11:16 PM Tuesday8 - July 2025
ಬ್ರೇಕಿಂಗ್ ನ್ಯೂಸ್
ಪುನರ್ವಸು ಮಳೆ ಅಬ್ಬರ: ಕೊಚ್ಚಿ ಹೋಗುವ ಭೀತಿಯಲ್ಲಿ ತೀರ್ಥಹಳ್ಳಿಯ ಕುನ್ನಿಕೇವಿ ಸೇತುವೆ! ತುಂಗಾ ಕಮಾನು ಸೇತುವೆ ಮೇಲೆ ಹರಿಯುತ್ತಿದೆ ನೀರು!: ಹೆದ್ದಾರಿ ಇಂಜಿನಿಯರ್ ಗಳ ಅದ್ಬುತ… ಶೈಕ್ಷಣಿಕ ಧನ ಸಹಾಯ ಪಾವತಿಸಲು ಆಗ್ರಹಿಸಿ ಜುಲೈ 9ರಂದು ಕಟ್ಟಡ ಕಾರ್ಮಿಕರ ರಾಜ್ಯವ್ಯಾಪಿ… Kodagu | 19 ವರ್ಷದಲ್ಲಿ ದಾಖಲೆ ಸೃಷ್ಟಿಸಿದ ಹಾರಂಗಿ ಡ್ಯಾಮ್: ಜಲಾಶಯಕ್ಕೆ ಹರಿದು… Madikeri | ಕೊಡಗಿನಲ್ಲಿ ವ್ಯಾಪಕ ಅಬ್ಬರದ ಬಿರುಗಾಳಿ ಸಹಿತ ಮಳೆ: ಇಂದು ಶಾಲಾ-… ಕಾಫಿನಾಡು ಪ್ರವೇಶಿಸದಂತೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ… Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ…

ಇತ್ತೀಚಿನ ಸುದ್ದಿ

ಬಿಗ್ ಬಾಸ್ ಮನೆಗೆ ಹುಲಿವೇಷದ ತಂಡ ಎಂಟ್ರಿ!: ಟೈಗರ್ ಡ್ಯಾನ್ಸ್ ಮಾಡುತ್ತಾ ಸ್ವಾಗತಿಸಿದ ನಟ ರೂಪೇಶ್ ಶೆಟ್ಟಿ!!

28/12/2022, 17:12

ಮಂಗಳೂರು(reporterkarnataka.com): ಬಿಗ್​ ಬಾಸ್​ ಸೀಸನ್​ 9 ಸೀಸನ್ ರ ಫಿನಾಲೆಗೆ ಇನ್ನು ಕೆಲವೇ ಕೆಲವು ದಿನಗಳು ಉಳಿದಿರುವಾಗ ಬಿಗ್ ಬಾಸ್ ಮತ್ತಷ್ಟು ಜನರ ಮನಗೆಲ್ಲಲಾರಂಭಿಸಿದೆ. ಇದರ ನಡುವೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಫಿನಾಲೆಗೆ ಇನ್ನೂ ಕೆಲ ದಿನಗಳು ಬಾಕಿ ಇರುವಾಗಲೇ ಸ್ಪರ್ಧಿಗಳಿಗೆ ಹೊಸ ಹೊಸ ಟ್ವಿಸ್ಟ್ ಸಿಗ್ತಾ ಇದೆ. ತಮ್ಮ ಅಚ್ಚುಮೆಚ್ಚಿನವರು ದೊಡ್ಮೆಗೆ ಎಂಟ್ರಿ ಆಗ್ತಾ ಇರುವ ಹೊತ್ತಿನಲ್ಲಿ ಬಿಗ್ ಬಾಸ್ ಮನೆಗೆ ತುಳುನಾಡಿನ ಹುಲಿಕುಣಿತ ತಂಡವು ಪ್ರವೇಶ ಆಗಿರುವುದು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಾ ಇದೆ. ಹುಲಿಕುಣಿತ ತಂಡದ ಹುಲಿವೇಷಧಾರಿಗಳು ಎಂಟ್ರಿ ಆಗ್ತಾ ಇದ್ದಂತೆ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ಕುಣಿಯುತ್ತಲೇ ಬಂದು ತಂಡವನ್ನು ಸ್ವಾಗತಿಸಿದರು. ರೂಪೇಶ್ ಶೆಟ್ಟಿ ಅವರಿಗೆ ಹುಲಿಕುಣಿತದ ತಂಡ ನೋಡಿ ಭರ್ಜರಿ ಸ್ಪೆಪ್ಸ್ ಹಾಕಿಯೇ ಬಿಟ್ಟರೂ ಉಳಿದ ಸ್ಪರ್ಧಿಗಳು ಕೂಡ ಹುಲಿ ಕುಣಿತಕ್ಕೆ ಹೆಜ್ಜೆ ಹಾಕಿದ್ದು ಕಂಡು ಬಂತು.

ಕರಾವಳಿ ಭಾಗದಲ್ಲಿ ವಿಶಿಷ್ಟ ಛಾಪು ಮುಡಿಸಿರುವ ಹುಲಿವೇಷ ಕುಣಿತವು ತುಳುನಾಡಿನ ಹೆಮ್ಮೆಯೆಂದೆ ಹೇಳಬಹುದು. ಬಿಗ್ ಬಾಸ್ ಮನೆಯಲ್ಲಿ ಹುಲಿ ವೇಷಧಾರಿಗಳು ತಮ್ಮ ಕುಣಿತದ ಪಟ್ಟು, ಚಳಕ ತೋರಿಸಿದ್ದು ಕರಾವಳಿಯ ವೈಶಿಷ್ಟ್ಯವನ್ನು ಹೆಚ್ಚಿಸಿದಂತೆ ಆಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು