12:23 PM Wednesday23 - April 2025
ಬ್ರೇಕಿಂಗ್ ನ್ಯೂಸ್
Terror Attack | ಕಾಶ್ಮೀರ: ಭಾರತೀಯ ಸೇನಾ ಕಾರ್ಯಾಚರಣೆಗೆ ಹತರಾದ ಉಗ್ರಗಾಮಿಗಳು: ಕಣಿವೆಯಲ್ಲಿ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳ ವಿರುದ್ಧ ಸೇನಾ ಕಾರ್ಯಾಚರಣೆ: ಇಬ್ಬರು… ಕಾಶ್ಮೀರದಲ್ಲಿ ಕನ್ನಡಿಗರ ಮೇಲೆ ಉಗ್ರರ ದಾಳಿಗೆ ಶಿವಮೊಗ್ಗದ ಉದ್ಯಮಿ ಸಾವು: ಮುಖ್ಯಮಂತ್ರಿ ತುರ್ತುಸಭೆ;… Terrorist Attack | ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಭೀಕರ ನರಮೇಧಕ್ಕೆ ಸಾವಿನ… Mandya | ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿ ಸರಿಯಿಲ್ಲವೆನ್ನಲು ಬಿಜೆಪಿಗೆ ನೈತಿಕ… ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ: ಶಿವಮೊಗ್ಗದ ಉದ್ಯಮಿ ಸಹಿತ 5ಕ್ಕೂ ಹೆಚ್ಚು… Karnataka BJP | ಹಾವೇರಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ಸರಕಾರದ ವಿರುದ್ಧ… DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ…

ಇತ್ತೀಚಿನ ಸುದ್ದಿ

ಹಗರಿಬೊಮ್ಮನಹಳ್ಳಿ: ಮಕ್ಕಳಲ್ಲಿ ಭರ್ಜರಿ ಭರವಸೆ ಮೂಡಿಸುತ್ತಿರುವ ಕಲಾ ಭಾರತಿ ನಾಟ್ಯ ಶಾಲೆ

25/06/2022, 19:30

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ

info.reporterkarnataka@gmail.com

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ಸಾಂಸ್ಕ್ರತಿಕ ಹಿನ್ನಲೆಯನ್ನ ಹೊದಿರುವ ಯುವ ಪೀಳಿಗೆಗೆ ಪಟ್ಟಣದಲ್ಲಿರುವ  ಕಲಾಭಾರತಿ ಭರತ ನಾಟ್ಯ ಕಲಾ ಶಾಲೆ, ಬಾಳಿನ ಭರವಸೆಯನ್ನು ಹಾಗೂ ಉತ್ತಮ ಭವಿಷ್ಯವನ್ನು ಕಲ್ಪಿಸುತ್ತಿದೆ. 

