2:14 PM Wednesday14 - May 2025
ಬ್ರೇಕಿಂಗ್ ನ್ಯೂಸ್
Bangalore | ಮೇ 15ರಂದು ಬಿಜೆಪಿಯಿಂದ ತಿರಂಗಾ ಯಾತ್ರೆ, ಪಕ್ಷದ ಚಿಹ್ನೆ ಪ್ರದರ್ಶನವಿಲ್ಲ Bangalore | ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದ ಅನುದಾನ ಬಿಡುಗಡೆ: ಮಹತ್ವದ ಸಭೆ Bangalore | ಅಕ್ಟೋಬರ್ ನಲ್ಲಿ ಅಂಗನವಾಡಿ ಸುವರ್ಣ ಮಹೋತ್ಸವ ಆಚರಣೆ: ಸಚಿವೆ ಲಕ್ಷ್ಮೀ… ಮೋಸ್ಟ್‌ ವಾಂಟೆಡ್‌ ಉಗ್ರರನ್ನು ನಿರ್ನಾಮ ಮಾಡಿದ್ದೇವೆ: ಹುಬ್ಬಳ್ಳಿ ಎಬಿವಿಪಿ ಕಾರ್ಯಕ್ರಮದಲ್ಲಿ ಪ್ರಹ್ಲಾದ್ ಜೋಶಿ Chitradurga | ಕಂದಾಯ ಗ್ರಾಮ ರಚನೆ ಪ್ರಕ್ರಿಯೆ ಪೂರ್ಣಗೊಳಿಸಲು ಜೂನ್ 30ರ ಗಡುವು ಎಲ್ಲರನ್ನೂ ನಗಿಸುತ್ತಿದ್ದ ಆತ ಇಂದು ಎಲ್ಲರೂ ಅಳುವಂತೆ ಮಾಡಿದ: ನಗು ನಗುತಲೇ ಹೊರಟು… Bangalore | ಕ್ಯಾನ್ಸರ್ ತಡೆಗೆ ಪರಿಣಾಮಕಾರಿ ಕಾರ್ಯಕ್ರಮ ಅವಶ್ಯ: ಮಾಜಿ ಡಿಸಿಎಂ ಡಾ.… ಶ್ರೀನಗರದಲ್ಲಿ ಸಿಲುಕಿದ್ದ ರಾಜ್ಯದ 13 ಕೃಷಿ ವಿದ್ಯಾರ್ಥಿಗಳು ಸುರಕ್ಷಿತ ವಾಪಸ್: ಪ್ರಧಾನಿ ಸೂಚನೆ… Bangalore | ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ಹಸ್ತಾಂತರ: ರಾಜ್ಯಪಾಲರ… Vatican City | ನೂತನ ಪೋಪ್‌ ಆಗಿ ಅಮೆರಿಕದ ರಾಬರ್ಟ್ ಫ್ರಾನ್ಸಿಸ್‌ ಪ್ರಿವೊಸ್ಟ್‌…

ಇತ್ತೀಚಿನ ಸುದ್ದಿ

ಸರ್ವ ಋತುಗಳಲ್ಲಿ ಸೋರುವ ಮ್ಯಾನ್ ಹೋಲ್!: ವಿಶೇಷವೆಂದರೆ ಇದು ಪಾಲಿಕೆ ಕಚೇರಿಗೆ ಕೂಗಳತೆ ದೂರದಲ್ಲಿದೆ!!

02/06/2022, 12:32

ಚಿತ್ರಗಳು : ಗಣೇಶ್ ಅದ್ಯಪಾಡಿ
ಮಂಗಳೂರು(reporterkarnataka.com):

ಮಳೆ ಬಂದಾಗಲೆಲ್ಲ ಚಿಮ್ಮುವ ಮ್ಯಾನ್ ಹೋಲ್ ಗಳನ್ನು ನಾವು ಕಂಡಿದ್ದೇವೆ. ಆದರೆ ಮಳೆ ಮತ್ತು ಬಿಸಿಲು ಎರಡೂ ಸಂದರ್ಭದಲ್ಲಿಯೂ ಸೋರುವ ಮ್ಯಾನ್ ಹೋಲ್ ಬಹಳ ಅಪರೂಪ. ಅಂತಹ ಅಪರೂಪದಲ್ಲಿ ಅಪರೂಪವಾದ ಮ್ಯಾನ್ ಹೋಲ್ ವೊಂದ ನಗರದ ಕೆಎಸ್ಸಾರ್ಟಿಸಿ ಬಳಿಯ ಭಾರತ್ ಮಾಲ್ ಎದುರುಗಡೆ ಇದೆ.

ಇದು ವರ್ಷದ ಎಲ್ಲ ಋತುಗಳಲ್ಲಿಯೂ ಸೋರುತ್ತಲೇ ಇರುತ್ತದೆ. ಇದು ಹೊಸ ಕೇಸ್ ಏನೂ ಅಲ್ಪ. ಹಲವು ವರ್ಷಗಳಿಂದ ವಾಸಿಯಾಗದ ರೋಗ. ಈ ಹಿಂದೆ ಹೀಗೆ ಸೋರುತ್ತಾ ರಸ್ತೆಯಲ್ಲೇ ಕೊಳದ ತರಹ ನಿರ್ಮಾಣವಾದಾಗ ಅಂದಿನ ಮೇಯರ್ ಕವಿತಾ ಸನಿಲ್ ಅವರು ದುರಸ್ತಿ ಮಾಡಿಸಿದ್ದರು. ಸ್ವಲ್ಪ ಸಮಯ ಯಾವುದೇ ಸಮಸ್ಯೆ ಇರಲಿಲ್ಲ. ಕೆಲವು ತಿಂಗಳ ನಂತರ ಇದ್ದಕ್ಕಿದ್ದಂತೆ ಮತ್ತೆ ಸೋರಲು ಆರಂಭವಾಯಿತು. ಮಂಗಳೂರು ಮಹಾನಗರಪಾಲಿಕೆಯಲ್ಲಿ ಸಾಕಷ್ಟು ಎಂಜಿನಿಯರ್ ಗಳಿದ್ದಾರೆ. ಪಾಲಿಕೆಗೆ ಎಕ್ಸ್‌ಪರ್ಟ್ ಸಲಹೆಗಾರರಿದ್ದಾರೆ. ಆದರೆ ಇವೆಲ್ಲವೂ ವ್ಯರ್ಥ. ಪೈಪ್ ಎಲ್ಲಿಗೆ ಜೋಡಿಸಬೇಕು, ನೀರು ಹರಿಯಲು ಎಲ್ಲಿಗೆ ಬಿಡಬೇಕು ಎನ್ನುವ ಪ್ರಾಥಮಿಕ ನಾಲೇಜ್ ಇವರಿಗಿಲ್ಲವೇ ಎಂದು ಜನರು ಪ್ರಶ್ನಿಸುತ್ತಾರೆ.

ಮಂಗಳೂರು ಈಗಾಗಲೇ ಹಲವು ವರ್ಷಗಳಿಂದ ಮಲೇರಿಯಾದಿಂದ ತತ್ತರಿಸಿರುವುದು ಇಡೀ ಲೋಕಕ್ಕೆ ಗೊತ್ತಿದೆ. ಅದರ ಜತೆಗೆ ಡೆಂಗ್ಯೂ ಹಾವಳಿಯೂ ಇದೆ. ಇಷ್ಟೆಲ್ಲ ರಿಸ್ಕ್ ಗಳ ನಡುವೆ ಕಡಲನಗರಿಯ ಜನತೆ ಬದುಕು ಕಟ್ಟಿಕೊಂಡಿದ್ದಾರೆ ಎಂದು ಗೊತ್ತಿದ್ದೂ ಪಾಲಿಕೆ ಮಾತ್ರ ಕ್ಯಾರೇ ಮಾಡುತ್ತಿಲ್ಲ. ವಿಶೇಷವೆಂದರೆ ಮಹಾನಗರಪಾಲಿಕೆ ಕಚೇರಿ ಇಲ್ಲಿಂದ ಕೂಗಳತೆ ದೂರದಲ್ಲಿದೆ. ಭಾರತ್ ಮಾಲ್ ಎದುರು ನಿಂತರೆ ಪಾಲಿಕೆ ಕಟ್ಟಡದಲ್ಲಿರುವ ಗಡಿಯಾರ ಸಮಯವನ್ನು ನಿಖರವಾಗಿ ಹೇಳಬಹುದಾಗಿದೆ. ಮೇಯರ್ ಹಾಗೂ ಪಾಲಿಕೆ ಕಮಿಷನರ್ ಈ ದಾರಿಯಾಗಿ ದಿನಕ್ಕೆ ನಾಲ್ಕಾರು ಬಾರಿ ಸರಕಾರಿ ಕಾರಿನಲ್ಲಿ ಗ್ಲಾಸ್ ಬಂದ್ ಮಾಡಿ ಓಡಾಡುತ್ತಾರೆ. ಕೆಸರು ಎರಚುವುದಿಲ್ಲ, ವಾಸನೆ ಬರುವುದಿಲ್ಲ.!

ಇತ್ತೀಚಿನ ಸುದ್ದಿ

ಜಾಹೀರಾತು