ಇತ್ತೀಚಿನ ಸುದ್ದಿ
ಕಪಿತಾನಿಯೋ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 2 ದಿನದ ಕಲಿಕಾ ಹಬ್ಬಕ್ಕೆ ಚಾಲನೆ
25/01/2023, 11:19

ಮಂಗಳೂರು(reporterkarnataka.com): ನಗರದ ನಾಗೂರಿ ಸಮೀಪದ ಕಪಿತಾನಿಯೋ
ದ. ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ 2 ದಿನದ ಕಲಿಕಾ ಹಬ್ಬಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಉತ್ತಮ ಶಿಕ್ಷಣ ದಿಂದ ವಿಶ್ವದಲ್ಲೇ ನಮ್ಮದೇಶ ಮುಂದಿದೆ. ಜೀವನದ ಮೊದಲ ಗುರು ಶಿಕ್ಷಕರು. ಆ ಗುರುಗಳು ಮಕ್ಕಳನ್ನು ಉತ್ತಮ ಪ್ರಜೆಯಾಗಿ ಕೆತ್ತಿ ಸಮಾಜಕ್ಕೆ ನೀಡುತ್ತಾರೆ. ಎರಡು ದಿನಗಳ ಕಲಿಕಾ ಹಬ್ಬದ ಪ್ರಯೋಜನ ಪಡೆಯಿರಿ ಎಂದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ಪಠ್ಯತ್ಯೇತರ ವಿಷಯಗಳನ್ನು ಕಲಿಯಬೇಕಾಗಿದೆ. ಒನ್ಲೈನ್ ಶಾಪಿಂಗ್ ಗಳ ಬಗ್ಗೆ ಮಾಹಿತಿಯನ್ನೂ ಈ ಶಿಕ್ಷಕರರು ನೀಡಲಿದ್ದಾರೆ ಎಂದು ಅವರು ನುಡಿದರು.
ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಮಾತನಾಡಿ, ಈ ಕಲಿಕಾ ಹಬ್ಬದ ಹಿಂದಿನ ತಯಾರಿಯ ಶಿಕ್ಷಕರ ಶ್ರಮ ಅಭೂತ ಪೂರ್ವ. ಮಕ್ಕಳ ಬೆಳವಣಿಗೆಯ ಹಿಂದಿನ ನೆರಳು ಶಿಕ್ಷಕರು ಎಂದು ಕಥೆಯ ಮೂಲಕ ಮಕ್ಕಳಿಗೆ ವಿವರಿಸಿದರು.
ವಿಶ್ವ ಹಿಂದೂ ಪರಿಷತ್ ನ ಚರಣ್ ಪಂಪ್ವೆಲ್, ಇಸಿಒ ಸುಷ್ಮಾ,ಬಿ. ಆರ್.ಬಿ. ತಾಸಿನ, ಶಾಲಾ ಮುಖ್ಯ ಶಿಕ್ಷಕಿ ಚಂದ್ರಾವತಿ. ಜಿ, ಸರಕಾರಿ ಪ್ರೌಢಶಾಲಾ ಮುಖ್ಯ್ಯೋಪಾಧ್ಯಯ ಜಗದೀಶ್, ಶಿಕ್ಷಕ ವೃಂದ ಮತ್ತಿರರು ಉಪಸ್ಥಿತರಿದ್ದರು.