ವೃತ್ತಿಯಲ್ಲಿ ವಕೀಲರಾಗಿರುವ ವಾಸಂತಿ ಸಾಲುಮನಿ ಅವರು ನಾಟ್ಯಕಲ‍ಾ ಶಾಲೆಯ ಸ್ಥಾಪಕರಾಗಿದ್ದಾರೆ, ಹಾಗೂ  ಅದ್ಭುತ ಕಲಾರಾಧಕರೂ ಆಗಿದ್ದಾರೆ ವಾಸಂತಿ ಸಾಲುಮನಿ. ಅವರು ಮಕ್ಕಳಿಗೆ ನಾಟ್ಯದೊಂದಿಗೆ ಗುರುಕುಲ ಶಿಕ್ಷಣದ ಮಾದರಿಯಲ್ಲಿ, ಸಂಸ್ಕಾರ ಧಾರ್ಮಿಕ ಶ್ರದ್ದೆ ಹಾಗೂ ಉತ್ಕೃಷ್ಟ ಜೀವನದ ರಹದಾರಿಯನ್ನು ಯುವ ಪೀಳಿಗೆಗೆ ತೋರುತ್ತಿದ್ದಾರೆ. ತಾವು ಕಲಿತ ಭರತ ನಾಟ್ಯ ಕಲೆಯನ್ನು ಯುವ ಪೀಳಿಗೆಗೆ ಕಲಿಸುವ ಮೂಲಕ, ಆಧುನಿಕ ಜಗತ್ತಿನಿಂದ ತಾತ್ಸಾರಕ್ಕೀಡಾಗಿರುವ ಭರತ ನಾಟ್ಯ ಕಲೆಯನ್ನು ಯುವಪೀಳಿಗೆಯ ಮೂಲಕ ಚಿಗುರೊಡೆಸುವ  ಮಹಾದಾಸೆ ಹೊಂದಿದ್ದಾರೆ. ಅದಕ್ಕಾಗಿ ಹತ್ತು ಹಲವು ವರ್ಷಗಳಿಂದ ಕಲಾ ಸೇವೆಗೆಂದೇ ತಮ್ಮನ್ನ ಸ್ಥಾಪಿತವಾಗಿರುವ ತಮ್ಮ ಕಲಾ ಶಾಲೆಯ ಮೂಲಕ, ಈ ವರೆಗೆ ನೂರಾರು ಪ್ರತಿಭಾನ್ವಿತ ನಾಟ್ಯ ಕಲಾವಿದರನ್ನು ಸಮಾಜಕ್ಕೆ ಅರ್ಪಿಸಿದ್ದಾರೆ. ಅವರು ಅಸಂಖ್ಯಾತ ಶಿಷ್ಯ ವೃಂಧವನ್ನು ಹೊಂದಿದ್ದಾರೆ. ವಾಸಂತಿಯವರು ಮಾತನಾಡಿ ತಮ್ಮ ಕಲಾ ಸೇವೆಯ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ, ವಿದ್ಯಾರ್ಥಿಗಳಿಗೆ  ನಾನು ಕಲಿತಿರುವ  ಭರತನಾಟ್ಯದ ಕಲೆಯನ್ನು, ಮಕ್ಕಳಿಗೆ ಹಾಗೂ ಆಸಕ್ತ ಯುವ ಪೀಳಿಗೆಗೆ ಕಲಿಸುವ ಮೂಲಕ ಕಲೆಗೆ ಪುನಶ್ಚೇತನ ಮೂಡಿಸುವ ಪ್ರಯತ್ನ ನಡೆಸಿರುವುದಾಗಿ ತಿಳಿಸಿದರು. ಜೊತರಗೆ ಗುರುಕುಲ ಮಾಧರಿಯಲ್ಲಿ ಸಂಸ್ಕಾರ ಸಂಸ್ಕ್ರತಿ ಧಾರ್ಮಿಕ ಶ್ರದ್ಧೆ, ನಾಡ ಹಾಗೂ ದೇಶ ಪ್ರೇಮ, ಮಾನಸಿಕ ಹಾಗೂ ಧೈಹಿಕ ವ್ಯಾಯಾಮಗಳನ್ನು ಕಲಿಸಲಾಗುತ್ತದೆ.ಯುವ ಪೀಳಿಗೆಗೆ ಕಲೆಯೊಂದಿಗೆ ಸಾಮಾಜಿಕ ಕಾಳಜಿ ಮೂಡಿಸುವ ಪ್ರಯತ್ನ ನಡೆದಿದ್ದು, ಭರತ ನಾಟ್ಯ ಕಲೆಯೊಂದಿಗೆ ಪ್ರತಿಯೊಬ್ಬರಲ್ಲಿ ಮಾನವೀಯ ಮೌಲ್ಯಗಳನ್ನು, ಇಮ್ಮಡಿಗೊಳಿಸುವ ಸದುದ್ದೇಶ ದಿಂದ ಶಾಲೆಯನ್ನು ಪ್ರಾರಂಭಿಸಿಲಾಗಿದೆ. ಈ ನಿಟ್ಟಿನಲ್ಲಿ ಬಹುತೇಕ ಯಶಸ್ಸು ಕಂಡಿದ್ದು ಅದಕ್ಕೆ ಸಾಕಷ್ಟು  ನಿದರ್ಶನಗಳಿವೆ, ಹತ್ತಾರು ಕಡೆ ಕಾರ್ಯಕ್ರಮಗಳನ್ನು  ಮಾಡಲಾಗಿದೆ ಮತ್ತು ಕೆಲವೆಡೆಗಳಿಂದ ಕಾರ್ಯಕ್ರಮಕ್ಕೆ ಬೇಡಿಕೆಗಳು ಬಂದಿವೆ ಎಂದು ವಾಸಂತಿ ತಿಳಿಸಿದ್ದಾರೆ. ತಮ್ಮ ಈ ಯಶಸ್ವಿಗೆ ಅವರ ತಂದೆ ತಾಯಿ  ಮತ್ತು ಕುಟುಂಬದವರ ಸಂಪೂರ್ಣ ಸಹಕಾರ ಇದ್ದೇ ಇದೆ ಎನ್ನುತ್ತಾರೆ, ಭರತ ನಾಟ್ಯ ಕಲಾ ಶಿಕ್ಷಕಿ ವಾಸಂತಿ ರವರು.ತಮ್ಮ ಈ ಕಲಾ ಸೇವೆಗೆ ನೆರೆ ಹೊರೆಯವರು ಹಾಗೂ ಸ್ನೇಹಿತರು, ಪ್ರೋತ್ಸಾಹ ನೀಡಿ ಬೆನ್ನಿಗೆ ನಿಂತುಕೊಂಡಿದ್ದಾರೆಂದು ಅದಕ್ಕಾಗಿ ಅವರೆಲ್ಲರಿಗೂ ಚಿರ ಋಣಿ ಎನ್ನುತ್ತಾರೆ ಕಲಾ ಶಿಕ್ಷಕಿ ವಾಸಂತಿ. ಭರತನಾಟ್ಯ ಶಿಷ್ಯಂದಿರ ಪೋಷಕರು ಮಾತನಾಡಿ, ಮನತುಂಬಿ ವಾಸಂತಿ ಸಾಲುಮನಿಯವರು ಅಭಿನಂದಿಸಿ ಹಾರೈಸಿದ್ದಾರೆ. ನಮ್ಮ ಮಕ್ಕಳನ್ನು ಅವರ ಮಕ್ಕಳಂತೆ ಕಾಣುತ್ತಾರೆ, ವಿದ್ಯಾರ್ಥಿಗಳು ಪಠ್ಯ ಶಿಕ್ಷಣ ದೊಂದಿಗೆ, ಬೌದ್ಧಿಕ ಶಕ್ತಿ ಹೆಚ್ಚಾಗಿರುವುದು ಕಾಣುತ್ತಿದ್ದೇವೆ. ಪಾಶ್ವಿಮಾತ್ಯ ಸಂಸ್ಕೃತಿಗೆ ಯುವ ಪೀಳಿಗೆ ಹೋಗಿದ್ದು, ಪ್ರಸ್ತುತ ದಿನಮಾನದಲ್ಲಿ ಅವರಿಗೆ ಗುರುಕುಲ ಮಾಧರಿ ಶಿಕ್ಷಣ ಅತ್ಯಗತ್ಯವಾಗಿದೆ. ಭರತನಾಟ್ಯ ಕಲೆ ಯಿಂದಾಗಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುತ್ತಿದ್ದು, ಭರತ ನಾಟ್ಯ ತರಬೇತಿಯಿಂದಾಗಿ ಮಕ್ಕಳು ವಿದ್ಯಾಭ್ಯಾಸದಲ್ಲಿಯೂ ಅಭಿವೃದ್ಧಿ ಸಾಧಿಸುತ್ತಿದ್ದಾರೆ. ಅವರಲ್ಲಿ ಧೈಹಿಕ ಹಾಗೂ ಮಾನಸಿಕ ಆರೋಗ್ಯ ಸಾಕಷ್ಟು ವೃದ್ಧಿಯಾಗಿದೆ. ಮಕ್ಕಳು ಭವಿಷ್ಯದಲ್ಲಿ ಉತ್ತಮ ಹಾಗೂ ಸದೃಢ    ಯುವ ಪೀಳಿಗೆಯಾಗಿ ಹೊರ ಹೊಮ್ಮಲಿದ್ದಾರೆ, ಇದು ಎಲ್ಲಾ ಮಕ್ಕಳ ಮತ್ತು  ಎಲ್ಲಾ ವಯಸ್ಕರಿಗೂ ಪ್ರೇರಣೆ ಯಾಗಿದೆ ಎಂದು ಮಕ್ಕಳ ಪೋಷಕರು ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ. 

