6:04 PM Saturday25 - April 2026
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ಸೊಪ್ಪು ತರಲು ಹೋದ ವೃದ್ಧೆ ಹೇಮಾವತಿ ನದಿಯಲ್ಲಿ ನೀರುಪಾಲು ಮೇಕೆದಾಟು ಕಾವೇರಿ ಸಂಗಮದಲ್ಲಿ ಆಟವಾಡುತ್ತಿದ್ದವರ ಮೇಲೆ ನುಗ್ಗಿಬಂದ ಕಾಡಾನೆ: ಎದ್ದು ಬಿದ್ದೋಡಿದ ಪ್ರವಾಸಿಗರು Kodagu | ವಿರಾಜಪೇಟೆ: 9 ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದ ಅರಣ್ಯ ಇಲಾಖೆ ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: 10 ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ ತುಮಕೂರು: ಒಂದು ವಾರದ ಅಂತರದಲ್ಲಿ 32 ನವಿಲುಗಳು ಸಾವು; ತಾಪಮಾನ ಕಾರಣ? ಬಳ್ಳಾರಿ ಜಿಲ್ಲಾಡಳಿತದಿಂದ ಸರಕಾರಿ ಜಮೀನು ಒತ್ತುವರಿ ವಿರುದ್ಧ 3ನೇ ಹಂತದ ಕಾರ್ಯಾಚರಣೆ Chikkamagaluru | ಸಿಇಟಿ ಬರೆಯಲು ಬಂದ ವಿದ್ಯಾರ್ಥಿನಿಯರಿಗೆ ಶಾಕ್: ಮೂಗುತಿಗೆ ಬಿತ್ತು ಗಮ್… ತಮಿಳುನಾಡಿನಲ್ಲಿ 84% ದಾಟಿದ ಮತದಾನ: ಬಂಗಾಳದಲ್ಲಿ 91% ದಾಖಲೆ ಪ್ರಮಾಣದ ವೋಟಿಂಗ್ ತೀರ್ಥಹಳ್ಳಿ | ಆಗುಂಬೆಯ ಲಕ್ಕುಂದದಲ್ಲಿ ವೃದ್ದೆಯ ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ… ಪಕ್ಷ ಕಟ್ಟಲು ಕಾರ್ಯಕರ್ತರು ಇದ್ದಾರೆ, ಜಮೀರ್ ಜೆಡಿಎಸ್‌ಗೆ ಬರೋ ಅವಶ್ಯಕತೆ ಇಲ್ಲ: ನಿಖಿಲ್…

ಇತ್ತೀಚಿನ ಸುದ್ದಿ

ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ: ದ್ರಾಕ್ಷಿ, ಮಾವಿನ ಹಣ್ಣು ಬೆಳೆಗಾರರಿಗೆ ಭಾರಿ ನಷ್ಟ; ಪರಿಹಾರ ನೀಡಲು ಆಗ್ರಹ

10/04/2022, 23:19

ಬೆಳಗಾವಿ(reporterkarnataka.com): ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಶನಿವಾರ ಸುರಿದ ಅಕಾಲಿಕ ಭಾರೀ ಗಾಳಿ ಮಳೆಗೆ ದ್ರಾಕ್ಷೆ ಹಾಗೂ ಮಾವಿನ ಬೆಳೆಗಾರರಿಗೆ ಅ

ಪಾರ ನಷ್ಟ ಉಂಟಾಗಿದೆ. 

ಗಾಳಿ ರಭಸಕ್ಕೆ ಗಿಡ ಮರಗಳು ಹಾಗೂ ಲೈಟ್ ಕಂಬಗಳು ಉರಳಿವೆ. ಇನ್ನೂ ಐಗಳಿ ಗ್ರಾಮದ ರೈತರು  ಪ್ರಲ್ಹಾದ ಪಾಟೀಲ್ ಅವರು ಐಗಳಿ ಸಂಸ್ಕರಣಾ ಘಟಕದ ಸಮೀಪವಿರುವ ಶೇಡ್ ನಲ್ಲಿ   ಆರು ಎಕರೆಯಲ್ಲಿ ಬೆಳೆಸಿದ್ದ 10 ಟನ್ ದ್ರಾಕ್ಷೆ ಮಳೆಗೆ ಸಂಪೂರ್ಣ ವಾಗಿ ತೊಯ್ದು ನಾಶವಾಗಿವೆ. ಸತ್ಯವ್ವ ಪುಂಡಲೀಕ  ಪೂಜಾರಿ ಅವರು  ಒಂದು ಎಕರೆ ತೋಟದಲ್ಲಿ ಬೆಳೆದ   ಮಾವಿನ  ಹಣ್ಣಿಗಳು ಸಂಪೂರ್ಣ  ಬಿದ್ದು ಸುಮಾರ 2 ಲಕ್ಷ. ರೂ ನಷ್ಟ ಸಂಭವಿಸಿದೆ. ರೈತರು ವರ್ಷವಿಡೀ  ದುಡಿದು ಕೊನೆಯ ಹಂತದಲ್ಲಿ ಅಪಾರವಾದ ನಷ್ಟ ಅನುಭವಿಸುವಂತಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಇದಕ್ಕೆ ಸರ್ಕಾರ  ಕೂಡಲೇ  ಪರಿಹಾರ   ನೀಡಬೇಕು ಎಂದು ರೈತರ ಪರವಾಗಿ ಮಾಜಿ ಶಾಸಕಶಹಜಾಹನ ಡೊಂಗರಗಾವ ಅವರು   ಒತ್ತಾಯಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು