1:46 PM Monday13 - July 2026
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮಹಿಳೆ ಜತೆ ಅಸಭ್ಯ ವರ್ತನೆ; ಡೆಲಿವರಿ ಬಾಯ್ ಬಂಧನ *ಕೊಡ್ಲಿಪೇಟೆಯ ನದಿಯಲ್ಲಿ ನಾಪತ್ತೆಯಾಗಿದ್ದ ನಾಗರಾಜು, ಶಿವರಾಜು ಶವ ಪತ್ತೆ* ಹಿರಿಯ ಗಾಯಕಿ ಎಸ್​​. ಜಾನಕಿ ನಿಧನ: ಅಜ್ಜಿ ನೆನೆದು ಮೊಮ್ಮಗಳು ಅಪ್ಸರಾ ಭಾವುಕ ಆಸ್ಟ್ರೇಲಿಯಾ | ಪ್ರಧಾನಿ ಮೋದಿ ತಂಗಿದ್ದ ಆಸೀಸ್‌ ಹೋಟೆಲ್‌ಗೆ ನುಗ್ಗಿ ಭಾರತ ವಿರೋಧಿ… ಬೆಂಗಳೂರು: ಶಾಸಕಿ ನಯನ ಮೋಟಮ್ಮ ಪರ ಕಾರ್ಯಕರ್ತರ ಬ್ಯಾಟಿಂಗ್; ಕೆಪಿಸಿಸಿ ಅಧ್ಯಕ್ಷರಿಗೆ ವಿವರಣೆ ಮಂಡ್ಯ: ಕಟ್ಟಡದ ಮೇಲಿಂದ ಬಿದ್ದು ಫೈಂಟ್ ಮಾಡುತ್ತಿದ್ದ ಕಾರ್ಮಿಕ ದಾರುಣ ಸಾವು ಕೊಡಗು ಜೆಡಿಎಸ್‌ಗೆ ಶೀಘ್ರದಲ್ಲೇ ಜಿಲ್ಲಾಧ್ಯಕ್ಷ?: ಕುಮಾರಸ್ವಾಮಿ ಭೇಟಿ ಮಾಡಿದ ತಾಲೂಕು ಅಧ್ಯಕ್ಷರ ನಿಯೋಗ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ: ತನಿಖೆಯಲ್ಲಿ ಮಹತ್ವದ ಅಂಶ ಬಹಿರಂಗ; ಶೀಘ್ರದಲ್ಲೇ… ಶೃಂಗೇರಿ | ಗೋರಿಗುಡ್ಡ ಮಸೀದಿ ರಕ್ಷಣೆಗೆ ಕಟ್ಟಿದ್ದ ಕಾಂಕ್ರೀಟ್ ವಾಲ್ ನಲ್ಲಿ ಬಿರುಕು:… ಮಡಿಕೇರಿಯಲ್ಲಿ ಭಾರಿ ಮಳೆಗೆ ಭೂಕುಸಿತ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಏರು ರಸ್ತೆ ಹಾನಿ;…

ಇತ್ತೀಚಿನ ಸುದ್ದಿ

ಇಳೆಯನ್ನು ತೊಯಿಸಿದ ಮುಂಗಾರು ಮಳೆ: ಭರ್ಜರಿ ಬಿತ್ತನೆ ಶುರು; ಮಂದಹಾಸ ಬೀರಿದ ರಾಯಚೂರು ರೈತರು

07/07/2021, 10:15

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com

ರಾಯಚೂರು ಜಿಲ್ಲೆಯ ಮಸ್ಕಿ ಕ್ಷೇತ್ರದ ಮುಂಗಾರು ಮಳೆ ಸಂಪೂರ್ಣವಾಗಿ ಆಗಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಸಂತೋಷ ಎದ್ದು ಕಾಣುತ್ತಿದೆ. ಮಸ್ಕಿ ಭಾಗದ ಮ್ಯಾದರಾಳ, ಅಂತರಗಂಗೆ, ಮೆದಿಕಿನಾಳ, ಬೈಲಗುಡ್ಡ, ನಾಗರಬೆಂಚಿ, ಸಂತೆಕೆಲ್ಲೂರು, ಅಂಕುಶದೊಡ್ಡಿ, ಹಾಲಾಪುರ, ಹಸಮಕಲ್ ಗ್ರಾಮಗಳಲ್ಲಿ ಸಂಪೂರ್ಣವಾಗಿ ಮಳೆಯಾಗಿರುವುದರಿಂದ ರೈತರು ಕೃಷಿ ಚಟುವಟಿಕೆ ಚಟುವಟಿಕೆಯಲ್ಲಿ ಬಿತ್ತಿಗೆ ಮಾಡುವ ದೃಶ್ಯ ಕಂಡು ಬಂದಿದೆ. ಮ್ಯಾದರಾಳ ಗ್ರಾಮದ ರೈತ ಕಲಾವಿದ ಕವಿ ಸಣ್ಣ ಗೌಡಪ್ಪಗೌಡ ಬಿತ್ತಿಗೆ ಮಾಡುವ ದೃಶ್ಯ ಕಂಡಿತು.

ಈ ಭಾಗದ ರೈತರು ಸಂಪೂರ್ಣವಾಗಿ ಮಳೆಯಾಗಿರುವುದರಿಂದ ಈ ಬಾರಿ ತೊಗರಿ, ಸಜ್ಜಿ, ಸೂರ್ಯಕಾಂತಿಯನ್ನು ಜನ ಜಾಸ್ತಿ ಬಿತ್ತನೆಗೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗಳಲ್ಲಿ ಮುಂದಾದ ರೈತರ ಮೊಗದಲ್ಲಿ ಮಂದಹಾಸ ಚೆಲ್ಲಿದೆ. ರೈತರ ಪಾಲಿಗೆ ದಾರಿ ದೀಪವಾದ ಮಳೆರಾಯನಿಗೆ ಶರಣು ಶರಣಾರ್ಥಿ ಅರ್ಪಿಸಿದರು. ದೇವರನ್ನು ಸ್ಮರಿಸುವ ಸಂತೋಷದಲ್ಲಿ ಇರುವ ದೃಶ್ಯ ಕಂಡು

ಬಂತು. 

ಇತ್ತೀಚಿನ ಸುದ್ದಿ

ಜಾಹೀರಾತು