 *ಕಲಾಭಾರತಿ ನಾಟ್ಯ ಶಾಲೆ ಪರಿಚಯ* ನಾಟ್ಯ ಶಾಲೆಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 4 ಗಂಟೆಯಿಂದ ಭರತ ನಾಟ್ಯವನ್ನು ಹೇಳಿಕೊಡಲಾಗುತ್ತದೆ, ಮಕ್ಕಳಿಗೆ  ಭರತ ನಾಟ್ಯದೊಂದಿಗೆ, ವ್ಯಾಯಾಮ, ಜಾನಪದ ನೃತ್ಯಗಳನ್ನು ಹೇಳಿಕೊಡಲಾಗುವುದು ಎಂದು ಶಿಕ್ಷಕಿ ವಾಸಂತಿ ತಿಳಿಸಿದ್ದಾರೆ.  4 ವರ್ಷದ ಮಕ್ಕಳಿಂದ 58 ವರ್ಷದ ವರೆಗಿನ ಎಲ್ಲಾ ವಯಸ್ಸಿನವರು ತರಗತಿಗೆ ಬರುತ್ತಿದ್ದಾರೆ. ವಯಸ್ಸಿನ ಮಿತಿಯಿಲ್ಲ ಆಸಕ್ತಿಯೇ ಮುಖ್ಯ ಮಾನದಂಡವಾಗಿದೆ, ಯಾವದೇ ವಯೋಮಾನದವರಾದರೂ ಭರತ ನಾಟ್ಯ ನೃತ್ಯ ಕಲಿಯಬಹುದಾಗಿದೆ ಎಂದಿದ್ದಾರೆ.  *ಸಂಪರ್ಕಿಸಿ*-


ಹೆಚ್ಚಿನ ಮಾಹಿತಿಗಾಗಿ ವಾಸಂತಿ ಸಾಲುಮನಿ ಅವರ ಮೊಬೈಲ್ ನಂ – 8971413698/ 6363381265 ಸಂಪರ್ಕಿಸಬಹುದು. ಅಥವಾ ಹಳೇ ಹಗರಿಬೊಮ್ಮನಹಳ್ಳಿಯ ಶ್ರೀ ಬನಶಂಕರಿ ದೇವಸ್ಥಾನದ ರಸ್ತೆ, ಸಮುದಾಯ ಭವನ ಹತ್ತಿರದಲ್ಲಿರುವ “ಕಲಾ ಭಾರತಿ  ಭರತ ನಾಟ್ಯ ಕಲಾ ಶಾಲೆ” ಯನ್ನು ಸಂಪರ್ಕಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು