5:55 PM Monday14 - July 2025
ಬ್ರೇಕಿಂಗ್ ನ್ಯೂಸ್
ಶಕ್ತಿ ಯೋಜನೆ: 500 ಕೋಟಿ ಮಹಿಳೆಯರಿಗೆ ತಲುಪಿದ ಸಾಂಕೇತಿಕವಾಗಿ ಟಿಕೆಟ್ ವಿತರಿಸಿದ ಮುಖ್ಯಮಂತ್ರಿ Kodagu | ದಕ್ಷಿಣ ಕೊಡಗಿನಲ್ಲಿ ಹಸುಗಳ ಮೇಲೆ ವ್ಯಾಘ್ರ ದಾಳಿ: ಒಂದು ಬಲಿ;… ಶರಾವತಿ ನದಿಗೆ ಹೊಲೆ ಬಾಗಿಲಿನಲ್ಲಿ ನಿರ್ಮಿಸಿದ ನೂತನ ಸೇತುವೆ: ಕೇಂದ್ರ ಭೂ ಸಾರಿಗೆ… Kodagu | ಕಾಡಾನೆಗಳ ಕಾಡಿಗೆ ಅಟ್ಟುವ ಕಾರ್ಯಾಚರಣೆ ಯಶಸ್ವಿ: 18 ಸಲಗಗಳು ಮರಳಿ… ಬೀದಿನಾಯಿಗಳಿಗೆ ಬಿರಿಯಾನಿ ನೀಡುವ ಬಿಬಿಎಂಪಿಯ ಯೋಜನೆಯಲ್ಲಿ ಲೂಟಿ ಮಾಡುವ ಉದ್ದೇಶ: ಪ್ರತಿಪಕ್ಷ ನಾಯಕ… ಬೆಂಗಳೂರು ಕಾಲ್ತುಳಿತ ಪ್ರಕರಣ: ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಸ್ಟೀಸ್ ಜಾನ್ ಮೈಕೆಲ್ ಡಿ.ಕುನ್ನಾ ವರದಿ… ಚಿಕ್ಕಮಗಳೂರು- ತಿರುಪತಿ ರೈಲಿಗೆ ಚಾಲನೆ: ಕಾಫಿನಾಡಿಗರ ದಶಕಗಳ ಕನಸು ಕೊನೆಗೂ ನನಸು Kodagu | ವಿರಾಜಪೇಟೆ ಕ್ಷೇತ್ರದ 1600 ಆದಿವಾಸಿಗಳಿಗೆ ಜಮೀನು ಹಕ್ಕುಪತ್ರ ವಿತರಣೆಗೆ ಅಸ್ತು:… ಹೆಚ್ಚುತ್ತಿರುವ ಕಾಡಾನೆಗಳ ದಾಂಧಲೆ: ವಿರಾಜಪೇಟೆ ತಿತಿಮತಿ ವ್ಯಾಪ್ತಿಯಲ್ಲಿ ಬಿರುಸುಗೊಂಡ ಕಾಡಿಗಟ್ಟುವ ಕಾರ್ಯಾಚರಣೆ Bangaluru | ನಾಗರಬಾವಿಯ ವಿಟಿಯು ಹಬ್ ಆ್ಯಂಡ್ ಸ್ಪೋಕ್ ಕೇಂದ್ರ ಉದ್ಘಾಟನೆ: ಕೇಂದ್ರ…

ಇತ್ತೀಚಿನ ಸುದ್ದಿ

3 ವರ್ಷದ ಬಳಿಕ ಮತ್ತೆ ಹಾರಾಡಲಿದೆ ಜೆಟ್  ಏರ್‌ವೇಸ್‌: ಇದೊಂದು ಭಾವನಾತ್ಮಕ ಕ್ಷಣ ಎಂದ ಸಿಇಒ

09/05/2022, 20:51

ಹೊಸದಿಲ್ಲಿ(reporterkarnataka.com):ಆರ್ಥಿಕ ಬಿಕ್ಕಟ್ಟಿನಿಂದಾಗಿ ಸ್ಥಗಿತಗೊಂಡಿದ್ದ ದೇಶೀಯ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್‌ಗೆ ಗೃಹ ಸಚಿವಾಲಯ ಲೈನ್ ಕ್ಲಿಯರ್ ಮಾಡಿದೆ. ವಾಣಿಜ್ಯ ವಿಮಾನ ಸೇವೆಗಳನ್ನು ನಿರ್ವಹಿಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರಿಂದ ಅನುಮತಿ ದೊರೆತಿದೆ. ಏಪ್ರಿಲ್ 17, 2019 ರಂದು ಜೆಟ್ ಏರ್‌ವೇಸ್‌ನ ಹಾರಾಟ ಕೊನೆಗೊಂಡಿತ್ತು. ಮೂರು ವರ್ಷಗಳ ನಂತರ ಜೆಟ್ ಏರ್ವೇಸ್ ತನ್ನ ರೆಕ್ಕೆಗಳನ್ನು ಬಿಚ್ಚಿ ಹಾರಾಡತೊಡಗಿದೆ. ಮೇ 5ರಂದು ಜೆಟ್ ಏರ್‌ವೇಸ್ ಹೈದರಾಬಾದ್‌ನಿಂದ ದೆಹಲಿಗೆ ಪರೀಕ್ಷಾರ್ಥ ಹಾರಾಟವನ್ನು ನಡೆಸಿತು.

ಶೀಘ್ರದಲ್ಲೇ ವಾಣಿಜ್ಯ ಸೇವೆಗಳನ್ನು ಪ್ರಾರಂಭಿಸುವುದಾಗಿ ಕಂಪನಿಯ ಸಿಇಒ ಸಂಜೀವ್ ಕಪೂರ್ ಘೋಷಿಸಿದ್ದಾರೆ. ಜೆಟ್ ಏರ್‌ವೇಸ್ ಕುಟುಂಬಕ್ಕೆ ಇದೊಂದು ಭಾವನಾತ್ಮಕ ಕ್ಷಣವಾಗಿದೆ ಎಂದು ವರ್ಣಿಸಿದ್ದಾರೆ. ಮೂರು ವರ್ಷಗಳ ನಂತರ ಜೆಟ್ ಏರ್‌ವೇಸ್‌ನ 2.0 ತನ್ನ ಸೇವೆಗಳನ್ನು ಪ್ರಾರಂಭಿಸಿದ್ದಕ್ಕಾಗಿ ಸಂತೋಷವಾಗಿದೆ. ಆಕಾಶದಲ್ಲಿ ಜೆಟ್ ಅನ್ನು ಮರಳಿ ಪಡೆಯಲು ಶ್ರಮಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

2019ರಲ್ಲಿ ಜೆಟ್ ಏರ್‌ವೇಸ್ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿತ್ತು. ಹಣಕಾಸಿನ ನೆರವಿನ ಕೊರತೆಯಿಂದಾಗಿ ಜೆಟ್ ಏರ್‌ವೇಸ್ ಅನ್ನು ಮುಚ್ಚುವ ಪ್ರಸ್ತಾಪವಾಯಿತು. ಕೊನೆಗೆ ಮ್ಯಾನೇಜ್ ಮೆಂಟ್ ಕೂಡ ಕೈಕೊಟ್ಟ ಪರಿಣಾಮವಾಗಿ ಅನಿವಾರ್ಯ ಕಾರಣಗಳಿಂದ ಮುಚ್ಚಿದೆವು. ಏಪ್ರಿಲ್ 2019 ರಲ್ಲಿ ಕಂಪನಿ ಮುಚ್ಚುವ ಮೊದಲು 3,500 ರೂ. ಕೋಟಿ ಸಾಲವನ್ನು ಹೊತ್ತುಕೊಳ್ಳಬೇಕಾಯಿತು. ಪ್ರಯಾಣಿಕರ ಟಿಕೆಟ್ ರದ್ದುಗೊಂಡಿದ್ದರಿಂದ ಇನ್ನೂ 3,500 ಕೋಟಿ ರೂ. ಹೆಚ್ಚುವರಿ ಸಾಲದ ಜೊತೆಗೆ ಇತರೆ ಸಾಲ ಸೇರಿ ಒಟ್ಟು 8,500 ಕೋಟಿ ರೂ. ಹೊಡೆತ ಬಿತ್ತು. ಪರಿಣಾಮವಾಗಿ, ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಜೆಟ್ ಏರ್‌ವೇಸ್‌ನ 16,500 ಉದ್ಯೋಗಿಗಳು ರಸ್ತೆಗೆ ಬಿದ್ದರು. ಇದೀಗ ಜೆಟ್‌ ಏರ್‌ವೇಸ್‌ ಪುನಃ ಪ್ರಾರಂಭವಾಗಿರುವುದು ಕಂಪನಿಗೆ ರೆಕ್ಕೆ ಬಂದಂತಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು