ಇತ್ತೀಚಿನ ಸುದ್ದಿ
ಸಿರಿಯಾದಲ್ಲಿ ತರಬೇತಿ ಪಡೆದು ಪ್ರವೀಣ್ ಹತ್ಯೆ ಮಾಡಲಾಗಿದೆ: ಕೇಂದ್ರ ಸಚಿವೆ ಕರಂದ್ಲಾಜೆ
31/07/2022, 16:24

ಸುಳ್ಯ:(Reporterkarnataka.com) ಪ್ರವೀಣ್ ನೆಟ್ಟಾರು ಚಲನವಲನ ಗೊತ್ತಿದ್ದ ಸ್ಥಳೀಯರು ಟಾರ್ಗೆಟ್ ಮಾಡಿ ಹತ್ಯೆ ಮಾಡಿದ್ದಾರೆ. ಕೇರಳ ಮಾದರಿಯಲ್ಲಿ ಕುತ್ತಿಗೆ ಕಡಿದು ಕೊಲ್ಲಲಾಗಿದೆ. ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಲೆ ಮಾಡುವ ರೀತಿಯಾಗಿದ್ದು, ಅವರು ಸಿರಿಯಾಗೆ ಹೋಗಿ ತರಬೇತಿ ಪಡೆದು ಹತ್ಯೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪ್ರವೀಣ್ ನೆಟ್ಟಾರು ಮನೆಗೆ ಭಾನುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವೀಣ್ ಸಾವು ನಮಗೆ ದುಃಖ ತಂದಿದೆ. ಸಮಾಜದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಪಿಎಫ್ಐ ಬ್ಯಾನ್ ಮಾಡಲು ಅಗತ್ಯ ಮಾಹಿತಿಬೇಕಾಗಿದ್ದು ಸದ್ಯ ಕೇಂದ್ರ ಸರ್ಕಾರ ಮಾಹಿತಿ ಸಂಗ್ರಹಿಸುತ್ತಿದೆ. ಇಂತಹ ಘಟನೆಗಳಾದಾಗ ಆಕ್ರೋಶ ಉಂಟಾಗುವುದು ಸಹಜ. ಅದು ನಮಗೂ ಇದೆ. ಆದರೆ ಆಕ್ರೋಶದ ಹಿಂದೆ ನಮ್ಮ ಹುಡುಗನನ್ನು ಕಳೆದುಕೊಂಡ ನೋವಿದೆ. ಆದ್ದರಿಂದ ಕಾನೂನು ಮೂಲಕ ಇದರ ವಿರುದ್ಧ ಹೋರಾಟವಾಗಬೇಕಿದೆ ಎಂದರು.
ಮಸೂದ್ ಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವೆ ಶೋಭಾ ಕರಂದ್ಲಾಜೆ, ಮಸೂದ್ ಹತ್ಯೆ ಷಡ್ಯಂತ್ರದ ಕೊಲೆ ಅಲ್ಲ. ಅದು ಬೇರೆ ರೀತಿಯ ಕೊಲೆ. ರಾಜಿ ಮಾತುಕತೆಗೆ ಕರೆದು ಕೊಲೆ ಮಾಡಲಾಗಿದೆ. ಅದು ದೇಶದ್ರೋಹದ ಜೊತೆ ಜೋಡಿಸಿಕೊಂಡಿಲ್ಲ ಎಂದರು.