2:07 AM Tuesday5 - August 2025
ಬ್ರೇಕಿಂಗ್ ನ್ಯೂಸ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ… ಸುಹಾಸ್ ಶೆಟ್ಟಿ ಮರ್ಡರ್ ಕೇಸ್: ಕಾಫಿನಾಡು ಕಳಸದಲ್ಲಿ ಎನ್ಐಎ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ Bangaluru | ನಮ್ಮ ಮೆಟ್ರೋದಲ್ಲಿ ಮೊದಲ ಬಾರಿಗೆ ಯಕೃತ್‌ ರವಾನೆ: ಸ್ಪರ್ಶ್‌ ಆಸ್ಪತ್ರೆಯಲ್ಲಿ… ರಾಹುಲ್ ಗಾಂಧಿ ನೀಡಿರುವ ‘ಮತ ಕಳ್ಳತನ’ ಪದವು ಭಾರತೀಯ ರಾಜಕೀಯ ಶಬ್ದಕೋಶಕ್ಕೆ ಸೇರ್ಪಡೆ:…

ಇತ್ತೀಚಿನ ಸುದ್ದಿ

ಗಂಗಾವತಿ: ಹಿರೇಜಂತಕಲ್ ನಲ್ಲಿ ಅಂತಾರಾಷ್ಟ್ರೀಯ ಬಾಲೆಯರ ದಿನಾಚರಣೆ

15/10/2022, 10:20

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka gmail.com

ಗಂಗಾವತಿ ತಾಲೂಕು ಹಿರೇಜಂತಕಲ್ಲು ಗ್ರಾಮದ ಕೂಡ್ಲಿಗಿ ಸ್ಫೂರ್ತಿ ಮಹಿಳಾ ಸೇವಾ ಟ್ರಸ್ಟ,ಇವರಿಂದ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯನ್ನು ಆಚರಿಸಲಾಯಿತು.

ಪ್ರಯುಕ್ತ ಗ್ರಾಮದ ಶ್ರೀ ದ್ಯಾವಮ್ಮನ ದೇವಸ್ಥಾನದಲ್ಲಿ, ವಿವಿದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡ್ಲಿಗಿ ಸ್ಫೂರ್ತಿ ಮಹಿಳಾ ಸೇವಾ ಟ್ರಸ್ಟ್ ಅಧ್ಯಕ್ಷೆ ಡಾ.ಆರ್.ಈರಮ್ಮ ವಹಿಸಿಕೊಂಡಿದ್ದರು.

ಪುಟ್ಟ ಪುಟ್ಟ ಬಾಲಕಿಯರು ನಮ್ಮ ದೇಶದ ನಮ್ಮ ಕರ್ನಾಟಕದ ಕ್ರಾಂತಿಕಾರಿ ಹೋರಾಟಗಾರರ ಹಾಗೂ ಗಣ್ಯಮಾನ್ಯರ ಮತ್ತು ಸಮಾಜ ಸುಧಾರಕರ ವೇಷದಲ್ಲಿ ಕಾಣಿಸಿಕೊಂಡು. ಕಾರ್ಯಕ್ರಮನ್ನು ಪುಟ್ಟ ಹೆಣ್ಣು ಮಕ್ಕಳಾದ ಸಾನ್ವಿ, ಆದ್ಯ, ಸನ್ನಿಧಿ, ಸಿಂಚನಾ,ಶಿವಾನಿ, ಪ್ರಿಯದರ್ಶಿನಿ, ಯಣ್ ಆದಿತ್ಯ ಮುಂತಾದ ಬಾಲಕಿಯರು ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಈರಮ್ಮ ಮಾತನಾಡಿ, ಹೆಣ್ಣು ದೇಶದ ಕಣ್ಣು ಈ ದೇಶದ ಆಸ್ತಿಯಾಗಿದ್ದರು. ಪ್ರತಿಯೊಬ್ಬರೂ ಹೆಣ್ಣು ಮಕ್ಕಳನ್ನು ಗೌರವಿಸಿ, ಹೆಣ್ಣು ಮಕ್ಕಳಿಗೆ ಉತ್ತಮ
ಶಿಕ್ಷಣ ನೀಡಬೇಕಿದೆ. ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆಯಿಲ್ಲ, ಎಲ್ಲಾ ಕ್ಷೇತ್ರದಲ್ಲಿ ಹೆಣ್ಣು ಮಕ್ಕಳು ಬೆಳೆಯಬೇಕು ಬೆಳೆಸಬೇಕು ಎಂದು ಈರಮ್ಮ ಕೋರಿದರು.

ಈ ಮೂಲಕ ಅವರು ಮಹಿಳೆಯರಲ್ಲಿ ಜಾಗೃತಿ ಮೂಡಿಸಿದರು,ಹಾಗೆ ಪುಟ್ಟ ಮಕ್ಕಳಿಗೆ ಪುಸ್ತಕ,ಪೆನ್ನು,ಜಾಮಿಟ್ರಿ ಬಾಕ್ಸ್ ವಿತರಿಸಿದರು. ಮಹಿಳಾ ಮಹಿಳಾ ಸಂಘದವರಾದ ಈರಮ್ಮ, ಗಂಗಾವತಿ ಮಲ್ಲಮ್ಮ, ಲಕ್ಷ್ಮಿದೇವಿ, ಸುನೀತಾ,ಈರಮ್ಮ, ರತ್ನ,ಸುನೀತಾ, ಗಂಗಮ್ಮ, ರೇಖಾ, ಶಾರದಾ, ಶಕುಂತಲಾ, ರತ್ನಮ್ಮ, ಜಯಮ್ಮ, ಮರಿಯಮ್ಮ, ತಾಯಮ್ಮ, ಗೌರಮ್ಮ, ಉಮಾದೇವಿ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು. ಗಂಗಾವತಿ ಈರಮ್ಮ ಸ್ವಾಗತಿಸಿ ನಿರ್ವಹಿಸಿದರು,ಮಲ್ಲಮ್ಮ ವಂದಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು