6:54 PM Saturday13 - December 2025
ಬ್ರೇಕಿಂಗ್ ನ್ಯೂಸ್
ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ… ಕೆಪಿಟಿಸಿಎಲ್: 448 ಕಿರಿಯ ಸ್ಟೇಷನ್ ಪರಿಚಾರಕ ಮತ್ತು ಕಿರಿಯ ಪವರ್‌ಮ್ಯಾನ್‌ಗಳ ನೇಮಕ ಭಾರತದಲ್ಲಿ ಎಫ್ ಡಿಐ ಹೆಚ್ಚಳ: ಪ್ರಧಾನಿ ಮೋದಿಗೆ ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ಮೈಸೂರು ಅರಮನೆ ಮುಖ್ಯ ದ್ವಾರದ ಮೇಲ್ಚಾವಣಿ ಕುಸಿತ: ವರಾಹ ಗೇಟ್ ಬಳಿ ಬ್ಯಾರಿಕೇಡ್… ಶಾಲೆಗಳ ಮೂಲಸೌಕರ್ಯಕ್ಕೆ ಕ್ರಮ; ಮಕ್ಕಳ ಶೂ-ಸಾಕ್ಸ್ ಅನುದಾನ ಪೂರ್ಣ ಬಿಡುಗಡೆ: ಸಚಿವ ಮಧು… ಹಂತ ಹಂತವಾಗಿ ಖಾಲಿ ಹುದ್ದೆಗಳ ಭರ್ತಿ: ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿ ಭರವಸೆ

ಇತ್ತೀಚಿನ ಸುದ್ದಿ

ಬೆಳಗಾವಿ: ಭಾರಿ ಗಾಳಿ ಮಳೆ; ಮರ, ಲೈಟ್ ಕಂಬಗಳು ಧರಾಶಾಯಿ; ದ್ರಾಕ್ಷೆ ಬೆಳೆಗೆ ಅಪಾರ ಹಾನಿ, ಕಂಗಾಲಾದ ರೈತರು 

09/04/2022, 23:09

ಬೆಳಗಾವಿ(reporterkarnataka.com): ಜಿಲ್ಲೆಯ ಹಲವೆಡೆ ಶನಿವಾರ ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದ್ದು, ಹಲವು ಮರ ಹಾಗೂ ವಿದ್ಯುತ್ ಕಂಬಗಳು ಧರಾಶಾಯಿಯಾಗಿದೆ.

ಗಾಳಿ ಸಮೇತ ಮಳೆಯಾಗುವುದರಿಂದ ಮುಖ್ಯ ಬಸ್ ನಿಲ್ದಾಣ ಎದುರುಗಡೆ ಇರುವ ಸಿಂಗನಲದ ಕರೆಂಟ್ ಕಂಬಗಳಿಗೆ ಹಾಕಿರುವ ಜಾಹೀರಾತು ಬ್ಯಾನರ್ ಗಳು ಹರಿದು ಹೋಗಿವೆ. ಬ್ಯಾನರ್ ತುಂಡುಗಳು ಗಾಳಿಗೆ ಹಾರಿ ವಿದ್ಯುತ್ ವಯರ್ ಗಳಿಗೆ ತಾಗಿ ಶಾರ್ಟ್ ಸರ್ಕಿಟ್ ಆಗುವ ದೃಶ್ಯ ಕಂಡು ಬಂತು. ಅಲ್ಲಲ್ಲಿ ಮರಗಳು ಉರುಳಿ ಅಂಗಡಿ ಮುಂಗಟ್ಟುಗಳಿಗೆ ಹಾನಿ ಸಂಭವಿಸಿದೆ. 

ಬೆಳಗಾವಿ, ನಿಪ್ಪಾಣಿ, ಅಥಣಿ ಮುಂತಾದ ತಾಲೂಕುಗಳಲ್ಲಿ ಭಾರಿ
ಮಳೆಯಾಗಿದೆ. ಅಥಣಿ ತಾಲೂಕಿನ ಐಗಳಿ,ತೆಲಸಂಗ,ಕೋಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ  ಬಾರಿ ಅಕಾಲಿಕ ಗಾಳಿ ಮಳೆ ಸುರಿದಿದೆ.  ಗಾಳಿ ರಭಸಕ್ಕೆ ಗಿಡ,  ಮರಗಳು  ಹಾಗೂ   ಲೈಟ್ ಕಂಬಗಳು  ಉರಳಿವೆ. ಇನ್ನೂ  ಐಗಳಿ.ತೆಿಲಸಂಗ ಕೋಹಳ್ಳಿ ಗ್ರಾಮದ ರೈತರು ಐಗಳಿ ದ್ರಾಕ್ಷಿ  ಸಂಸ್ಕರಣಾ ಘಟಕದ ಸಮೀಪ ಇರುವ ಶೇಡ್ ಗಳಲ್ಲಿ ತುಂಬಿದ ದ್ರಾಕ್ಷಿ  ಹಣ್ಣುಗಳು ಮಳೆಗೆ ಸಂಪೂರ್ಣ ವಾಗಿ  ತೊಯ್ದು ನಾಶವಾಗಿವೆ.   ರೈತರು ವರ್ಷವಿಡಿ   ದುಡಿದು ಕೊನೆಯ ಹಂತದಲ್ಲಿ ಅಪಾರವಾದ ನಷ್ಟ ಅನುಭವಿಸುವಂತಾಗಿದೆ.


ಇದರಿಂದ ರೈತರು ಕಂಗಾಲ ಆಗಿದ್ದಾರೆ  ಸಾವಿರಾರು ರೂ. ಸಾಲ ಮಾಡಿ ಖರ್ಚು ಮಾಡಿ ಬೆಳೆದ  ಬೆಳೆ  ಕೈಗೆ  ಬಾರದೆ ಇರುವುದು   ರೈತರ ಕಣ್ಣಲ್ಲಿ ನೀರು ತರಿಸಿದೆ  ಇದಕ್ಕೆ ಸರ್ಕಾರ  ಕೂಡಲೇ  ಪರಿಹಾರ   ನೀಡಬೇಕು  ಎಂದು ರೈತರು  ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು