12:19 AM Monday22 - September 2025
ಬ್ರೇಕಿಂಗ್ ನ್ಯೂಸ್
ಮುಂದಿನ ಒಲಂಪಿಕ್ಸ್ ಪದಕ ವಿಜೇತರಿಗೆ ಸರ್ಕಾರದಿಂದ 6 ಕೋಟಿ ನಗದು ಬಹುಮಾನ: ಮುಖ್ಯಮಂತ್ರಿ… ಜಿಎಸ್ ಟಿ ಜಾರಿ ಮಾಡಿದ್ದೂ ಮೋದಿ, ಜಿಎಸ್ ಟಿ ಹೆಚ್ಚೆಚ್ಚು ವಿಧಿಸಿದ್ದೂ ಮೋದಿಯವರೇ,… ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ಜಾಗೃತಿ: ಬೆಂಗಳೂರು ಇಸ್ಕಾನ್ ದೇವಾಲಯಕ್ಕೆ ಚಿನ್ನದ ಬಣ್ಣದ ಬೆಳಕು ನವೆಂಬರ್ ನಿಂದ ಮಾಹಿತಿ ಹಕ್ಕು ಅದಾಲತ್: ಮಾಹಿತಿ ಹಕ್ಕು ಅರ್ಜಿಗಳನ್ನು ಶೂನ್ಯಕ್ಕಿಳಿಸಲು ಗುರಿ ಪಿಡಿಒ ಜೇಷ್ಠಾತಾ ಪಟ್ಟಿ ನ್ಯಾಯಸಮ್ಮತವಾಗಿ ಅಂತಿಮಗೊಳಿಸಲು ಸೂಕ್ತ ಕ್ರಮ: ಸಚಿವ ಪ್ರಿಯಾಂಕ್‌ ಖರ್ಗೆ ಮಂಗಳೂರಿನಲ್ಲಿ ಧರ್ಮದ ಹೆಸರಲ್ಲಿ ಜೈಲಿಗೆ ಹೋದವರು, ಕೊಲೆ ಆದವರೆಲ್ಲಾ ಹಿಂದುಳಿದವರೇ ಆಗಿದ್ದಾರೆ: ಸಿಎಂ… ವಿರಾಜಪೇಟೆ ಆರೆಂಜ್ ಸ್ಪಾ -ಬ್ಯೂಟಿ ಪಾರ್ಲರ್ ದಾಳಿ ಪ್ರಕರಣ: ನಾಲ್ವರು ಪ್ರಮುಖ ಆರೋಪಿಗಳ… Kodagu | ಕುಶಾಲನಗರ: ಕಾವೇರಿ ನದಿಯಲ್ಲಿ ಮುಳುಗಿ ಕಾಡಾನೆ ದಾರುಣ ಸಾವು ಮಡಿಕೇರಿ ನಗರಸಭೆಯ ಮೇಲೆ ಲೋಕಾಯುಕ್ತ ದಿಢೀರ್ ದಾಳಿ: ಸಾರ್ವಜನಿಕರ ದೂರಿಗೆ ಸ್ಪಂದನೆ ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್: ತಡೆ ಕೋರಿ ಸಲ್ಲಿಸಿದ ಅರ್ಜಿ ಸುಪ್ರೀಂಕೋರ್ಟ್…

ಇತ್ತೀಚಿನ ಸುದ್ದಿ

ನೈಟ್ ಕರ್ಫ್ಯೂ ನೆಪದಲ್ಲಿ ಪೊಲೀಸ್ ದರ್ಬಾರ್: ಸಂಕಷ್ಟದಲ್ಲಿ ಫುಡ್ ಡೆಲಿವರಿ ಬಾಯ್ ಗಳು, ಸಾರ್ವಜನಿಕರು!

03/08/2022, 22:49

ಸಾಂದರ್ಭಿಕ ಚಿತ್ರ
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ರಾತ್ರಿ ಕರ್ಫ್ಯೂ ಬಂದೋಬಸ್ತ್ ನೆಪದಲ್ಲಿ ಪೊಲೀಸ್ ದರ್ಬಾರ್ ಜಾಸ್ತಿಯಾಗಿದ್ದು, ಸಿಕ್ಕ ಸಿಕ್ಕ ಕಡೆ ವಾಹನ ಸವಾರರ ಮೇಲೆ ದಂಡ ಹಾಕುವ, ದಾಖಲೆ ಪರಿಶೀಲಿಸುವ ಕೆಲಸ ನಡೆಯುತ್ತಿದೆ ಎಂಬ ಸಾರ್ವಜನಿಕರ ದೂರು ಕೇಳಿ ಬರುತ್ತಿದೆ.

