕಟ ಪೂರ್ವ ರಾ. ಸೇ ಯೋ ರಾಜ್ಯ ಅಧಿಕಾರಿ ಗಣನಾಥ ಶೆಟ್ಟಿ ಎಕ್ಕಾರ್ ಮಾತನಾಡಿ, ಈ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಸವಿ ನೆನಪನ್ನು ನೀಡಿದೆ ಎಂದರು.
ಸಂಸ್ಕೃತಿಕ ಚಟುವಟಿಕೆಗಳು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಆದ್ದರಿಂದ ಹೆಚ್ಚಿನ ಪ್ರಾಮುಖ್ಯತೆಯನ್ನು ಇಂತಹ ಉತ್ತಮ ಕಾರ್ಯಕ್ರಮಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕಾಗಿದೆ. ಸಮಾಜದಲ್ಲಗುವ ಅಹಿತಕರ ಘಟನೆಗಳಿಂದ ದೂರವಿರಲು, ಜಾತಿ ಮತ ಬೇಧ ಮರೆತು ಮನಸ್ಸನ್ನು ಕಟ್ಟವ ಕೆಲಸಗಳಿಗೆ ಈ ಕಾರ್ಯಕ್ರಮಗಳು ಅವಶ್ಯ. ಇದರಿಂದ ವಿದ್ಯಾರ್ಥಿಗಳ ಜೀವನ ಕೌಶಲ್ಯ ಹೆಚ್ಚುತ್ತದೆ. ಸ್ಪರ್ಧೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿದೆ. ಬಹುಮಾನ ಬರಲಿ ಬರದೇ ಇರಲಿ, ಸ್ಪರ್ಧೆಯು ಮನೋಭಾವನೆ ಮುಖ್ಯ ಎಂದು ವಿದ್ಯಾರ್ಥಿಗಳಿಗೆಗಳಿಗೆ ಮನವರಿಕೆ ಮಾಡಿದರು.
ಮುಖ್ಯ ಅತಿಥಿ ಯಾಗಿ ಮಂಗಳೂರು ವಿಶ್ವ ವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಡಾ. ನಾಗರತ್ನ. ಕೆ. ಎ. ಮಾತನಾಡಿ,ನಮ್ಮ ಜೀವನದಲ್ಲಿ ಪಠ್ಯ ಪೂರಕವಾಗಿ ನಮ್ಮನ್ನು ನಾವು ತೊಡಗಿಸಿಕೊಂಡಾಗ ನಾವು ಸಮಾಜದ ಮುಂಚೂಣಿಗೆ ಬರುತ್ತೇವೆ. ಕಾಲೇಜು ಮಟ್ಟದಲ್ಲಿಯೇ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಮುಂದೆ ಜೀವನದಲ್ಲಿ ಸ್ಪರ್ಧಿಸಲು ಸಾಧ್ಯ. ವಿಧೇಯತೆ, ಗುರುಗಳಿಗೆ ಗೌರವಿಸೋ ಮನೋಭಾವನೆ ಎಲ್ಲಿ ಇರುತ್ತೋ ಅಲ್ಲಿ ಪ್ರತಿಭೆಗಳು ಅನಾವರಣಗೊಳ್ಳುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ಮಾರ್ಟೀಸ್ ಮಾತನಾಡಿ, ನಿಮ್ಮಲ್ಲಿ ಮನುಷತ್ವ ಮುಖ್ಯ. ಜಾತಿ ಧರ್ಮ ಅನೇಕ. ಅದನ್ನು ಹೊರತುಪಡಿಸಿ, ನಾವೆಲ್ಲರೂ ಒಂದೇ ಎಂದು ಭಾವಿಸಿ. ಇವತ್ತಿನ ದಿನವನ್ನು ಸಂತೋಷದಿಂದ ಆನಂದಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾ.ಸೆ.ಯೋ ಯೋಜನಾಧಿಕಾರಿ ಆಲ್ವಿನ್, ಕ್ಯಾರೆಲ್ ಪಿರೇರಾ, ರೆಡ್ ಕ್ರಾಸ್ ಕವಿತಾ ಬೋಳಾರ್ ಮತ್ತಿತರರು ಉಪಸ್ಥಿತರಿದ್ದರು.
ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.