ಇತ್ತೀಚಿನ ಸುದ್ದಿ
ಕಾರ್ಕಳ: ಸಾಹಿತಿ, ಬರಹಗಾರ ಕೇವಿನ್ ಡಿಮೆಲ್ಲೋ ಆತ್ಮಹತ್ಯೆ; ಕಾರಣ ನಿಗೂಢ
24/11/2022, 22:51
ಕಾರ್ಕಳ(reporter Karnataka.com): ಸಾಹಿತಿ,ಬರಹಗಾರ ಕೇವಿನ್ ಡಿಮೆಲ್ಲೋ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನೇಕ ಮದ್ಯವರ್ಜನ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು.ಅನೇಕ ಕೊಂಕಣಿ ಬರಹಗಳ ಮೂಲಕ ಮನೆಮಾತಾಗಿದ್ದರು.ಕಾರ್ಕಳ ಕ್ರೈಸ್ಟ್ ಕಿಂಗ್ ಶಾಲೆಯ ಆಡಳಿತಾಧಿಕಾರಿಯು ಅಗಿದ್ದರು. ಸಾಹಿತ್ಯಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಪಡರದಿದ್ದರು. ಆದರೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲೀಸರು ತನಿಖೆ ನಡೆಸುತ್ತಿದ್ದಾರೆ.