9:10 PM Sunday19 - May 2024
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಜೂನ್ 1ರಂದು ಮತದಾನ ಲೋಕಸಭೆ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಭಿನ್ನಮತದ ಮಹಾಸ್ಫೋಟ: ಸಿಎಂ ಸಿದ್ದರಾಮಯ್ಯ ಭವಿಷ್ಯ ಜಾಗತಿಕ ತಾಪಮಾನ: ಕೆಟ್ಟರೂ ಬಾರದ ಬುದ್ದಿ; ಕಾರ್ಕಳ ಹೆದ್ದಾರಿ ಕಾಮಗಾರಿಗೆ ಸಾವಿರಾರು ಮರ ಬಲಿ;… ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೌಕರರ ಮಿಂಚಿನ ಮುಷ್ಕರ: ದೇಶದಲ್ಲಿ ಹಲವು ವಿಮಾನಗಳ ಹಾರಾಟ… ಲೈಂಗಿಕ ದೌರ್ಜನ್ಯ, ಮಹಿಳೆಯ ಅಪಹರಣ ಪ್ರಕರಣ: ಮಾಜಿ ಸಚಿವ ಎಚ್.ಡಿ. ರೇವಣ್ಣಗೆ ಮೇ…

ಇತ್ತೀಚಿನ ಸುದ್ದಿ

ಭಯೋತ್ಪಾಕರ ಬಹಿಷ್ಕರಿಸಿ ಸಮುದಾಯದ ಎಲ್ಲ ಸವಲತ್ತುಗಳಿಂದ ದೂರ ಇಡಬೇಕು: ಶಾಸಕ ಡಾ.ಭರತ್ ಶೆಟ್ಟಿ

25/11/2022, 10:51

ಮಂಗಳೂರು(reporterkarnataka.com): ಮಂಗಳೂರಿನಲ್ಲಿ ನಡೆದ ಉಗ್ರರ ಕೃತ್ಯವನ್ನು ಮುಸ್ಲಿಂ ಜಮಾತ್ ಗಳು ,ಮುಸ್ಲಿಂ ಮುಖಂಡರು ಖಂಡಿಸುವ ಮತ್ತು
,ಇಂತಹ ಕೃತ್ಯಗಳಿಗಾಗಿ ಮುಸ್ಲಿಂ ಯುವಕರ ತಲೆಯಲ್ಲಿ ಮತಾಂಧತೆಯನ್ನು ತುಂಬಿಸಿ ಉಗ್ರ ಕೃತ್ಯ ನಡೆಸಲು ಹಣಕಾಸು ನೀಡುವ ,ಬೆಂಬಲ ನೀಡಿದ ಜನರನ್ನು ಹಾಗೂ ಸಂಘಟನೆಗಳನ್ನು ಬಹಿಷ್ಕರಿಸಿ ದೂರವಿಡುವ ಮೂಲಕ ದೇಶದ ಹಿತಕ್ಕಾಗಿ ಎನ್ ಐ ಎ ಜತೆ ಉಗ್ರ ನಿರ್ಮೂಲನಕ್ಕೆ ಸಹಕರಿಸಬೇಕಾಗಿದೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ. ಒತ್ತಾಯಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಸ್ಪೋಟಕ್ಕೆ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಹೊಣೆ ಹೊತ್ತಿದೆ. ಸರಕಾರ ಉಗ್ರ ನಿಗ್ರಹಕ್ಕೆ ಬೇಕಾದ ಕ್ರಮ ಕೈಗೊಳ್ಳುತ್ತದೆ.
ಇದರ ಹಿಂದೆ ಯಾರು ಇದ್ದಾರೆ ಎಂಬುದನ್ನು ಸಮುದಾಯದ ನಾಯಕರು ಗುರುತಿಸಿ ಮಾಹಿತಿ ನೀಡಿ ಇಂತಹ ಕೃತ್ಯ ಮುಂದೆ ನಡೆಯದಂತೆ ಎಚ್ಚೆತ್ತುಕೊಳ್ಳಬೇಕು.

“ಸಾಮರಸ್ಯ, ಭ್ರಾತೃತ್ವ ಕೇವಲ ಬಾಯಿ ಮಾತಾಗದಿರಲಿ. ಆಡಿದ್ದನ್ನು ಮಾಡಿ ತೋರಿಸುವ ಗುಣವೂ ಇರಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕೆ ಜಿ ಹಳ್ಳಿ,ಡಿ ಜೆ ಹಳ್ಳಿ ಘಟನೆ ನಡೆದಾಗಲೇ ಎಚ್ಚೆತ್ತುಕೊಂಡು
ಮುಸ್ಲಿಂ ಮುಖಂಡರು ಸಮುದಾಯದಲ್ಲಿ ಮತಾಂಧತೆಯನ್ನು ಹೆಚ್ಚಿಸಿಕೊಂಡು ದಾರಿ ತಪ್ಪಿದ , ಭಯೋತ್ಪಾದನೆಯಲ್ಲಿ ನಿರತವಾಗಿರುವವರ ಗೌಪ್ಯ ಮಾಹಿತಿನ್ನು ಎನ್ ಐ ಎ ಗೆ ನೀಡಬೇಕಿತ್ತು.
ಇದನ್ನು ಸಮುದಾಯ ನಿರ್ಲಕ್ಷಿಸಿದ್ದರಿಂದಲೇ ಮಂಗಳೂರು ಘಟನೆ ನಡೆಯಲು ಕಾರಣವಾಗಿದೆ.

ದೇಶ, ವಿದೇಶದಿಂದ ಹಣ ಪಡೆದು, ಭಯೋತ್ಪಾದನೆಯನ್ನು ನಡೆಸುತ್ತಿರುವುದರ ಘಟನೆಗಳನ್ನು ಸಮುದಾಯದ ನಾಯಕರು ಗಂಭೀರವಾಗಿ ಪರಿಗಣಿಸದೆ ಇದ್ದ ಪರಿಣಾಮ ಮಂಗಳೂರಿನಲ್ಲಿ ಭಾರೀ ಅನಾಹುತದ ಸಂಚು ರೂಪಿತವಾಗಿದೆ ಎಂದು ಡಾ.ಭರತ್ ಶೆಟ್ಟಿ ವೈ ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು