7:36 AM Tuesday13 - May 2025
ಬ್ರೇಕಿಂಗ್ ನ್ಯೂಸ್
Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌… Indo- Pak | ಯುದ್ಧ ಕಾರ್ಮೋಡ: ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಿಂದ ಭಾರತೀಯ ಸೇನೆಗೆ… ಮಾರಣಾಂತಿಕ ಹೀಮೋಫೀಲಿಯಾ ಬಾಧಿತ ಗರ್ಭಿಣಿ ಮಹಿಳೆಗೆ ಯಶಸ್ವೀ ಶಸ್ತ್ರಚಿಕಿತ್ಸೆ: ತಾಯಿ – ಮಗುವಿಗೆ… Airport | ಕಲಬುರಗಿ ವಿಮಾನ ನಿಲ್ದಾಣ: ಭದ್ರತಾ ತಪಾಸಣೆ; ನಿಗದಿತ ಸಮಯಕ್ಕೆ ಪ್ರಯಾಣಿಕರು… J&K | ಆಪರೇಶನ್ ಸಿಂಧೂರ್: ಕರ್ನಲ್ ಸೋಫಿಯಾ ಖುರೇಷಿ: ಕರ್ನಾಟಕದ ಸೊಸೆ ರೀ..!!

ಇತ್ತೀಚಿನ ಸುದ್ದಿ

ಭಯೋತ್ಪಾಕರ ಬಹಿಷ್ಕರಿಸಿ ಸಮುದಾಯದ ಎಲ್ಲ ಸವಲತ್ತುಗಳಿಂದ ದೂರ ಇಡಬೇಕು: ಶಾಸಕ ಡಾ.ಭರತ್ ಶೆಟ್ಟಿ

25/11/2022, 10:51

ಮಂಗಳೂರು(reporterkarnataka.com): ಮಂಗಳೂರಿನಲ್ಲಿ ನಡೆದ ಉಗ್ರರ ಕೃತ್ಯವನ್ನು ಮುಸ್ಲಿಂ ಜಮಾತ್ ಗಳು ,ಮುಸ್ಲಿಂ ಮುಖಂಡರು ಖಂಡಿಸುವ ಮತ್ತು
,ಇಂತಹ ಕೃತ್ಯಗಳಿಗಾಗಿ ಮುಸ್ಲಿಂ ಯುವಕರ ತಲೆಯಲ್ಲಿ ಮತಾಂಧತೆಯನ್ನು ತುಂಬಿಸಿ ಉಗ್ರ ಕೃತ್ಯ ನಡೆಸಲು ಹಣಕಾಸು ನೀಡುವ ,ಬೆಂಬಲ ನೀಡಿದ ಜನರನ್ನು ಹಾಗೂ ಸಂಘಟನೆಗಳನ್ನು ಬಹಿಷ್ಕರಿಸಿ ದೂರವಿಡುವ ಮೂಲಕ ದೇಶದ ಹಿತಕ್ಕಾಗಿ ಎನ್ ಐ ಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಬೇಕಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಹೊಣೆ ಹೊತ್ತಿದೆ. ಸರಕಾರ ಉಗ್ರ ನಿಗ್ರಹಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತದೆ.
ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸಮುದಾಯದ ನಾಯಕರು ಗುರುತಿಸಿ ಮಾಹಿತಿ ನೀಡಿ ಇಂತಹ ಕೃತ್ಯ ಮುಂದೆ ನಡೆಯದಂತೆ ಎಚ್ಚೆತ್ತುಕೊಳ್ಳಬೇಕು.

“ಸಾಮರಸ್ಯ, ಭ್ರಾತೃತ್ವ ಕೇವಲ ಬಾಯಿ ಮಾತಾಗದಿರಲಿ. ಆಡಿದ್ದನ್ನು ಮಾಡಿ ತೋರಿಸುವ ಗುಣವೂ ಇರಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೆ ಜಿ ಹಳ್ಳಿ,ಡಿ ಜೆ ಹಳ್ಳಿ ಘಟನೆ ನಡೆದಾಗಲೇ ಎಚ್ಚೆತ್ತುಕೊಂಡು
ಮುಸ್ಲಿಂ ಮುಖಂಡರು ಸಮುದಾಯದಲ್ಲಿ ಮತಾಂಧತೆಯನ್ನು ಹೆಚ್ಚಿಸಿಕೊಂಡು ದಾರಿ ತಪ್ಪಿದ , ಭಯೋತ್ಪಾದನೆಯಲ್ಲಿ ನಿರತವಾಗಿರುವವರ ಗೌಪ್ಯ ಮಾಹಿತಿನ್ನು ಎನ್ ಐ ಎ ಗೆ ನೀಡಬೇಕಿತ್ತು.
ಇದನ್ನು ಸಮುದಾಯ ನಿರ್ಲಕ್ಷಿಸಿದ್ದರಿಂದಲೇ ಮಂಗಳೂರು ಘಟನೆ ನಡೆಯಲು ಕಾರಣವಾಗಿದೆ.

ದೇಶ, ವಿದೇಶದಿಂದ ಹಣ ಪಡೆದು, ಭಯೋತ್ಪಾದನೆಯನ್ನು ನಡೆಸುತ್ತಿರುವುದರ ಘಟನೆಗಳನ್ನು ಸಮುದಾಯದ ನಾಯಕರು ಗಂಭೀರವಾಗಿ ಪರಿಗಣಿಸದೆ ಇದ್ದ ಪರಿಣಾಮ ಮಂಗಳೂರಿನಲ್ಲಿ ಭಾರೀ ಅನಾಹುತದ ಸಂಚು ರೂಪಿತವಾಗಿದೆ ಎಂದು ಡಾ.ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು