ಇತ್ತೀಚಿನ ಸುದ್ದಿ
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ: ಪೊಲೀಸ್ ಸಿಬ್ಬಂದಿಗಳು ಜನಸ್ನೇಹಿಯಾಗಲು ಕಮಿಷನರ್ ಶಶಿಕುಮಾರ್ ಕರೆ
15/01/2023, 09:31

ಚಿತ್ರ/ವರದಿ:ಅನುಷ್ ಪಂಡಿತ್ ಮಂಗಳೂರು
ಮಂಗಳೂರು(reporterkarnataka.com): ಮಂಗಳೂರು ನಗರ ಪೊಲೀಸ್ ಹಾಗೂ ಫಾರಂ ಫಿಝ ಮಾಲ್ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2023 ಉದ್ಘಾಟನಾ ಸಮಾರಂಭ ಫಾರಂ ಫಿಝ ಮಾಲ್ ನಲ್ಲಿ ಜರುಗಿತು.
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸಮಾರಂಭ ಉದ್ಘಾಟಿಸಿದರು.
ಅವರು ಮಾತನಾಡಿ, ಪೊಲೀಸ್ ಸಿಬ್ಬಂದಿಗಳು ಜನ ಸ್ನೇಹಿಯಾಗಿ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.
ಸಾರ್ವಜನಿಕರು ಆದರ್ಶ ನಾಗರಿಕರಾಗಿ ಬದುಕುವುದು ಮಂಗಳೂರು ಜನತೆಯಿಂದಲೇ ಪ್ರಾರಂಭಿಸಲಿ. ಕಾನೂನು ಪಾಲನೆ ಮಾಡಿ ಸಂಚಾರ ನಿಯಮವನ್ನು ಪ್ರೀತಿಸಿ, ರೂಡಿಸಿಕೊಳ್ಳಿ. ನಿಮ್ಮ ಪ್ರಾಣವನ್ನು ಉಳಿಸುವ ಸ್ವಾರ್ಥಿಗಳಾಗಿ ವಾಹನ ಚಲಾವಣೆ ಸಮಯದಲ್ಲಿ ಜಾಗರೂಕರಾಗಿರಿ. ಅಪಘಾತ ಮುಕ್ತ ನಗರವನ್ನಾಗಿಸುವಲ್ಲಿ ಕೈ ಜೋಡಿಸೋಣ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಉಪ ಪೊಲೀಸ್ ಆಯುಕ್ತ ಅಂಶು ಕುಮಾರ್, ಮಂಗಳೂರು ನಗರ ಸಿ.ಎ.ಆರ್ ಉಪ ಪೊಲೀಸ್ ಆಯುಕ್ತ ಪಿ. ಉಮೇಶ್, ಡಿಸಿಪಿ ದಿನೇಶ್ ಕುಮಾರ್ ಹಾಗೂ ವಿಶೇಷ ಆಹ್ವಾನಿತರಾಗಿ ದೇರಳಕಟ್ಟೆ ಯೆನಾಪೋಯ ಡೆಂಟಲ್ ಕಾಲೇಜ್ ಮ್ಯಾಕ್ಸಿಲೋ ಫೆಸಿಯಲ್ ಸರ್ಜಾನ್, ಪ್ರೊಫೆಸರ್ ಅಂಡ್ ಹೆಚ್. ಓ.ಡಿ ಡಾ. ಜಗದೀಶ್ ಚಂದ್ರ, ಮಂಗಳೂರು ಫೀಝ ಮಾಲ್ ನ ಸೆಂಟರ್ ಹೆಡ್ ಅರವಿಂದ ಶ್ರೀ ವಾತ್ಸವ, ಉಪಸ್ಥಿತರಿದ್ದರು.
ಮಂಗಳೂರು ಸಿಟಿ ಟ್ರಾಫಿಕ್ ಪೊಲೀಸ್ ಎಸಿಪಿ.ಗೀತಾ ಕುಲಕರ್ಣಿ ಕಾರ್ಯಕ್ರಮದ ಆಯೋಜಕರಾಗಿದ್ದರು.
ಮಂಗಳೂರು ಪೂರ್ವ ಸಂಚಾರ ವಿಭಾಗ ಇನ್ಸ್ಪೆಕ್ಟರ್ ಗೋಪಾಲ್ ಕೃಷ್ಣಭಟ್ ಸೇರಿದಂತೆ ವಿವಿಧ ಟ್ರಾಫಿಕ್ ಠಾಣಾ ಇನ್ಸ್ಪೆಕ್ಟರ್ ಗಳು, ಹಾಗೂ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ರವೀಶ್ ಕುಮಾರ್,ದಿನಕರ್,ಪೊಲೀಸ್ ಸಿಬ್ಬಂದಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಚಾರಪಾಲನೆಯ ಭಿತ್ತಿಚಿತ್ರಗಳನ್ನು ಅನಾವರಣಗೊಳಿಸಲಾಯಿತು.