ಇತ್ತೀಚಿನ ಸುದ್ದಿ
ಕೂಡ್ಲಿಗಿ: 2 ಪ್ರತ್ಯೇಕ ಕರಡಿ ದಾಳಿ ಪ್ರಕರಣ; ಯುವಕ ಮತ್ತು ನಡು ವಯಸ್ಕ ಮಹಿಳೆಗೆ ಗಾಯ; ಸ್ಥಳೀಯರ ಆಕ್ರೋಶ
18/07/2022, 16:23

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಓಬಳಶೆಟ್ಟಿ ಹಳ್ಳಿ ಹಾಗೂ ಹುಲಿಕೊಂಟೆ ಗ್ರಾಮದಲ್ಲಿ ಕರಡಿ ದಾಳಿ ನಡೆಸಿದ ಎರಡು ಪ್ರತ್ಯೇಕ ಪ್ರಕರಣಗಳು ನಡೆದಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತನಾದ ಕಾಡಪ್ಪರ ಸೋಮಶೇಖರ್ (38) ಎಂಬವರು ತನ್ನ ಜಮೀನಿನಲ್ಲಿ ಬೆಳಗಿನ ಜಾವ ನೀರು ಹಾಯಿಸುವ ಸಂದರ್ಭದಲ್ಲಿ ಕರಡಿಯು ದಾಳಿ ಮಾಡಿ ಕೈ ಬೆರಳನ್ನು ತುಂಡು ತುಂಡಾಗಿ ಮಾಡಿದೆ. ಇನ್ನೊಂದು ಪ್ರಕರಣದಲ್ಲಿ ಹುಲಿಕುಂಟೆ ಗ್ತಾಮದ ಓಬಕ್ಕ(45) ಎಂಬವರು
ಬರ್ಹಿದೆಸೆಗೆಂದು ಗ್ರಾಮದ ಅಂಚಿನ ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಕರಡಿ ದಾಳಿ ಮಾಡಿದೆ. ಓಬಕ್ಕ ತೀರ್ವ ಗಾಯಗೊಂಡಿದ್ದು ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.
ಈ ರೀತಿ ಪದೇ ಪದೇ ಇಂತಹ ಘಟನೆಗಳು ತಾಲ್ಲೂಕಿನಲ್ಲಿ ನಡೆಯುತ್ತಿವೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಭೇಟಿ ನೀಡಿ ಗ್ರಾಮದ ಜನರನ್ನು ವಿಚಾರಿಸಿ ಕಾಡಂಚಿನಲ್ಲಿ ಕರಡಿಯ ಬೋನುಗಳನ್ನು ಹಾಕಿ ಕರಡಿಗಳನ್ನು ಹಿಡಿದು ಕರಡಿ ಧಾಮಕ್ಕೆ ಬಿಡಬೇಕು. ಇಂತಹ ಘಟನೆಗಳನ್ನು ತಪ್ಪಿಸಬೇಕು ಎಂದು ಗ್ರಾಮಗಳ ಗ್ರಾಮಸ್ಥರು ಆಗ್ರಹಿಸಿದ್ದಾರೆ.