12:17 PM Wednesday31 - December 2025
ಬ್ರೇಕಿಂಗ್ ನ್ಯೂಸ್
ರಾಜ್ಯಕ್ಕೆ ಇಬ್ಬರು ಮುಖ್ಯಮಂತ್ರಿಗಳು: ಮಾಜಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಕೆ.ಸಿ.‌ವೇಣುಗೋಪಾಲ್ ರಾಜ್ಯದ ಸೂಪರ್ ಸಿಎಂ: ಬಿಜೆಪಿಯ ಎನ್.ರವಿಕುಮಾರ್ ಆರೋಪ ಅಕ್ರಮ ವಲಸಿಗರ ಕುರಿತು ಉನ್ನತ ಮಟ್ಟದ ತನಿಖೆಯಾಗಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸರ್ಕಾರದ ಜಮೀನು ಅಕ್ರಮ ಒತ್ತುವರಿಯಾದರೆ ಕಂದಾಯ ಇಲಾಖೆ ಹಾಗೂ ಪಾಲಿಕೆ ಅಧಿಕಾರಗಳ ಮೇಲೆ… ಶೂನ್ಯ ಅಡಚಣೆಯೊಂದಿಗೆ ವಿದ್ಯುತ್ ಪೂರೈಕೆಗೆ ಕ್ರಮ: ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ… ಕಾನೂನು ಸುವ್ಯವಸ್ಥೆ ವೈಫಲ್ಯಕ್ಕೆ ಗೃಹ ಸಚಿವರೇ ಹೊಣೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಹೊಸ ವರ್ಷಾಚರಣೆ: ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ತಾಕೀತು ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ರಾಜಿ ಇಲ್ಲ:… ಮೈಸೂರು ಅರಮನೆ ಬಳಿ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ; ಹೆಚ್ಚಿದ ಆತಂಕ ಮಂಗಳೂರು ಡೇಟಾ ಸೆಂಟರ್ ಭಾರತದ ಅತ್ಯಂತ ವೆಚ್ಚ-ದಕ್ಷ ಕೇಂದ್ರ: ಫೀಸಿಬಿಲಿಟಿ ವರದಿ

ಇತ್ತೀಚಿನ ಸುದ್ದಿ

ಪಣಂಬೂರು ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ನೂತನ ವಾಸುಕೀ ಸಭಾಭವನ ಉದ್ಘಾಟನೆ; ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕ ಡಾ.‌ ಭರತ್ ಶೆಟ್ಟಿ ಚಾಲನೆ

30/12/2022, 21:32

ಸುರತ್ಕಲ್(reporterkarnataka.com): ಕೃಷ್ಣಾಪುರದಲ್ಲಿರುವ ಪಣಂಬೂರು ಶ್ರೀ ಕೋಡ್ದಬ್ಬು ದೈವಸ್ಥಾನದಲ್ಲಿ ನೂತನ ವಾಸುಕೀ ಸಭಾಭವನದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಗಳ ಲೋಕಾರ್ಪಣೆಯನ್ನು ಶಾಸಕ ಡಾ.‌ ಭರತ್ ಶೆಟ್ಟಿ ವೈ. ನೆರವೇರಿಸಿದರು.


ಈ ಸಂದರ್ಭದಲ್ಲಿ ಶಾಸಕರು ಮಾತನಾಡಿ, ನಮ್ಮ ಶಕ್ತಿಯಾಗಿ ದೈವ ದೇವರು ತಮಗೆ ಬೇಕಾದ ಸೇವೆಯನ್ನು ಪಡೆದುಕೊಳ್ಳುತ್ತಾರೆ. ನಾವು ಎಂಬುದು ಏನಿಲ್ಲ. ಭಕ್ತಿಯಿಂದ ನಾವು ನಮ್ಮ ದೈವ ದೇವರನ್ನು ಪೂಜಿಸಿದರೆ ಎಲ್ಲರಿಗೂ ಒಳಿತಾಗುತ್ತದೆ .ಇದಕ್ಕೆ ಹಲವಾರು ನಿದರ್ಶನಗಳಿವೆ ಎಂದರು.

ಇದೇ ಸಂದರ್ಭ ನಮ್ಮ ನಂಬಿಕೆಗೆ ಧಕ್ಕೆ ತರುವವರ ವಿರುದ್ದ ಒಕ್ಕೊರಲಿನಿಂದ ಖಂಡಿಸಬೇಕೆಂದರು.
ಶ್ರೀ ಕೋಡ್ದಬ್ಬು ದೈವಸ್ಥಾನದ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷರಾದ ಕೆ. ಸಿ. ನಾಗೇಂದ್ರ ಭಾರಧ್ವಾಜ್, ಮೇಯರ್ ಜಯಾನಂದ ಅಂಚನ್,
ಬಿಜೆಪಿ ಉತ್ತರ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ,
ದೈವಸ್ಥಾನದ ಲೋಕೇಶ್ ಗುರಿಕಾರ,ವಿಶ್ವನಾಥ ದೇವಸ್ಥಾನ ಇದರ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಲಕ್ಷ್ಮೀ ಶೇಖರ್ ದೇವಾಡಿಗ,
ಪ್ರಶಾಂತ್ ಮೂಡಾಯಿಕೋಡಿ,ಪಣಂಬೂರು ಮಂಜುಕಾವ ಕಾವರಮನೆ, ಸದಾಶಿವ ಐತಾಳ್ ,ಲಕ್ಷ್ಮೀಶ ದೇವಾಡಿಗ, ಉದ್ಯಮಿ ರಮಾನಾಥ ಶೆಟ್ಟಿ ,ಹಿರಿಯರಾದ ಮಹಾಬಲ ರೈ ಪಣಂಬೂರು ಕಾವರ ಮನೆ, ಜಯಂತಿ ಎಸ್. ಶೆಟ್ಟಿ, ಪಣಂಬೂರು ವಿಶ್ವಕರ್ಮ ಸಮಾಜ ಸೇವಾ ಸಂಘ ಆಚಾರ್ಯ , ಗುತ್ತಿಗೆದಾರರಾದ ನಾಗರಾಜ್ ನಾಯ್ಕ್ ಸುಶೀಲ ಕೆ.ಶೆಟ್ಟಿ, ಕೇಶವ ಸನಿಲ್, ಜತೆ ಗುರಿಕಾರರಾದ ಚಂದ್ರಹಾಸ ಗುರಿಕಾರ, ದುರ್ಗಾಪ್ರಸಾದ್ ಹೊಳ್ಳಅಧ್ಯಕ್ಷರಾದ ಸದಾನಂದ ಸನಿಲ್, ಅಣ್ಣಪ್ಪ ದೇವಾಡಿಗ, ಸುಧಾಕರ ಕಾಮತ್ , ಶ್ರೀನಿವಾಸ್, ಗುತ್ತಿಗೆದಾರರಾದ ಉಮಾಶಂಕರ್ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು