11:20 AM Saturday19 - July 2025
ಬ್ರೇಕಿಂಗ್ ನ್ಯೂಸ್
ಮಂಗಳೂರು – ಬೆಂಗಳೂರು 4 ತಾಸಿನ ಆಂಬುಲೆನ್ಸ್ ಪ್ರಯಾಣ!: ಹೃದಯ ಕಾಯಿಲೆಯ 14… ವಿದ್ಯುತ್ ಶಾಕ್: ಲೈನ್ ಮ್ಯಾನ್ ದಾರುಣ ಸಾವು; ಒಂದೂವರೆ ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ… ರಾಹುಲ್ ಗಾಂಧಿಯ ಗೊತ್ತಿಲ್ಲದ ಸಾಧನೆಗೆ ಗೊತ್ತಿಲ್ಲದ ಪ್ರಶಸ್ತಿ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ… ಬಿರುಸುಗೊಂಡ ಕಾಡಾನೆಗಳ ಅರಣ್ಯಕ್ಕೆ ಅಟ್ಟುವ ಕಾರ್ಯ: ನಾಡಿನಿಂದ ಕಾಡಿನತ್ತ ಆನೆಗಳ ಮತ್ತೊಂದು ಹಿಂಡು ಭಾರೀ ಮಳೆ: ಕೊಡಗು ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ: ಶಾಲೆ- ಕಾಲೇಜುಗಳಿಗೆ ನಾಳೆಯೂ… ಎಐಸಿಸಿ ಅಖಿಲ ಭಾರತ ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಮೊದಲ ಸಭೆ ಅತ್ಯಂತ… ಭಾರೀ ಮಳೆ: ಕೊಡಗು ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಪಿಯು ಕಾಲೇಜಿಗೆ… ಕರ್ಣಾಟಕ ಬ್ಯಾಂಕ್ ವಿಲೀನಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ: ಬ್ಯಾಂಕಿನ ನೂತನ ವ್ಯವಸ್ಥಾಪಕ ನಿರ್ದೇಶಕ,… ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್ ಅಭಿವೃದ್ಧಿಪಡಿಸಿದ ವಿಶೇಷ ಡಿಜಿಲಾಕರ್ ಲೋಕಾರ್ಪಣೆ: ಮುಖ್ಯಮಂತ್ರಿ ಸಿದ್ದರಾಮಯ್ಯ… Kodagu | ಬೇಲೂರಿನಲ್ಲಿ ಉಪಟಳ ನೀಡುತ್ತಿದ್ದ ‘ಕರಡಿ’ ಆನೆಗೆ ದುಬಾರೆಯಲ್ಲಿ ‘ಬಬ್ರುವಾಹನ’ ಎಂದು…

ಇತ್ತೀಚಿನ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯ 10 ಮಂದಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ಸಾಧಕರಿಗೆ ನಾಳೆ ಗೌರವ ಸನ್ಮಾನ

08/07/2022, 18:19

ಕಿನ್ನಿಗೋಳಿ(reporterkarnataka.com):  ಯುಗಪುರುಷ ಪತ್ರಿಕೆ ತನ್ನ 75ನೇ ವರ್ಷದ ಸಂಭ್ರಮಾಚರಣೆಯನ್ನ ಆಚರಿಸುತ್ತಿದ್ದು, ಈ ಸಂಭ್ರಮೋತ್ಸವವನ್ನು ಆರದಿರಲಿ ಬದುಕು ಆರಾಧನಾ ತಂಡದ ಜತೆ ಜಂಟಿಯಾಗಿ ಹಮ್ಮಿಕೊಳ್ಳಲಿದೆ ಎಂದು ಯುಗಪುರುಷ ಪತ್ರಿಕೆ ಸಂಪಾದಕರಾದ ಭುವನಾರಾಮ ಉಡುಪ ಹಾಗೂ ಆರದಿರಲಿ ಬದುಕು ತಂಡದ ನಿರ್ವಾಹಕಿ ಪದ್ಮಶ್ರೀ ಭಟ್ ನಿಡ್ಡೋಡಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾರ್ಯಕ್ರಮದ ಪ್ರಯುಕ್ತ ಕಿನ್ನಿಗೋಳಿ  “ಯುಗಪುರುಷ “ಸಭಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯ ಅಂಗವಾಗಿ ಕರಾವಳಿ ಕರ್ನಾಟಕದ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 10 ಮಂದಿ ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ಸಾಧಕರಿಗೆ ನಾಳೆ(ಜುಲೈ 9)
ಗೌರವ ಸನ್ಮಾನ ನಡೆಸಲಾಗುವುದು ಎಂದು ಆಯೋಜಕರಾದ ಭುವನಾರಾಮ ಉಡುಪ ಹಾಗೂ ಪದ್ಮಶ್ರೀ ಭಟ್ ನಿಡ್ಡೋಡಿ  ತಿಳಿಸಿರುತ್ತಾರೆ. ಸಾಧಕ ಪತ್ರಕರ್ತರಾದ ಜಿತೇಂದ್ರ ಕುಂದೇಶ್ವರ, ಡಾ. ಶೇಖರ ಅಜೆಕಾರ್, ಹರೀಶ್. ಕೆ. ಆದೂರು, ವಾಮನ ಕರ್ಕೇರ, ಆರ್ ಸಿ ಭಟ್, ಧನಂಜಯ ಗುರುಪುರ,ಮಂದಾರ ರಾಜೇಶ್ ಭಟ್,ಡಾ. ರಶ್ಮಿ ಅಮ್ಮೆಂಬಳ, ವಾಮನ ಕರ್ಕೇರ, ಕಿರಣ ಮಂಜನಬೈಲ್  ಅವರುಗಳು ತನ್ನ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಸನ್ಮಾನಿಸಲಿದ್ದೇವೆ ಎಂದು ಸಂಘಟಕಧ್ವಯರು ತಿಳಿಸಿರುತ್ತಾರೆ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಸಾಣೂರು ಅರುಣ್ ಶೆಟ್ಟಿಗಾರ್ ಆಗಮಿಸಲಿದ್ದು, ಹಲವು ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಗೌರವ ಸನ್ಮಾನ ಸಮಾರಂಭ ನಡೆಯಲಿದ್ದು, ನಂತರದಲ್ಲಿ ಆರದಿರಲಿ ಬದುಕು ಆರಾಧನಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 

