5:52 PM Thursday30 - April 2026
ಬ್ರೇಕಿಂಗ್ ನ್ಯೂಸ್
ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ವ್ಯಕ್ತಿ ಸಾವು: ಬಿಸಿಲಿನ ತಾಪಮಾನಕ್ಕೆ… ರಾಜ್ಯದಲ್ಲಿ ಹೊಸ ಕನಿಷ್ಠ ವೇತನ ಜಾರಿಗೆ ತರಲು ಯತ್ನ: ಸಂಡೂರಿನಲ್ಲಿ ಕಾರ್ಮಿಕ ಸಚಿವ… ಬಿಜೆಪಿ ಪಕ್ಷದಿಂದಲೇ ಮಹಿಳೆಯರಿಗೆ ಶೇ. 30ರಷ್ಟು ಮೀಸಲಾತಿ ಪ್ರಕಟಿಸಲಿ: ಸಚಿವ ಸಂತೋಷ್ ಲಾಡ್… Mangaluru | ಕುಕ್ಕರ್‌ ಬಾಂಬ್‌ ಸ್ಫೋಟದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕಿತ್ತು: ಸಂತ್ರಸ್ತ… ಗಾದಿ ಪೈಪೋಟಿ | ದೆಹಲಿಗೆ ಹೋಗಲು 50 ಶಾಸಕರ ಟಿಕೆಟ್‌ ಬುಕ್ಕಿಂಗ್‌: ಕೇಂದ್ರ… Koppala | ಕುಷ್ಟಗಿಯಲ್ಲಿ ಗುಡುಗು ಸಹಿತ ಮಳೆ: ಸಿಡಿಲು ಬಡಿದು ವ್ಯಕ್ತಿ ಬಲಿ ಕೊಡಗು-ಮೈಸೂರು ರಾಜ್ಯ ಹೆದ್ದಾರಿ ಬಳಿ ಹುಲಿ ದಾಳಿಗೆ ಹಸು ಬಲಿ: ರೊಚ್ಚಿಗೆದ್ದ ಗ್ರಾಮಸ್ಥರಿಂದ… New Delhi | 228 ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ: ಸ್ವಲ್ಪದರಲ್ಲೇ ತಪ್ಪಿತು ಮತ್ತೊಂದು… ಶಿಕ್ಷಕರೇ ಇಲ್ಲದ ಶಾಲೆಗಳಿಗೆ ಶೇ. 94 ಬಂದಿದ್ದು ಹೇಗೆ? ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದೊಡ್ಡ… ತಂದೆ ಬೈದ ಕ್ಷುಲ್ಲಕ ಕಾರಣಕ್ಕೆ ಯುವತಿ ಆತ್ಮಹತ್ಯೆಗೆ ಶರಣು

ಇತ್ತೀಚಿನ ಸುದ್ದಿ

ರೋಟರಿ ಕ್ಲಬ್ ಮಂಗಳೂರು ಪೂರ್ವ: ‘ಬಲೇ ಗೊಬ್ಬುಗ -2022’ ಕ್ರೀಡಾಕೂಟ; ವಾಟರ್ ಪ್ಯೂರಿಫೈರ್ ಕೊಡುಗೆ

20/10/2022, 17:30

ಮಂಗಳೂರು(reporterkarnataka.com): ರೋಟರಿ ಕ್ಲಬ್ ಮಂಗಳೂರು ಪೂರ್ವ ಇದರ ಆಶ್ರಯದಲ್ಲಿ ಆರ್.ಐ ಜಿಲ್ಲೆ ೩೧೮೧ ವಲಯ -೨ ಮತ್ತು ೩ರ “ಬಲೇ ಗೊಬ್ಬುಗ -೨೦೨೨”, ಕ್ರೀಡಾಕೂಟ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಜರುಗಿತು.

ಪಿಡಿಜಿ ಎಂ ರಂಗನಾಥ್ ಭಟ್ ಕ್ರೀಡಾಕೂಟ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ ಬಿ.ಆರ್ ಶಿವಪ್ರಸಾದ್ ಆಳ್ವ (ಕೋಟಕ್ ಮಹೀಂದ್ರ ಇದರ ಚಾನಲ್ ಪಾರ್ಟ್ನರ್) ಶುಭ ಕೋರಿದರು.
ಜೋನ್-೨ರ ಎ.ಜಿ ಗಳಾದ ರಾಜಗೋಪಾಲ್ ರೈ ಹಾಗೂ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಂಗಳಾ ಕ್ರೀಡಾಂಗಣಕ್ಕೆ ವಾಟರ್ ಪ್ಯೂರಿಫೈರನ್ನು ದೇಣಿಗೆಯಾಗಿ ರೋಟರಿ ಕ್ಲಬ್ ಆಫ್ ಮಂಗಳೂರು ಪೂರ್ವದ ವತಿಯಿಂದ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಿಜಿ ಎನ್ ವಿಕ್ರಮದತ್ತ ಹಾಗೂ ಪಿ.ಎ.ಜಿ. ಡಾ. ಶಿವಪ್ರಸಾದ್ ಕೆ. ಹಾಗೂ ವಲಯ ೨ಮತ್ತು ೩ರ ಎಸಿಗಳಾದ ಶಶಿಧರ್ ಕೆ. ಮತ್ತು ಸೂರಜ್ ಹೆಬ್ಬಾರ್ ನೆರಿಯಾ ಉಪಸ್ಥಿತರಿದ್ದರು.

ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷರಾದ ಅಂ ಹರೀಶ್ ಶೆಟ್ಟಿ ಸ್ವಾಗತಿಸಿದರು. ಕ್ರೀಡೆಯ ಉದ್ದೇಶವನ್ನು ಇವೆಂಟ್ ಚೇರ್‌ಮೆನ್ ರೋ. ಆನಂದ ಶೆಟ್ಟಿ ತಿಳಿಸಿದರು. ಪ್ರಮಾಣ ವಚನವನ್ನು ಇವೆಂಟ್ ಕಾರ್ಯದರ್ಶಿ ದೀರಜ್ ಶೆಟ್ಟಿ ಯವರು ಭೋದಿಸಿದರು. ಅಧ್ಯಕ್ಷ ಸದಾಶಿವ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಝೋ-೨ರ ತಂಡ ಪ್ರಶಸ್ತಿಯನ್ನು ಆರ್. ಸಿ ಮಂಗಳೂರು ಪೂರ್ವ ಪಡೆದಿದ್ದು ರನ್ನರ್ ಪ್ರಶಸ್ತಿಯನ್ನು ಆರ್.ಸಿ ಬೈಕಂಪಾಡಿ ತಂಡವು ಗಳಿಸಿರುತ್ತದೆ.

ಝೋನ್-೩ರ ತಂಡ ಪ್ರಶಸ್ತಿಯನ್ನು ಆರ್. ಸಿ ಸೌತ್ ಮಂಗಳೂರು ತಂಡವು ರನ್ನರ್ ಆಗಿ ಆರ್. ಸಿ ದೇರಳಕಟ್ಟೆ ತಂಡವು ಗಳಿಸಿಕೊಂಡಿತು.
ಶ್ರೀ ರಾಮಕೃಷ್ಣ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಬ್ಯಾಂಡ್‌ನೊAದಿಗೆ ಪಥ ಸಂಚಲನಕ್ಕೆ ವಿಶೇಷ ಮೆರುಗನ್ನು ನೀಡಿದರು

ಇತ್ತೀಚಿನ ಸುದ್ದಿ

ಜಾಹೀರಾತು