12:26 AM Saturday5 - July 2025
ಬ್ರೇಕಿಂಗ್ ನ್ಯೂಸ್
Madikeri | ಕೊಡಗು ಜಿಲ್ಲೆ: ಜು. 6ರಿಂದ ಆಗಸ್ಟ್ 5ರ ವರೆಗೆ ಭಾರೀ… ಕೊಡವ ಸಮುದಾಯದಿಂದ ಚಿತ್ರರಂಗಕ್ಕೆ ಬಂದಿದ್ದು ನಾನೊಬ್ಬಳೇ ಎಂದ ರಶ್ಮಿಕಾಳಿಗೆ ಟೀಕೆಗಳ ಸುರಿಮಳೆ! ಮೆಟ್ರೋ ಹಳದಿ ಮಾರ್ಗ ಆಗಸ್ಟ್‌ ನಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗದಿದ್ದರೆ ಪ್ರತಿಭಟನೆ: ಸಂಸದ… ವಿದ್ಯುತ್ ಆಘಾತಕ್ಕೆ ಯುವಕ ಬಲಿ: ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ… ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ… ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ…

ಇತ್ತೀಚಿನ ಸುದ್ದಿ

ಜನರ ರಕ್ಷಣೆ, ಸಮಾಜದಲ್ಲಿನ ಬೇಕು ಬೇಡಗಳಿಗೆ ಪೋಲೀಸ್ ಇಲಾಖೆ ದಕ್ಷತೆಯಿಂದ ಶ್ರಮಿಸುತ್ತಿದೆ: ಎಸಿಪಿ ನಟರಾಜ್

04/07/2021, 21:36

ಸುರತ್ಕಲ್(reporterkarnataka news): ಸರಕಾರಿ ಇಲಾಖೆಯಲ್ಲಿ ಅತಿ ಪಾರದರ್ಶಕತೆ ಹಾಗೂ ನೇಮಕಾತಿಯಲ್ಲಿ ಪೋಲೀಸ್ ಇಲಾಖೆಯು ಅತ್ಯಂತ ನಿಷ್ಠೆ, ಪ್ರಾಮಾಣಿಕತೆಯ ಇಲಾಖೆಯಾಗಿದೆ. ಜನರ ರಕ್ಷಣೆ ಮಾತ್ರವಲ್ಲದೇ ಸಮಾಜದಲ್ಲಿನ ಬೇಕುಬೇಡಗಳನ್ನು ಕೂಡಾ ಸರಿದೂಗಿಸುವಲ್ಲಿ ಪೋಲೀಸ್ ಇಲಾಖೆಯು ಅತ್ಯಂತ ದಕ್ಷವಾಗಿ ಶ್ರಮವಹಿಸುತ್ತಿವೆ ಎಂದು ಮಂಗಳೂರು ನಗರ ಸಂಚಾರಿ ವಿಭಾಗದ ಸಹಾಯಕ ಆಯುಕ್ತ ಎಮ್.ಎ ನಟರಾಜ್  ಹೇಳಿದರು. 

ಅವರು ಕಾಟಿಪಳ್ಳ ಅಭ್ಯುದಯ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಮಂಗಳಪೇಟೆ ಶ್ರೀಶಾರದಾ ಭಜನಾ ಮಂದಿರದಲ್ಲಿ ಆದಿತ್ಯವಾರದಂದು ಜರುಗಿದ ೧೯ ವರ್ಷದಿಂದ ೨೭ ವರ್ಷದ ಒಳಗಿನ ಯುವಕ- ಯುವತಿಯರಿಗೆ ನಾಗರಿಕ ಪೋಲೀಸ್ ಕಾನ್ಸ್ ಸ್ಟೇಬಲ್ ನೇಮಕಾತಿ ಉದ್ಯೋಗದ ಮಾಹಿತಿ ಶಿಬಿರವನ್ನು 

ಉದ್ಘಾಟಿಸಿ ಪೋಲೀಸ್ ಅಕಾಂಕ್ಷಿ ಅಭ್ಯರ್ಥಿಗಳಿಗೆ ಮಾಹಿತಿ ನೀಡುತ್ತಾ, ಪೋಲೀಸ್ ಇಲಾಖೆಯ ಎಸ್ ಐ, ಪಿಸಿ ಹುದ್ದೆಗಳಿಗೆ ಸೇರಲು ಈಗಾಗಲೇ  ರಾಜದಾದ್ಯಂತ ನೇಮಕಾತಿಗಳು ನಡೆಯುತ್ತಿದ್ದು ಯುವಜನಾಂಗಕ್ಕೆ ಇದು ಪೂರಕವಾಗಿದ್ದು ತಮ್ಮ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜದಲ್ಲಿ ಅತ್ಯುನ್ನತ ಹುದ್ದೆಯನ್ನು ಪಡೆಯಲು ಸಾಧ್ಯವಾಗುವುದು ಪೋಲೀಸ್ ಇಲಾಖೆಯಲ್ಲಿ ಮಾತ್ರ ಎಂದು ಪೋಲೀಸ್ ಅಕಾಂಕ್ಷಿ ಯುವಸಮೂಹಕ್ಕೆ ನೇಮಕಾತಿಯ ಕುರಿತು ಮಾಹಿತಿ ನೀಡಿದರು. ಶಿಬಿರದಲ್ಲಿ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ವಾದಿರಾಜ್, ಗಣೇಶಪುರ ಮಹಾಗಣಪತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಧರ್ಮೇಂದ್ರ ಗಣೇಶಪುರ, ಮನಪಾ ಸದಸ್ಯ ಲೋಕೇಶ್ ಬೊಳ್ಳಾಜೆ, ಸುರತ್ಕಲ್ ಪೊಲೀಸ್ ಠಾಣಾ ಎಸ್ ಐ ಚಂದ್ರಶೇಖರ್ ಉಪಸ್ಥಿತರಿದ್ದರು.

ಪೋಲೀಸ್ ನಾಗರಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನೇಮಕಗೊಂಡ ಸಿಬ್ಬಂದಿಗಳಾದ ಸುನೀಲ್, ವೆಂಕಟೇಶ್‌ ಮಾಹಿತಿ ಶಿಬಿರದಲ್ಲಿ ನೇಮಕಾತಿಯ ಕುರಿತು ಮಾಹಿತಿ ನೀಡಿದರು. ದೀಕ್ಷಿತ್‌ ಕುಲಾಲ್ ಸ್ವಾಗತಿಸಿದರು. ವಿಕಾಸ್ ಶೆಟ್ಟಿ ವಂದಿಸಿದರು.
ಭರತ್ ರಾಜ್ ಕುತ್ತೆತ್ತೂರು‌ ಕಾರ್ಯಕ್ರಮ ನಿರೂಪಿಸಿದರು

ಇತ್ತೀಚಿನ ಸುದ್ದಿ

ಜಾಹೀರಾತು