ಯುಗಪುರುಷ ತನ್ನ 75 ವಸಂತಗಳನ್ನ ಪೂರೈಸಿದ ಸಂಭ್ರಮ ಮತ್ತೊಂದೆಡೆ ಆರದಿರಲಿ ಬದುಕು ಆರಾಧನಾ ತಂಡ ಕಳೆದ ನಾಲ್ಕು ವರ್ಷಗಳಿಂದ ನಿರಂತರವಾಗಿ ಕರಾವಳಿ ಕರ್ನಾಟಕದ ಬಡ ಅನಾರೋಗ್ಯ ಪೀಡಿತ ಅಶಕ್ತರ ಪಾಲಿನ ಆಶಾಕಿರಣವಾಗಿ ಹೊರಹೊಮ್ಮಿದೆ. ಈಗಾಗಲೇ ಆರದಿರಲಿ ಬದುಕು ಸಂಸ್ಥೆ ಕಳೆದ ನಾಲ್ಕು ವರ್ಷಗಳಲ್ಲಿ 15 ಲಕ್ಷಕ್ಕಿಂತಲೂ ಹೆಚ್ಚು ಮೊತ್ತದ ಹಣವನ್ನು ತನ್ನ ಸದಸ್ಯರಿಂದಲೇ ಸಂಗ್ರಹಿಸಿ, (ಹೊರ ಜಗತ್ತಿನ ಯಾರ ಮುಂದೆಯೂ ಕೈಚಾಚದೆ ) ಅಗತ್ಯವುಳ್ಳ ಅನಾರೋಗ್ಯ ಪೀಡಿತರಿಗೆ ಶುಶ್ರೂಷೆಗಾಗಿ ಅಥವಾ ವೈದ್ಯಕೀಯ ವೆಚ್ಚಕ್ಕಾಗಿ ನೀಡಿದೆ, ಅಲ್ಲದೆ ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಆರದಿರಲಿ ಬದುಕು ತಂಡ ಮಕ್ಕಳಿಗಾಗಿ ಹೊಸ ಹೊಸ ಯೋಜನೆಗಳನ್ನ ರೂಪಿಸಿ ಅನುಷ್ಠಾನಗೊಳಿಸಿ,ಅದೆಷ್ಟೋ ಮಕ್ಕಳ ಪಾಲಿಗೆ ಸಾಂಸ್ಕೃತಿಕವಾಗಿ ಅದೃಷ್ಟದ ಬಾಗಿಲನ್ನು ತೆರೆದ ಮಾತೃ ಸಂಸ್ಥೆಯಾಗಿದೆ, ಅದೆಷ್ಟೋ ಮಕ್ಕಳ ಹೆತ್ತವರು  ಹರಸಿದ ಈ ಸಂಸ್ಥೆ , ಸಾವಿರಾರು ಸಂಕೆಯ ಸದಸ್ಯ ಬಲವನ್ನ ಹೊಂದಿದ್ದು, ಸುಮಾರು 500ಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಸಕ್ರಿಯ ಸದಸ್ಯರನ್ನು ಹೊಂದಿರುವುದು ವಿಶೇಷವೇ ಸರಿ. 

ಇತ್ತೀಚಿನ ಸುದ್ದಿ

ಜಾಹೀರಾತು