ಸುರತ್ಕಲ್ ನಲ್ಲಿ ಫಾಝಿಲ್ ಕೊಲೆ ನಡೆದ ಬಳಿಕ ‘ಊರು ಕೊಳ್ಳೆ ಹೋದ ಮೇಲೆ ಕೋಟೆ ಬಾಗಿಲು ಮುಚ್ಚಿದರು’ ಎನ್ನುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಸಂಜೆ 6ರ ಬಳಿಕ ನೈಟ್ ಕರ್ಫ್ಯೂ ವಿಧಿಸಿ ಬಡ ಹಾಗೂ ಕೆಳ ಮಧ್ಯಮ ವರ್ಗದ ಜನರ ಹೊಟ್ಟೆ ಮೇಲೆ ಕಲ್ಲು ಚಪ್ಪಡಿ ಎಳೆದಿದೆ. 

ಮುಂಜಾಗರುಕತೆ ಕ್ರಮವಾಗಿ ಸಂಜೆ 6 ಗಂಟೆಯ ನಂತರ ರಸ್ತೆಯ ಆಯಕಟ್ಟಿನ ಜಾಗದಲ್ಲಿ ಬ್ಯಾರಿಗೇಟ್ ಹಾಕಿ ತಪಾಸಣೆ ನಡೆಸುವ ನೆಪದಲ್ಲಿ ಡೆಲಿವರಿ ಬಾಯ್ ಆರಂಭಗೊಂಡು ಜನಸಾಮಾನ್ಯರನ್ನು ಪೀಡಿಸಲು ಆರಂಭಿಸಿದೆ. ದ್ವಿಚಕ್ರ ವಾಹನಗಳು, ಹಳೆಯ ಸಣ್ಣ ಕಾರುಗಳ ಮಾಲೀಕರು ಇವರ ಟಾರ್ಗೆಟ್. ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುವವರಿಗೆ ಇವರದ್ದೇನು ತೊಂದರೆ ಇಲ್ಲ.

ಪೊಲೀಸರು ದಂಡದ ನೆಪದಲ್ಲಿ ವಿಚಾರಣೆ, ಆರ್ಡರ್ ಪ್ರೊಫ್ ಇದ್ದರೂ ಡಾಕ್ಯುಮೆಂಟ್ ಚೆಕ್ಕಿಗ್ ನೆಪದಲ್ಲಿ  ದರ್ಬಾರ್ ನಡೆಸುತ್ತಾರೆ. ಫುಡ್ ಡೆಲಿವರಿ ಬಾಯ್ ಗಳಂತೂ ಇದರಿಂದ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಡೆಲಿವರಿ ವಿಳಂಬವಾದರೆ ಗ್ರಾಹಕರು ಡೆಲಿವರಿ ಬಾಯ್ ಜತೆ ಜಗಳಕ್ಕೆ ನಿಲ್ಲುತ್ತಾರೆ. ಆರ್ಡರ್ ಕ್ಯಾನ್ಸಲ್ ಆದ ನಿದರ್ಶನವೂ ಇದೆ. ಇದ್ಯಾವುದೂ ಜಿಲ್ಲಾಧಿಕಾರಿಗಳಿಗಾಗಲಿ, ಪೊಲೀಸ್ ಕಮಿಷನರ್ ಅವರಿಗಾಲಿ ಅಥವಾ ನಮ್ಮನ್ನು ಆಳುವವರಿಗಾಗಲಿ ಅರ್ಥವಾಗುವುದಿಲ್ಲ.
ವಿಶೇಷ ಎಂದರೆ 9 ಗಂಟೆಯ ನಂತರ ಯಾವ ಪೊಲೀಸರು ಬ್ಯಾರೀಕೆಡ್ ಪಕ್ಕ ಇಲ್ಲ.ಯಾವ ತಪಾಸಣೆಯು ಇಲ್ಲ.


ಈ ಹಿಂದೆ ಪೊಲೀಸ್ ಆಯುಕ್ತ  ನೀಡಿರುವ ಆದೇಶ ಪ್ರಕಾರ ಫುಡ್ ಡೆಲಿವರಿಯ ಫುಡ್ ಆರ್ಡರ್ ದಾಖಲೆ ತೋರಿಸಿ ಸಂಚರಿಸಲು ಅವಕಾಶ ಇತ್ತು. ಆದರೀಗ ಗಂಟೆ ಗಟ್ಟಲೆ ನಿಲ್ಲಿಸಿ ಡಾಕ್ಯುಮೆಂಟ್ ಚೆಕ್ಕಿಂಗ್,  ದಂಡ ವಸೂಲಿಯಿಂದ ಎಲ್ಲೂ ಕಷ್ಟವಾಗಿದೆ. ಈ ಬಗ್ಗೆ ಪೊಲೀಸ್ ಆಯುಕ್ತರು ಕಾರ್ಯ ನಿರತ ಪೊಲೀಸರಿಗೆ ಮಾರ್ಗದರ್ಶನ ನೀಡಬೇಕಾದ ಅನಿವಾರ್ಯ ಎದುರಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು