2:25 PM Saturday5 - July 2025
ಬ್ರೇಕಿಂಗ್ ನ್ಯೂಸ್
ಕಾಂಗ್ರೆಸ್ ಗೆ ಅಧಿಕಾರ, ಆರೆಸ್ಸೆಸ್‌ ಬ್ಯಾನ್‌ ಹಗಲುಗನಸು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಚಿಕ್ಕಮಗಳೂರು: ಶಾಲೆಗೆ ರಜೆ; ಕೆರೆಯಲ್ಲಿ ಈಜಲು ಹೋದ ಬಾಲಕ ದಾರುಣ ಸಾವು ನಾಪತ್ತೆಯಾಗಿದ್ದ ಕೊಡಗಿನ ಫಾರೆಸ್ಟ್ ಗಾರ್ಡ್ ಶವವಾಗಿ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ ಭೂ ಸ್ವಾಧೀನ; ಕಾನೂನು ತೊಡಕು ನಿವಾರಿಸಿ ರೈತರ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ Virajpete | ಎರಡು ಮಕ್ಕಳ ತಾಯಿಯೊಂದಿಗೆ ಲಿವಿಂಗ್ ರಿಲೇಶನ್ ಶಿಪ್: ಯುವಕ ಆತ್ಮಹತ್ಯೆಗೆ… ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ: ಬೀದರ್ ನಲ್ಲಿ ಸಚಿವೆ ಲಕ್ಷ್ಮೀ… ಕಡೂರು: 6 ದಿನಗಳ ಹುಡುಕಾಟದ ನಂತರವೂ ಸಿಗದ ಫಾರೆಸ್ಟ್ ಗಾರ್ಡ್ ಶರತ್‌ ಸುಳಿವು ಸೋರುತ್ತಿದೆ ಸೂರು; ಕೊಠಡಿ ತುಂಬಾ ನೀರು: ರಾಷ್ಟ್ರಕವಿ ಕುವೆಂಪು ಓದಿದೆ ಶಾಲೆಯ ಕೇಳುವವರೇ… ಮಲೆನಾಡಲ್ಲಿ ಮುಂದುವರಿದ ಮಳೆ: ಶೃಂಗೇರಿಯ ಗಾಂಧಿ ಮೈದಾನದ ರಸ್ತೆಗೆ ನುಗ್ಗಿ ನೆರೆ ನೀರು;… ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ

ಇತ್ತೀಚಿನ ಸುದ್ದಿ

ತೈಲ ಬೆಲೆಯೇರಿಕೆ: ಕೇಂದ್ರ ಸರಕಾರ ವಿರುದ್ಧ  ಈಚನಾಳ ಗ್ರಾಮ ಪಂಚಾಯತ್ ಮುಂದೆ ಕಾಂಗ್ರೆಸ್ ಪ್ರತಿಭಟನೆ 

14/06/2021, 14:46

ಅಮರೇಶ್  ಲಿಂಗಸುಗೂರು ರಾಯಚೂರು

info.reporterkarnataka@gmail.com

ಕೇಂದ್ರ ಸರಕಾರದ ತೈಲ ಬೆಲೆಯೇರಿಕೆ ವಿರುದ್ಧ ಕಾಂಗ್ರೆಸ್ ವತಿಯಿಂದ ಈಚನಾಳ ಗ್ರಾಮದ ಗ್ರಾಮ ಪಂಚಾಯತ್ ಮುಂದೆ ‘100 ನಾಟೌಟ್’ ಪ್ರತಿಭಟನೆ ಹಿರಿಯ ಕಾಂಗ್ರೆಸ್ ಮುಖಂಡ ಬಸನಗೌಡ ಮೇಟಿ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಮುಖಂಡ ಆನಂದ ಕುಂಬಾರ ಮಾತನಾಡಿ,  ಕೊವಿಡ್-19 ಮಹಾಮಾರಿಯ ಹಿಡಿತಕ್ಕೆ ಸಿಕ್ಕಿ ಹೈರಾಣವಾಗಿರುವ ಜನಸಾಮಾನ್ಯರ ದುಸ್ಥಿತಿಯ ನಡುವೆಯೇ ಸಂವೇದನಾರಹಿತ ಕೇಂದ್ರ ಸರಕಾರದ ನೀತಿಗಳಿಂದ ಪೆಟ್ರೋಲ್ ಮತ್ತು ಡೀಸಿಲ್ ಬೆಲೆಗಳು ದಿನೇ ದಿನೇ ಏರುತ್ತಿದೆ. ಬಹಳ ಕಡೆ ಲೀಟರ್ ಒಂದರ ಬೆಲೆ ನೂರರ ಗಡಿ ದಾಟಿದೆ. ಇನ್ನುಳಿದ ಕಡೆ ನೂರರ ಹೊಸ್ತಿಲಲ್ಲಿದೆ. ಈ ಬೆಲೆ ಏರಿಕೆಯಿಂದಾಗಿ ಮನೆಬಳಕೆ ಹಾಗೂ ದೈನಂದಿನ ಜೀವನಾವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಕಳೆದ 13 ತಿಂಗಳುಗಳಲ್ಲಿ ಪೆಟ್ರೋಕ್ ಮತ್ತು ಡೀಸೆಲ್ ಬೆಲೆಗಳು ಲೀಟರ್‌ ತಲಾ ರೂಪಾಯಿ 25.72 ಮತ್ತು ರೂಪಾಯಿ 23.93 ರಷ್ಟು ಏರಿಕೆಯಾಗಿವೆ. ಕಳೆದ 5 ತಿಂಗಳುಗಳಲ್ಲಿ 43 ಬಾರಿ ದರಗಳನ್ನು ಏರಿಕೆಯಾಗಿದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಮುಖಂಡರು ಪಿರಸಾಬ ಪಂಚಮ್, ಆದಪ್ಪ ಮೇಟಿ, ದೊಡ್ಡಪ್ಪ ಚಿಗರಿ, ಯಮನಪ್ಪ ಕಟ್ಟೀಮನಿ,  ಸಣ್ಣಗದ್ದೆಪ್ಪ ಚಿಗರಿ,ಮಲ್ಲರಡ್ಡೆಪ್ಪ ದೊಡ್ಡಮನಿ, ಮರಿಯಪ್ಪ ಕಟ್ಟಿಮನಿ, ಹನುಮಂತ ಕುರಿ, ಉಮೇಶ ಚವ್ಹಾಣ, ಖೇಮಣ್ಣ ರಾಠೋಡ, ಗೋವಿಂದ ಪವಾರ್, ಅಮರೇಶ ಮೇಟಿ, ದೇವರೇಡ್ಡಿ ಮೇಟಿ, ಗದ್ದೆಪ್ಪ ಕಟ್ಟಿಮನಿ, ಗದ್ದೆಪ್ಪ ಗೌಂಡಿ, ಶ್ರವಣಕುಮಾರ ದಾಸರ ಇತರರು ಇದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು